ಆ್ಯಪ್ನಗರ

ಅತ್ತಿಗೆ ನಾದಿನಿಯರ ವಿಶೇಷ ಡಿಚ್ಚಿ ಹಬ್ಬ

ಜಾತ್ರೆ ಎಂದರೆ ಕೇವಲ ರಥೋತ್ಸವ, ಪಲ್ಲಕ್ಕಿ ಉತ್ಸವ, ಮೆರವಣಿಗೆ ಇನ್ನಿತರೆ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ, ಹಿರಿಯೂರು ತಾಲೂಕಿನ ಚಿಕ್ಕೀರಣ್ಣನ ಮಾಳಿಗೆ ಗ್ರಾಮದ ಶ್ರೀ ಅಹೋಬಲ ನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವ ಅತ್ತಿಗೆ ನಾದಿನಿಯರ ಭಾಂದವ್ಯ ಬೆಸೆಯುವ ಡಿಚ್ಚಿ ಹಬ್ಬವಾಗಿದೆ.

Vijaya Karnataka 11 Feb 2019, 5:00 am
ಐಮಂಗಲ: ಜಾತ್ರೆ ಎಂದರೆ ಕೇವಲ ರಥೋತ್ಸವ, ಪಲ್ಲಕ್ಕಿ ಉತ್ಸವ, ಮೆರವಣಿಗೆ ಇನ್ನಿತರೆ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ, ಹಿರಿಯೂರು ತಾಲೂಕಿನ ಚಿಕ್ಕೀರಣ್ಣನ ಮಾಳಿಗೆ ಗ್ರಾಮದ ಶ್ರೀ ಅಹೋಬಲ ನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವ ಅತ್ತಿಗೆ ನಾದಿನಿಯರ ಭಾಂದವ್ಯ ಬೆಸೆಯುವ ಡಿಚ್ಚಿ ಹಬ್ಬವಾಗಿದೆ.
Vijaya Karnataka Web atti is the special ditchi festival of the nadine
ಅತ್ತಿಗೆ ನಾದಿನಿಯರ ವಿಶೇಷ ಡಿಚ್ಚಿ ಹಬ್ಬ


ಈ ಗ್ರಾಮದಿಂದ ರಾಜ್ಯದ ಬೇರೆಡೆಗೆ ವಿವಾಹ ಮಾಡಿಕೊಟ್ಟ ಹೆಣ್ಣು ಮಕ್ಕಳು ಜಾತ್ರೆಯಲ್ಲಿ ಪಾಲ್ಗೊಂಡು ಅತ್ತಿಗೆ ನಾದಿನಿಯರು ಪರಸ್ಪರ ಡಿಚ್ಚಿ ಹೊಡೆದುಕೊಳ್ಳುತ್ತಾರೆ. ಇದಕ್ಕೂ ಮೊದಲು ಟಗರಿನ ಕಾಳಗ ನಡೆಸಲಾಗುತ್ತದೆ. ನಂತರ ಅತ್ತಿಗೆ ನಾದಿನಿಯರ ಡಿಚ್ಚಿಗಾಗಿ ಮನೆ ಮಗಳನ್ನು ಊರಿನ ಹೆಬ್ಬಾಗಿಲಿಂದ ಮೆರವಣಿಗೆ ಮೂಲಕ ದೇವಸ್ಥಾನದ ಆವರಣಕ್ಕೆ ಕರೆತರುತ್ತಾರೆ. ಒಂದು ಬದಿಯಲ್ಲಿ ಅತ್ತಿಗೆಯರು, ಇನ್ನೊಂದು ಬದಿ ನಾದಿನಿಯರು ಎದುರುಗೊಳ್ಳುತ್ತಾರೆ. ನಂತರ ಓಡೋಡಿ ಬಂದು ತಮ್ಮ ಮುಂದಲೆಯಿಂದ ಡಿಚ್ಚಿ ಹೊಡೆದುಕೊಳ್ಳುತ್ತಾರೆ. ಇದು ಅತ್ತಿಗೆ ನಾದಿನಿಯರು ಸಣ್ಣಪುಟ್ಟ ವಿಚಾರಗಳಿಗೆ ಪರಸ್ಪರ ಕಿತ್ತಾಟ, ವೈಮನಸ್ಸಿನಿಂದ ತವರು ಮನೆಯಿಂದ ದೂರ ಉಳಿದಿರುತ್ತಾರೆ. ಇಂಥ ಸಂಬಂಧಗಳ ಬಿರುಕು ದೂರ ಮಾಡಲು ಪೂರ್ವಿಕರು ಅತ್ತಿಗೆ ನಾದಿನಿಯರ ರಾಜಿ ಸೂತ್ರ ಮಾಡಿಸುವ ವಿಶೇಷ ಆಚರಣೆ ಎನ್ನುತ್ತಾರೆ ಗ್ರಾಮದ ವೀರೇಶ್‌, ವಿ.ಸಿ.ರುದ್ರಪ್ಪ, ತಿಪ್ಪೇಸ್ವಾಮಿ, ವೀರನಾಯ್ಕ.

ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದವರೇ ಹೆಚ್ಚಾಗಿದ್ದು, ವರ್ಷಕ್ಕೊಮ್ಮೆ ಶ್ರೀ ಅಹೋಬಲ ನರಸಿಂಹಸ್ವಾಮಿಯ ಜಾತ್ರೆ ನಡೆಯುತ್ತದೆ. ಜಾತ್ರೆ ಕೇವಲ ಧಾರ್ಮಿಕ ಕಾರ್ಯಕ್ಕಷ್ಟೇ ಸೀಮಿತವಾಗದೇ ಅತ್ತಿಗೆ ನಾದಿನಿಯರ ಹಬ್ಬ, ಟಗರು ಕಾಳಗ, ಮಣೇವಿನಂಥ ಮನರಂಜನಾ ಕಾರ್ಯಕ್ರಮಗಳ ಮೂಲಕ ಗ್ರಾಮದಲ್ಲಿ ಭಾಂದವ್ಯ ಬೆಸೆಯುವ ಸಾಂಪ್ರದಾಯವಿದೆ. ಜಾತ್ರೆಗೆ ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ಜನ ಪಾಲ್ಗೊಂಡು ಸಂಭ್ರಮಿಸಿದರು. ಡಿಚ್ಚಿ ಹಬ್ಬದೊಂದಿಗೆ ಮೂರು ದಿನಗಳ ಅದ್ಧೂರಿ ಜಾತ್ರಗೆ ತೆರೆ ಬಿದ್ದಿತು.

ದೇಗುಲ ಲೋಕಾರ್ಪಣೆ: ಸ್ವಾಮಿಯ ನೂತನ ದೇವಾಲಯ ಪ್ರಾರಂಭೋತ್ಸವ ಹಾಗೂ ಜಾತ್ರಾ ಮಹೋತ್ಸವದಲ್ಲಿ ಮೂರು ದಿನ ನಾನಾ ಧಾರ್ಮಿಕ ಕಾರ್ಯಗಳು ನಡೆದವು. ಗ್ರಾಮಕ್ಕೆ ಆದಿರಾಳು ವೀರಾಂಜನೇಯಸ್ವಾಮಿ, ಹುಲಿತೊಟ್ಟಲಿನ ಕರಿಯಮ್ಮ ಮತ್ತು ಭೈರಪ್ಪ, ಗೊಲ್ಲರಹಟ್ಟಿಯ ಚಿತ್ರಲಿಂಗೇಶ್ವರ ಸ್ವಾಮಿ ಹಾಗೂ ವೀರಗಾರ ಸ್ವಾಮಿಯನ್ನು ಕರೆತರಲಾಗಿತ್ತು.

ಗುರುವಾರ ಪುಣ್ಯಾಹ, ನವಗ್ರಹ ಪೂಜೆ, ಗಣಪತಿ ಹೋಮ, ವಾಸ್ತು ಹೋಮದೊಂದಿಗೆ ಜಾತ್ರೆಗೆ ಚಾಲನೆ ನೀಡಲಾಯಿತು. ಶುಕ್ರವಾರ ನೂತನ ದೇವಾಲಯದಲ್ಲಿ ಶ್ರೀ ನರಸಿಂಹ ಸ್ವಾಮಿ, ವೀರಗಾರಸ್ವಾಮಿ, ಶ್ರೀಚಿಕ್ಕೀರ ಅಜ್ಜಯ್ಯ, ಶ್ರೀಚಿಕ್ಕೋಬಳಜ್ಜಯ್ಯ ದೇವರನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಗಣಪತಿ ಹೋಮ, ವಾಸ್ತು ಹೋಮ, ಪೂರ್ಣಾಹುತಿ, ಮಹಾಮಂಗಳಾರತಿಯ ನಂತರ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಸಂಜೆ ದೇವರ ಉತ್ಸವ ನಡೆಸಲಾಯಿತು. ಶನಿವಾರ ಉಂಡೆ ಮಂಡೆ, ಬುಡಕಟ್ಟಿನ ಅಣ್ಣ ತಮ್ಮಂದಿರಿಂದ ಇನ್ನಿತರೇ ಧಾರ್ಮಿಕ ಕಾರ್ಯಕ್ರಮಗಳು, ಮನೋರಂಜನಾ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪಣೆ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ