ಆ್ಯಪ್ನಗರ

ಲಂಚ: ಆರೋಪಿಗೆ ಆರು ತಿಂಗಳು ಜೈಲು

ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 6 ತಿಂಗಳು ಜೈಲು ಶಿಕ್ಷೆ, 10 ಸಾವಿರ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ಸೋಮವಾರ ತೀರ್ಪು ನೀಡಿದ್ದಾರೆ.

Vijaya Karnataka 25 Sep 2018, 8:35 pm
ಚಿತ್ರದುರ್ಗ: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 6 ತಿಂಗಳು ಜೈಲು ಶಿಕ್ಷೆ, 10 ಸಾವಿರ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ಸೋಮವಾರ ತೀರ್ಪು ನೀಡಿದ್ದಾರೆ.
Vijaya Karnataka Web bribery the convict is sentenced to six months in jail
ಲಂಚ: ಆರೋಪಿಗೆ ಆರು ತಿಂಗಳು ಜೈಲು


ಚಿತ್ರದುರ್ಗ ತಾಲೂಕಿನ ಮದಕರಿಪುರ ಗ್ರಾಪಂ ಕಾರ್ಯದರ್ಶಿ ಕಲ್ಲೇಶಪ್ಪ ಶಿಕ್ಷೆಗೊಳಗಾದವ. ಚಿತ್ರದುರ್ಗ ನಗರದ ಚಳ್ಳಕೆರೆ ರಸ್ತೆಯಲ್ಲಿನ ವೆಂಕಟೇಶ್ವರ ಬಡಾವಣೆ ವಾಸಿ ಗಿಡ್ಡಿ ಮೆಹಬೂಬಿ ಕೋಂ ಹುಸೇನ್‌ ಪೀರ್‌ ಅವರು ತಮ್ಮ ನಿವೇಶನದಲ್ಲಿ ಮನೆ ನಿರ್ಮಿಸಿಕೊಳ್ಳಲು ಪರವಾನಗಿ ಪಡೆಯಲು ಮದಕರಿಪುರ ಗ್ರಾಪಂಗೆ 2011 ಏಪ್ರಿಲ್‌ 21ರಂದು ಅರ್ಜಿ ಸಲ್ಲಿಸಿದ್ದರು. ಪಂಚಾಯಿತಿ ಕಾರ್ಯದರ್ಶಿ ಕಲ್ಲೇಶಪ್ಪ ಮನೆ ಕಟ್ಟಲು ಲೈಸನ್ಸ್‌ಗಾಗಿ 500 ರೂ. ರಸೀದಿ ಹಾಕಬೇಕು ಮತ್ತು ಆಫೀಸಿನಲ್ಲಿ ಇತರೆ ಖರ್ಚು ಇರುತ್ತದೆ. ಅದಕ್ಕಾಗಿ 6 ಸಾವಿರ ಕೊಡಬೇಕು ಎಂದು ಕೇಳಿದ್ದರು.

ಲಂಚ ಕೊಡಲು ಇಷ್ಟವಿಲ್ಲದ ಗಿಡ್ಡಿ ಮೆಹಬೂಬಿ 2011 ಏಪ್ರಿಲ್‌ 23ರಂದು ಲೋಕಾಯುಕ್ತ ಪೊಲೀಸ್‌ ಠಾಣೆಗೆ ಭೇಟಿ ನೀಡಿ ತನಿಖಾಧಿಕಾರಿಗೆ ಪಂಚಾಯಿತಿ ಕಾರ್ಯದರ್ಶಿ ಲಂಚ ಕೇಳುತ್ತಿರುವ ಕುರಿತು ಮಾಹಿತಿ ನೀಡಿದ್ದರು. 2011 ಏಪ್ರಿಲ್‌ 25ರಂದು ಪಿರಾರ‍ಯದಿಯಿಂದ ಆರೋಪಿ ಕಲ್ಲೇಶಪ್ಪ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ, ತನಿಖೆಕೈಗೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶರು ಆರು ತಿಂಗಳು ಜೈಲು, ಹತ್ತು ಸಾವಿರ ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ತಪ್ಪಿದಲ್ಲಿ 30 ದಿನಗಳ ಕಾಲ ಶಿಕ್ಷೆ ಮತ್ತು ಕಲಂ 13(2)ಕ್ಕೆ ಒಂದು ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಚಿತ್ರದುರ್ಗ ಲೋಕಾಯುಕ್ತ ಪೊಲೀಸ್‌ ಪರವಾಗಿ ವಿಶೇಷ ಅಭಿಯೋಜಕ ಬಿ.ಮಲ್ಲೇಶಪ್ಪ ವಿಚಾರಣೆ ನಡೆಸಿ ವಾದ ಮಂಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ