ಆ್ಯಪ್ನಗರ

ಜಿಪಂನಲ್ಲಿ ಕಾಗದ ಬಳಕೆಗೆ ಬ್ರೇಕ್‌

ಚಿತ್ರದುರ್ಗ ಜಿಪಂ ಕಚೇರಿಯನ್ನು ಕಾಗದಮುಕ್ತ(ಇ-ಆಫೀಸ್‌)ಕಚೇರಿ ಮಾಡುವ ಮೂಲಕ ಜಿಪಂ ಆಡಳಿತಕ್ಕೆ ಹೊಸ ಆಯಾಮ ನೀಡಲು ಜಿಪಂ ಸಿಇಒ ಸಿ.ಸತ್ಯಭಾಮ ಮುಂದಾಗಿದ್ದಾರೆ. ಈಗಾಗಲೇ ಈ ನಿಟ್ಟಿನಲ್ಲಿ ಮೊದಲ ಹಂತದ ಸಿದ್ಧತೆಗಳು ನಡೆದಿವೆ.

Vijaya Karnataka 31 May 2019, 5:00 am
ಚಿತ್ರದುರ್ಗ : ಚಿತ್ರದುರ್ಗ ಜಿಪಂ ಕಚೇರಿಯನ್ನು ಕಾಗದಮುಕ್ತ(ಇ-ಆಫೀಸ್‌)ಕಚೇರಿ ಮಾಡುವ ಮೂಲಕ ಜಿಪಂ ಆಡಳಿತಕ್ಕೆ ಹೊಸ ಆಯಾಮ ನೀಡಲು ಜಿಪಂ ಸಿಇಒ ಸಿ.ಸತ್ಯಭಾಮ ಮುಂದಾಗಿದ್ದಾರೆ. ಈಗಾಗಲೇ ಈ ನಿಟ್ಟಿನಲ್ಲಿ ಮೊದಲ ಹಂತದ ಸಿದ್ಧತೆಗಳು ನಡೆದಿವೆ.
Vijaya Karnataka Web break for paper use in the zipper
ಜಿಪಂನಲ್ಲಿ ಕಾಗದ ಬಳಕೆಗೆ ಬ್ರೇಕ್‌


ಮೊದಲ ಹಂತದಲ್ಲಿ ಜಿಲ್ಲಾ ಪಂಚಾಯಿತಿ ಕಾಗದ ಮುಕ್ತ ಇ-ಕಚೇರಿಯಾಗಿ ಬದಲಾಗಲಿದ್ದು ಇದರ ಯಶಸ್ವಿ ಅನುಷ್ಠಾನದ ನಂತರ ತಾಪಂ ಹಾಗೂ ಗ್ರಾಪಂ ಹಂತಕ್ಕೂ ಇ-ಕಚೇರಿ ಪರಿಕಲ್ಪನೆ ಅಳವಡಿಸುವ ಉದ್ದೇಶ ಹೊಂದಲಾಗಿದೆ.

ಕಡತಗಳ ಡಿಜಿಟಲೀಕರಣ:

ಇ-ಕಚೇರಿ ಪರಿಕಲ್ಪನೆ ಸಾಕಾರಗೊಳ್ಳಬೇಕಾದರೆ ಮೊದಲು ಇಡೀ ಜಿಪಂನ ಎಲ್ಲ ಕಡತಗಳನ್ನು ಮೊದಲು ಸ್ಕ್ಯಾ‌ನ್‌ ಮಾಡಿ ಡಿಜಿಟಲೀಕರಿಸಬೇಕು. ಅಷ್ಟೂ ದಾಖಲೆಗಳನ್ನು ಎನ್‌ಐಸಿಯ ಸರ್ವರ್‌ನಲ್ಲಿ ಸೇವ್‌ ಮಾಡಿ, ಸಂಗ್ರಹಿಸಲಾಗುತ್ತದೆ. ಆಗ ಕಾಗದದ ಕಡತಗಳ ನಿರ್ವಹಣೆಯ ಅಗತ್ಯವೇ ಇಲ್ಲದೇ ಡಿಜಿಟಲ್‌ ಸ್ವರೂಪದಲ್ಲಿ ಆಡಳಿತಾತ್ಮಕ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತದೆ.

ಇದೊಂದು ಪರಿಸರ ಸ್ನೇಹಿ ಕ್ರಮವಾಗಲಿದ್ದುಕಚೇರಿಯಲ್ಲಿ ಕಾಗದದ ಬಳಕೆಗೆ ಬ್ರೇಕ್‌ ಬೀಳಲಿದೆ. ಕಡತ ವಿಲೇವಾರಿ ಟೇಬಲ್‌ನಿಂದ ಟೇಬಲ್‌ಗೆ ವಿನಿಮಯ ಆಗುವ ಬದಲು ಡಿಜಿಟಲ್‌ ಸ್ವರೂಪದಲ್ಲೇ ವಿನಿಮಯ ಆಗಲಿದೆ. ಸಂಬಂಧಪಟ್ಟ ಅಧಿಕಾರಿ ತನಗೆ ಕೊಟ್ಟಿರುವ ಪಾಸ್‌ವರ್ಡ್‌ ಮೂಲಕ ಕಡತ ವೀಕ್ಷಿಸಿ, ತನ್ನ ಟಿಪ್ಪಣಿ, ಅಡಿ ಟಿಪ್ಪಣಿ ಮೂಲಕ ಅದನ್ನು ಮುಂದಿನ ಹಂತಕ್ಕೆ ಕಳುಹಿಸಬೇಕಿರುತ್ತದೆ. ಅರ್ಜಿದಾರರಿಗೆ ಅರ್ಜಿ ಸ್ವೀಕೃತಿಯಾದ ಕುರಿತು ಎಸ್‌ಎಂಎಸ್‌ ಕಳುಹಿಸುವ ವ್ಯವಸ್ಥೆ ಮಾಡುವ ಚಿಂತನೆ ಸಹಾ ಇದೆ.

ವಿಳಂಬಕ್ಕೆ ಅವಕಾಶ ಇಲ್ಲ:

ಕಾಗದ ಮುಕ್ತವಾದ ಇ-ಕಚೇರಿ ಆಡಳಿತದ ಮತ್ತೊಂದು ಅನುಕೂಲವೆಂದರೆ, ಕಡತಗಳ ಯಾವ ಹಂತದಲ್ಲಿ ನಿಲುಗಡೆಯಾಗಿವೆ ಎಂಬುದರ ಮಾಹಿತಿ ಕರಾರುವಕ್ಕಾಗಿ ಸಿಗಲಿದೆ. ಕಡತ ಸಕಾಲದಲ್ಲಿ ವಿಲೇ ಮಾಡದೇ ವಿಳಂಬ ಮಾಡಿದಲ್ಲಿ ಅದರ ಹೊಣೆಗಾರಿಕೆ ಸಂಬಂಧಪಟ್ಟ ಅಧಿಕಾರಿಗಳೇ ಹೊರಬೇಕಾಗುತ್ತದೆ. ಹಾಗಾಗಿ, ವಿನಾಕಾರಣ ಕಡತ ವಿಲೇವಾರಿಯಲ್ಲಿ ಆಗುವ ವಿಳಂಬಕ್ಕೆ ಬ್ರೇಕ್‌ ಬೀಳಲಿದೆ.

ಸಾರ್ವಜನಿಕರಿಗೂ ಅನುಕೂಲ:

ಜಿಪಂ ಇ-ಕಚೇರಿಯಾದ ನಂತರ ಸಾರ್ವಜನಿಕರು ಸಲ್ಲಿಸುವ ದೂರು, ಅರ್ಜಿ, ಮನವಿಗಳನ್ನು ಸಹ ಡಿಜಿಟಲೀಕರಣ ಮಾಡಿ, ಸಂಬಂಧಪಟ್ಟ ಅಧಿಕಾರಿಗೆ ಕಳುಹಿಸಲಾಗುವುದು. ಅರ್ಜಿದಾರನಿಂದ ಸ್ವೀಕರಿಸುವ ಹಂತದಿಂದ ವಿಲೇಯಾಗುವ ತನಕ ಡಿಜಿಟಲ್‌ ಸ್ವರೂಪದಲ್ಲೇ ವಿನಿಮಯ ಆಗಲಿದೆ.

**

ಕೋಟ್‌

ಜಿಪಂ ಕಚೇರಿಯನ್ನು ಪರಿಸರ ಸ್ನೇಹಿಯಾಗಿ, ತ್ವರಿತ ಗತಿಯಲ್ಲಿ ಆಡಳಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಇ-ಕಚೇರಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಕಡತಗಳ ಡಿಜಿಟಲೀಕರಣ ಸೇರಿದಂತೆ ಇಡೀ ಪ್ರಕ್ರಿಯೆ ಮುಗಿಸಲು ಒಂದಷ್ಟು ಕಾಲಾವಕಾಶಬೇಕು. ಮಾದರಿ ಇ-ಕಚೇರಿಯಾಗಿ ರೂಪಿಸುವ ಉದ್ದೇಶವಿದೆ.

- ಸಿ.ಸತ್ಯಭಾಮ, ಜಿಪಂ ಸಿಇಒ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ