ಆ್ಯಪ್ನಗರ

ಕೋಟೆ ಟಾಪರ್‌ಗೆ ಡಾಕ್ಟರ್‌ ಆಗುವಾಸೆ

ನಗರದ ಪ್ರಸನ್ನ ಚಿತ್ರಮಂದಿರದಲ್ಲಿ ಟಿಕೆಟ್‌ ವಿತರಿಸುವ ಬಿ.ಟಿ. ಪರಶುರಾಮ್‌ ಪುತ್ರ ಪಿ.ಬಿ. ರಿತಿನ್‌ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ.

Vijaya Karnataka 2 May 2018, 10:02 pm
ಚಿತ್ರದುರ್ಗ : ನಗರದ ಪ್ರಸನ್ನ ಚಿತ್ರಮಂದಿರದಲ್ಲಿ ಟಿಕೆಟ್‌ ವಿತರಿಸುವ ಬಿ.ಟಿ. ಪರಶುರಾಮ್‌ ಪುತ್ರ ಪಿ.ಬಿ. ರಿತಿನ್‌ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ.
Vijaya Karnataka Web become a doctor
ಕೋಟೆ ಟಾಪರ್‌ಗೆ ಡಾಕ್ಟರ್‌ ಆಗುವಾಸೆ


ಚಿತ್ರದುರ್ಗ ಎಸ್‌ಆರ್‌ಎಸ್‌ ಪಿಯು ಕಾಲೇಜಿನಲ್ಲಿ ಓದಿದ ರಿತಿನ್‌ 600ಕ್ಕೆ 585(97.5)ಅಂಕ ಪಡೆದು ಕಾಲೇಜು, ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ರಸಾಯನಶಾಸ್ತ್ರ, ಜೀವಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಪಡೆದು, ಗಣಿತ 97, ಭೌತಶಾಸ್ತ್ರ 99, ಕನ್ನಡ 95, ಇಂಗ್ಲಿಷ್‌ 94 ಸೇರಿ ಶೇ.97.5 ರಷ್ಟು ಫಲಿತಾಂಶ ಪಡೆದಿದ್ದಾನೆ.

ಈ ಮೊದಲು 2016ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 623(ಶೇ.98.88) ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 3ನೇ ಸ್ಥಾನ ಪಡೆದಿದ್ದ ರಿತಿನ್‌ ಪಿಯುಸಿಯಲ್ಲಿ ರಾಜ್ಯಕ್ಕೆ ಟಾಪರ್‌ ಆಗುವ ಆಕಾಂಕ್ಷೆ ಹೊಂದಿದ್ದ. ಮುಂದೆ ಮೆಡಿಕಲ್‌ ಓದುವ ಆಸೆ ಹೊಂದಿದ್ದಾನೆ.

ನಗರದ ಮೆದೇಹಳ್ಳಿ ರಸ್ತೆಯ ವಾಸಿ, ಮಧ್ಯಮ ವರ್ಗದ ಬಿ.ಟಿ.ಪರಶುರಾಮ್‌, ಡಿ.ವಿ.ಮಮತ ದಂಪತಿ ಮಗನಾದ ರಿತಿನ್‌ ಮೊದಲಿನಿಂದಲೂ ಓದುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ. ತನ್ನ ಅಕ್ಕ ಕೂಡ ಎಂಬಿಬಿಎಸ್‌ ಮುಗಿಸಿ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ತಾತ್ಕಾಲಿಕ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಕ್ಕನಂತೆ ಡಾಕ್ಟರ್‌ ಆಗಬೇಕೆಂಬ ಕನಸು ಹೊಂದಿರುವ ರಿತಿನ್‌ ಆ ದಿಸೆಯಲ್ಲೇ ಸಾಗುತ್ತಿದ್ದಾನೆ.

ನಮ್ಮ ಮಗಳು ಪಿ.ಬಿ. ಸನಿಹ ಸರಕಾರಿ ಕೋಟಾದಡಿ ಮೆಡಿಕಲ್‌ ಪೂರ್ಣಗೊಳಿಸಿ, ಶಿವಮೊಗ್ಗದಲ್ಲಿ ತರಬೇತಿ ಪಡೆದು ಈಗ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ತಾತ್ಕಾಲಿಕ ಸೇವೆ ಸಲ್ಲಿಸುತ್ತಿದ್ದಾಳೆ. ಮಗನಿಗೆ ಐಐಟಿಯಲ್ಲಿ ಓದಿಸುವ ಅಭಿಲಾಷೆ ಇದೆ. ಇಲ್ಲವಾದಲ್ಲಿ ಅವನ ಅಕ್ಕನಂತೆ ಮೆಡಿಕಲ್‌ ಓದಿಸುತ್ತೇನೆ.

-ಬಿ.ಟಿ.ಪರಶುರಾಮ್‌, ರಿತಿನ್‌ ತಂದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ