ಆ್ಯಪ್ನಗರ

ಬೀರಲಿಂಗೇಶ್ವರ ಸ್ವಾಮಿ ಕೆಂಡೋತ್ಸವ

ತಾಲೂಕಿನ ಕಸಬಾ ಹೋಬಳಿ ಬಾಗೂರು ಗ್ರಾಮದ ಬೀರಲಿಂಗೇಶ್ವರ ಸ್ವಾಮಿ ಕೆಂಡೋತ್ಸವ ಭಾನುವಾರ ಬೆಳಗಿನ ಜಾವ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

Vijaya Karnataka 22 Oct 2018, 5:00 am
ಹೊಸದುರ್ಗ: ತಾಲೂಕಿನ ಕಸಬಾ ಹೋಬಳಿ ಬಾಗೂರು ಗ್ರಾಮದ ಬೀರಲಿಂಗೇಶ್ವರ ಸ್ವಾಮಿ ಕೆಂಡೋತ್ಸವ ಭಾನುವಾರ ಬೆಳಗಿನ ಜಾವ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
Vijaya Karnataka Web beerlingeswara swamy kendotsava
ಬೀರಲಿಂಗೇಶ್ವರ ಸ್ವಾಮಿ ಕೆಂಡೋತ್ಸವ


ದಸರಾ ಹಬ್ಬದ ಅಂಗವಾಗಿ ವಿಶೇಷವಾಗಿ ಕಳೆದ ಒಂಭತ್ತು ದಿನಗಳಿಂದ ಬೀರಲಿಂಗೇಶ್ವರ ಚರಿತ್ರೆ ಪಠಣ ನಡೆದವು. ಪ್ರತಿನಿತ್ಯ ವಿಶೇಷ ಪೂಜೆ ಧಾರ್ಮಿಕ ಕಾರ್ಯಗಳು ಜರುಗಿದವು. ಸಂಜೆ ನಡೆದ ಅಂಬಿನೋತ್ಸವದಲ್ಲಿ ಈ ಭಾಗದಲ್ಲಿ ಅತಿ ಹೆಚ್ಚು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.

ಕೆಂಡೋತ್ಸವ: ಬಾಗೂರು ಬೀರಲಿಂಗೇಶ್ವರ ಸ್ವಾಮಿ ದಸರಾ ಹಬ್ಬದಲ್ಲಿ ವಿಶೇಷ ಆಕರ್ಷಣೆ ಆಗಿರುವುದು ಕೆಂಡದ ಸೇವೆ. ಭಕ್ತರು ಹರಕೆ ತೀರಿಸಲು ಕೆಂಡ ಹಾಯುವ ಮೂಲಕ ಪಾಲ್ಗೊಳ್ಳುವುದು ಇಲ್ಲಿನ ವಿಶೇಷ. ನಾನಾ ಜಾತಿ ಮರಗಳನ್ನು ಒಂದಡೆ ತಂದು ಹಾಕಿದ್ದ ಕೆಂಡ ಹಾಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.

ಬೀರಲಿಂಗೇಶ್ವರ ಸ್ವಾಮಿ, ಓರುಗಲ್ಲಮ್ಮ ದೇವಿ ಹಾಗೂ ಗುಳ್ಳಮ್ಮ ದೇವಿ ಸಮೂಹ ಕೆಂಡದಾರ್ಚನೆಯಲ್ಲಿ ಪಾಲ್ಗೊಂಡಿದ್ದವು. ಹರಕೆ ಹೊತ್ತವರು, ಹರಕೆ ತೀರಿದವರು ಜತೆಯಲ್ಲಿ ಸಾಕಷ್ಟು ಭಕ್ತ ಸಮೂಹ ದೈವ ಪ್ರೇರಣೆಯಿಂದ ಒಳಿತಾಗಲೆಂದು ಗಣಾಧೀಶರ ಸಮ್ಮುಖದಲ್ಲಿ ಕೆಂಡದ ಸೇವೆಯಲ್ಲಿ ಪಾಲ್ಗೊಂಡು ದೇವರ ಕೃಪಗೆ ಪಾತ್ರರಾದರು. ಮಕ್ಕಳೆನ್ನದೆ ಯುವಕರು ಹಿರಿಯರು ಈ ಮುಳ್ಳಿನ ಸೇವೆಯಲ್ಲಿ ಪಾಲ್ಗೊಂಡರು.

ಕೆಂಡೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ದಸರಾ ಮಹೋತ್ಸವ ಎಲ್ಲ ಕಾರ್ಯಗಳಲ್ಲಿ ಯುವಕರು ಪಾಲ್ಗೊಂಡು ಹಬ್ಬದ ಯಶಸ್ವಿಗೆ ಶ್ರಮಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ