ಆ್ಯಪ್ನಗರ

ಬಯಲಾಂಜನೇಯಗೆ ವೀಳ್ಯದೆಲೆ, ತಗ್ಗಿನ ಹನುಮಪ್ಪಗೆ ಬೆಣ್ಣೆ ಅಲಂಕಾರ

ಶ್ರಾವಣ ಶನಿವಾರದ ಅಂಗವಾಗಿ ಬಹುತೇಕ ಎಲ್ಲಾ ಆಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

Vijaya Karnataka 19 Aug 2018, 5:00 am
ಚಿತ್ರದುರ್ಗ : ಶ್ರಾವಣ ಶನಿವಾರದ ಅಂಗವಾಗಿ ಬಹುತೇಕ ಎಲ್ಲಾ ಆಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
Vijaya Karnataka Web bean decoration for banyanage bean decoration for lemon hanumappa
ಬಯಲಾಂಜನೇಯಗೆ ವೀಳ್ಯದೆಲೆ, ತಗ್ಗಿನ ಹನುಮಪ್ಪಗೆ ಬೆಣ್ಣೆ ಅಲಂಕಾರ


ಹೊಳಲ್ಕೆರೆ ರಸ್ತೆ ಐದನೇ ಮೈಲಿಯ ಶ್ರೀಬಯಲಾಂಜನೇಯ ಸ್ವಾಮಿಗೆ ವೀಳ್ಯದೆಲೆ ಹಾಗೂ ಹಳದಿ, ಬಿಳಿ, ಕೆಂಪು ಸೇವಂತಿಗೆ ಸೇರಿದಂತೆ ಬಗೆ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ತಗ್ಗಿನ ಹನುಮಪ್ಪನಿಗೆ ಬೆಣ್ಣೆ ಅಲಂಕಾರ


ಚಿತ್ರದುರ್ಗ ನಗರದ ಬುರುಜನಹಟ್ಟಿಯ ತಗ್ಗಿನ ಹನುಮಪ್ಪನಿಗೆ ಮೊದಲ ಶ್ರಾವಣದ ನಿಮಿತ್ತ ಬೆಣ್ಣೆ ಅಲಂಕಾರ ಮಾಡಿದ್ದು ಕಣ್ಮನ ಸೆಳೆಯುತ್ತಿತ್ತು.

ವೀಳ್ಯದೆಲೆ, ಕನಕಾಂಬರ, ಸೇವಂತಿಗೆ, ಗೊರಟೆ ಹೂವು ಸೇರಿದಂತೆ ನಾನಾ ಬಗೆಯ ಹೂವುಗಳಿಂದ ಹನುಮಪ್ಪನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದ ಸಂಜೆವರೆಗೂ ಸುತ್ತಲಿನ ಭಕ್ತರು ಹೂವು, ಹಣ್ಣು, ಕಾಯಿ ಅರ್ಪಿಸಿ ಭಕ್ತಿ ಸಮರ್ಪಿಸಿದರು.

ನಾನಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ನಗರದ ಆನೆಬಾಗಿಲ ಸಮೀಪ ಇರುವ ಪ್ರಸನ್ನ ಆಂಜನೇಯ, ಸುವೃಷ್ಟಿ ಆಂಜನೇಯ, ಬುರುಜನಹಟ್ಟಿ ರಸ್ತೆಯಲ್ಲಿನ ಕೋಟೆ ಆಂಜನೇಯ, ತಮಟಕಲ್ಲಿನ ಆಂಜನೇಯ, ಜೆಸಿಆರ್‌ ಬಡಾವಣೆಯ ಆಂಜನೇಯ ಸ್ವಾಮಿ, ಸ್ಟೇಡಿಯಂ ರಸ್ತೆಯಲ್ಲಿನ ವೀರಾಂಜನೇಯ ಸೇರಿದಂತೆ ಮತ್ತಿತರ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ