ಆ್ಯಪ್ನಗರ

ನನ್ನ ಕಣ್ಣೆದುರಲ್ಲೆ ಬಾಲ್ಯ ವಿವಾಹ | ಹಿಂಬಾಗಿಲಲ್ಲಿ ಮದ್ಯ ಮಾರಾಟ (ಕಿ)

ಸರಣಿ ರಸ್ತೆ ಅಪಘಾತ, ಟ್ರಾಫಿಕ್‌ ಸಮಸ್ಯೆ, ಆಟೋಗಳ ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್‌, ಸ್ಥಳೀಯ ಬೀಟ್‌ ಪೊಲೀಸರು ಕರ್ತವ್ಯಕ್ಕೆ ಬರುತ್ತಿಲ್ಲ, ಆಟೋದವರ ಓವರ್‌ ಲೋಡ್‌ ತಪ್ಪಿಸಬೇಕು...

Vijaya Karnataka 22 Jul 2018, 5:00 am
ಮೊಳಕಾಲ್ಮುರು : ಸರಣಿ ರಸ್ತೆ ಅಪಘಾತ, ಟ್ರಾಫಿಕ್‌ ಸಮಸ್ಯೆ, ಆಟೋಗಳ ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್‌, ಸ್ಥಳೀಯ ಬೀಟ್‌ ಪೊಲೀಸರು ಕರ್ತವ್ಯಕ್ಕೆ ಬರುತ್ತಿಲ್ಲ, ಆಟೋದವರ ಓವರ್‌ ಲೋಡ್‌ ತಪ್ಪಿಸಬೇಕು...
Vijaya Karnataka Web beat police are not coming to duty
ನನ್ನ ಕಣ್ಣೆದುರಲ್ಲೆ ಬಾಲ್ಯ ವಿವಾಹ | ಹಿಂಬಾಗಿಲಲ್ಲಿ ಮದ್ಯ ಮಾರಾಟ (ಕಿ)


ಇದು ತಾಲೂಕಿನ ರಾಂಪುರ ಪೊಲೀಸ್‌ ಠಾಣಾ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ನಾಗರೀಕ ಸಮಿತಿ ಸದಸ್ಯರ ಸಂವಾದ ಸಭೆಯಲ್ಲಿ ನಾಗರೀಕರು ದಾವಣಗೆರೆ ಪೂರ್ವ ವಲಯ ಐಜಿಪಿ ಶರತ್‌ ಚಂದ್ರ ಅವರ ಎದುರಿಟ್ಟ ಸಮಸ್ಯೆಗಳ ಪಟ್ಟಿ.

ನನ್ನ ಕಣ್ಣೆದುರಲ್ಲೆ ಬಾಲ್ಯ ವಿವಾಹ

ಸಂವಾದದಲ್ಲಿ ಭಾಗವಹಿಸಿದ್ದ ಎಸ್‌ಪಿಎಸ್‌ಆರ್‌ ಕಾಲೇಜು ಪ್ರಥಮ ವರ್ಷದ ವಿದ್ಯಾರ್ಥಿನಿ ಪವಿತ್ರಾ ಮಾತನಾಡಿ, ನಮ್ಮದು ಹಾಸನ, ನಾವಿಲ್ಲಿಗೆ ಬಂದು ಎರಡ್ಮುರು ವರ್ಷವಾಗಿದೆ. ಆದರೆ ಇಲ್ಲಿ ಹೆಚ್ಚಿನ ಬಾಲ್ಯ ವಿವಾಹಗಳು ನಡೆಯುತ್ತಿವೆ. ನನ್ನ ಗೆಳೆಯರೇ ನನ್ನ ಕಣ್ಣ ಮುಂದೆ ಮದುವೆಯಾಗಿದ್ದಾರೆ. ಪೋಷಕರಿಗೆ ಮನವೊಲಿಸಲು ಸಾಧ್ಯವಾಗದೆ, ವಿದ್ಯಾಬ್ಯಾಸಕ್ಕೆ ಗುಡ್‌ಬೈ ಹೇಳುವಂತಾಗಿದೆ. ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲಿ ಬಾಲ ಕಾರ್ಮಿಕ ಪದ್ಧತಿ ಜೀವಂತವಾಗಿದೆ. ವರದಕ್ಷಿಣೆ ಪಿಡುಗು ಕಂಡು ಬರುತ್ತದೆ ಎಂದು ತಿಳಿಸಿ ನೋಡುಗರನ್ನು ಹುಬ್ಬೇರಿಸುವಂತೆ ಮಾಡಿ ಗಮನ ಸೆಳೆದು ಅಧಿಕಾರಿಗಳಿಂದ ಶಹಬಾಷ್‌ ಗಿರಿ ಗಿಟ್ಟಿಸಿಕೊಂಡಳು.

ಹಿಂಬಾಗಿಲಲ್ಲಿ ಮದ್ಯ ಮಾರಾಟ

ಮತ್ತೊಬ್ಬ ವಿದ್ಯಾರ್ಥಿನಿ ಅಜಿತಮ್ಮ ಮಾತನಾಡಿ, ಹಬ್ಬ ಹರಿದಿನಗಳಲ್ಲಿ ನೀವು ಬಾರ್‌ ಬಂದ್‌ ಮಾಡ್ತೀರಾ. ಆದರೆ ಬಾರ್‌ನವರು ಹಿಂಬಾಗಿಲಲ್ಲಿ ಮದ್ಯ ಮಾರಾಟ ಮಾಡುತ್ತಾರೆ. ಪೊಲೀಸರು ನೋಡಿದರೂ ನೋಡದಂತೆ ವರ್ತಿಸುತ್ತಾರೆ ಎಂದು ದೂರಿದರೆ, ಮತ್ತೊಬ್ಬ ವಿದ್ಯಾರ್ಥಿನಿ ಕಾವೇರಿ ಮಾತನಾಡಿ, ಮೊದಲು ಬಾರ್‌ಗಳನ್ನು ಕಂಟ್ರೂಲ್‌ ಮಾಡ್ಬೇಕು ಸಾರ್‌ ಎಂದು ಏರುಧ್ವನಿಯಲ್ಲಿಯೇ ಮನವಿ ಮಾಡಿದಳು.

ಸಭೆಯಲ್ಲಿ ಮುಖಂಡರಾದ ಪಿ.ಕೆ.ಕುಮಾರಸ್ವಾಮಿ, ಕೋನಾಪುರ ಭೀಮಲಿಂಗಪ್ಪ, ತಿಮ್ಮಲಾಪುರ ಸುರೇಶ್‌, ಎನ್‌.ಪರಮೇಶ್‌, ಜಿ.ಬಸವರಾಜ್‌, ಗ್ರಾಪಂ ಸದಸ್ಯ ವಿಜಯಕುಮಾರ್‌, ಗ್ರಾಪಂ ಅಧ್ಯಕ್ಷೆ ಸುಜಾತ, ಜಿಪಂ ಮಾಜಿ ಎಚ್‌.ಟಿ.ನಾಗರೆಡ್ಡಿ ವಿದ್ಯಾರ್ಥಿನಿ ಸ್ಪಂದನಾ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಎಲ್ಲಾ ಸಮಸ್ಯೆಗಳನ್ನು ಆಲಿಸಿದ್ದ ಐಜಿಪಿ ಶರತ್‌ ಚಂದ್ರ ಮಾತನಾಡಿ, ಪ್ರತಿ ಗ್ರಾಮದಲ್ಲಿಯೂ ನಾವು ಬಿಟ್‌ ಸಮಿತಿ ರಚಿಸಿದ್ದೇವೆ. ಈ ಸಮಿತಿ ಸದಸ್ಯರು ತಮ್ಮೂರಿನ ಸಮಸ್ಯೆಗಳು, ಅಕ್ರಮ ಚಟುವಟಿಕೆಗಳು, ಮಟ್ಕಾ, ಇಸ್ಪೀಟು, ಮರಳು ದಂಧೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಮಹಿಳೆಯರ ಮೇಲೆ ಪುಂಡ ಪೋಕರಿ, ಪೋಲಿ ಹುಡುಗರಿಂದ ರಸ್ತೆ, ಮನೆ, ಚಿತ್ರಮಂದಿರ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ನಡೆಯುವ ದೌರ್ಜನ್ಯ ಕೂಡಲೇ ಇಲಾಖೆ ಗಮನಕ್ಕೆ ತರಬೇಕು. ಮಹಿಳೆಯರ ರಕ್ಷ ಣೆಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದರು.

ಪೋಷಕರು ಮಕ್ಕಳಿಗೆ ಮೊಬೈಲ್‌ ನೀಡುವುದರಿಂದ ಆನೇಕ ಕಾನೂನು ಬಾಹಿರ ಕೃತ್ಯಗಳು ಹೆಚ್ಚಾಗಿವೆ. ಇದನ್ನು ಪೋಷಕರು ಅರಿತು ಮೊಬೈಲ್‌ಗಳ ಬಳಕೆಗೆ ಬ್ರೇಕ್‌ ಹಾಕಬೇಕು. ಇಂದು ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿನಿಯರು ಸಭೆಯ ಗಮನಕ್ಕೆ ತಂದಿರುವ ನಮ್ಮ ವ್ಯಾಪ್ತಿಗೊಳಪಡುವ ಈ ಭಾಗದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ನಾವು ಬದ್ಧರಾದ್ದೇವೆ ಎಂದು ತಿಳಿಸಿದ್ದಾರೆ.

ಬಾಕ್ಸ್‌:

ವಿಜಯಕ ರ್ನಾಟಕ ವರದಿ ಪ್ರಸ್ತಾಪ


ಸಭೆಯ ಪ್ರಾರಂಭದಲ್ಲಿ ನಿವೃತ್ತ ಬ್ಯಾಂಕ್‌ ವ್ಯವಸ್ಥಾಪಕ ಭೀಮಲಿಂಗಪ್ಪ ಮಾತನಾಡಿ, ಈ ಹಿಂದೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕೋನಾಪುರದ ಸರಸ್ವತಿಗೆ ಹಾಕಿರುವ ಸರಪಳಿ, ಕೊರಡಿನ ಬಗ್ಗೆ ವರದಿ ಬಂದಿದೆ. ಈ ಕುಟುಂಬದವರು ನನಗೆ ಸಂಬಂಧಿಕರಾಗಿದ್ದಾರೆ. ಇವರಿಗೆ ಇಲಾಖೆಯವರು ಹೆಚ್ಚಿನ ನೆರವು ನೀಡಬೇಕು ಹಾಗೂ ಆರ್ಥಿಕವಾಗಿ ಸಹಾಯ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮಕ್ಕೂ ಮುಂಚೆ ಐಜಿಪಿ ಶರತ್‌ ಚಂದ್ರ ಪೊಲೀಸ್‌ ಕಚೇರಿ ಆವರಣದಲ್ಲಿ ಸಸಿಯೊಂದು ನೆಟ್ಟು ನೀರೆರೆದರು.

ಸಭೆಯಲ್ಲಿ ಎಸ್‌ಪಿ ಶ್ರೀನಾಥ್‌ ಜೋಷಿ, ಡಿವೈಎಸ್‌ಪಿ ರೋಷನ್‌ ಜಮೀರ್‌, ಸಿಪಿಐಗಳಾದ ಯಶವಂತ್‌, ತಿಮ್ಮಣ್ಣ, ಪಿಎಸ್‌ಐಗಳಾದ ಕಿರಣ್‌ ಕುಮಾರ್‌, ಬಿ.ಎನ್‌.ಮಂಜುನಾಥ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ