ಆ್ಯಪ್ನಗರ

ತಾಲೂಕು ಕೆರೆಗಳಿಗೆ ಭದ್ರಾ ನೀರು ಹರಿಸಿ

ಮರಳು ಗಣಿಗಾರಿಕೆ ನಿಲ್ಲಿಸಬೇಕು, ಭದ್ರಾ ನಾಲೆಯಿಂದ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸಬೇಕು, ಸಮಗ್ರ ನೀರಾವರಿ ಆಗುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

Vijaya Karnataka 29 Jan 2019, 5:00 am
ಹೊಸದುರ್ಗ : ಮರಳು ಗಣಿಗಾರಿಕೆ ನಿಲ್ಲಿಸಬೇಕು, ಭದ್ರಾ ನಾಲೆಯಿಂದ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸಬೇಕು, ಸಮಗ್ರ ನೀರಾವರಿ ಆಗುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
Vijaya Karnataka Web bhadra water to the taluk lakes
ತಾಲೂಕು ಕೆರೆಗಳಿಗೆ ಭದ್ರಾ ನೀರು ಹರಿಸಿ


ಸರಕಾರ ವೇದಾವತಿ ನದಿಯಲ್ಲಿ ಮರಳು ಎತ್ತಲು ಅವಕಾಶ ನೀಡಿರುವುದರಿಂದ ಟೆಂಡರ್‌ದಾರರು ನಿಯಮ ಮೀರಿ, ಅವೈಜ್ಞಾನಿಕವಾಗಿ ಮರಳು ಎತ್ತಲಾಗುತ್ತಿದೆ. ಸುಮಾರು 30 ಅಡಿ ಅಳದವರೆಗೂ ಯಂತ್ರ ಬಳಸಿ ಮರಳು ಬಗೆಯಲಾಗುತ್ತಿದೆ. ಇದರಿಂದ ನದಿ ಪಾತ್ರದಲ್ಲಿನ ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿವೆ. ಈ ಕೂಡಲೇ ತಾಲೂಕಿನಾದ್ಯಂತ ಮರಳುಗಾರಿಕೆ ಸಂಪೂರ್ಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ತಾಲೂಕಿನಲ್ಲಿ ಕಳೆದ ಆರೇಳು ವರ್ಷಗಳಿಂದ ಮಳೆಯಾಗದೇ ತೀವ್ರ ಬರಗಾಲ ಎದುರಿಸುತ್ತಿದೆ. ನೀರಿಲ್ಲದೇ ರೈತರ ತೋಟಗಳು ಒಣಗಿ ಹೋಗುತ್ತಿವೆ. ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಭದ್ರಾ ನೀರು ಹರಿಸುತ್ತೇವೆಂದು ರೈತರ ಬದುಕಿನ ಜತೆ ಚೆಲ್ಲಾಟವಾಡುತ್ತಿದ್ದಾರೆ. ಆದಷ್ಟು ಬೇಗ ಭದ್ರಾ ನೀರು ಹರಿಸಿ, ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವ ಕೆಲಸ ಮಾಡಬೇಕು. ಎಲ್ಲ ಗ್ರಾಮಗಳಿಗೂ ಬಸ್‌ ಸೌಕರ್ಯ ಕಲ್ಪಿಸಬೇಕು. ರೈತರ ಕೃಷಿ ಅವಲಂಬಿತ ಎಲ್ಲ ಸಾಲಗಳು ರದ್ದಾಗಬೇಕು. ರೈತರಿಗೆ ವೃದ್ಧಾಪ್ಯ ವೇತನ ಜಾರಿಯಾಗಬೇಕು. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಹಗಲಿನ ವೇಳೆ 6 ತಾಸು ವಿದ್ಯುತ್‌ ನೀಡಬೇಕು. ಕೃಷಿ ಆಧಾರಿತ ಸಾಲಗಳಿಗೆ ಶೂರಿಟಿ ಇಲ್ಲದ ಸಾಲ ಕೊಡುವ ನೀತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಈ ವೇಳೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟ ಸಿದ್ದವೀರಪ್ಪ, ಜಿಲ್ಲಾ ಕಾರ್ಯಧ್ಯಕ್ಷ ಬಯಲಪ್ಪ, ಜಿಲ್ಲಾ ಸಲಹಾ ಸಮಿತಿ ಸದಸ್ಯ ಎಂ.ಎಸ್‌.ಕರಿಸಿದ್ದಯ್ಯ, ಹೊಸದುರ್ಗ ತಾಲೂಕು ಅಧ್ಯಕ್ಷ ರಮೇಶ್‌, ಹೊಳಲ್ಕೆರೆ ತಾಲೂಕು ಅಧ್ಯಕ್ಷ ಬಸವರಾಜಪ್ಪ, ರೈತ ಮುಖಂಡರಾದ ಲಿಂಗರಾಜು, ಮಾರಬಘಟ್ಟ ಲಿಂಗರಾಜಯ್ಯ, ಕೊರಟಿಕೆರೆ ದೇವೇಂದ್ರಪ್ಪ, ಅರಲಹಳ್ಳಿ ಬೋರೇಶ್‌ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ