ಆ್ಯಪ್ನಗರ

ಶಾಲೆಯಲ್ಲಿ ಉತ್ತಮ ಪರಿಸರ ನಿರ್ಮಿಸಿ

ಪರಿಸರ ನಮಗೆ ಕೊಡುಗೆಯಾಗಿ ಬಂದಿದೆ ಹೊರತು ಸ್ವಂತಕ್ಕಲ್ಲ. ಇದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿ ಮುಂದಿನ ಪೀಳಿಗೆಗೆ ನೀಡಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ಹೇಳಿದರು.

Aanniya Vij | Vijaya Karnataka 3 Feb 2019, 5:00 am
ಚಿತ್ರದುರ್ಗ : ಪರಿಸರ ನಮಗೆ ಕೊಡುಗೆಯಾಗಿ ಬಂದಿದೆ ಹೊರತು ಸ್ವಂತಕ್ಕಲ್ಲ. ಇದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿ ಮುಂದಿನ ಪೀಳಿಗೆಗೆ ನೀಡಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ಹೇಳಿದರು.
Vijaya Karnataka Web build a good environment in school
ಶಾಲೆಯಲ್ಲಿ ಉತ್ತಮ ಪರಿಸರ ನಿರ್ಮಿಸಿ


ನಗರದ ಕ್ರೀಡಾ ಸಭಾಂಗಣದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಶಿಕ್ಷ Üಣ ತರಬೇತಿ ಸಂಸ್ಥೆ, ಸಾರ್ವಜನಿಕ ಶಿಕ್ಷ ಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಪರಿಸರ ತಜ್ಞರ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಪರಿಸರಮಿತ್ರ ಶಾಲೆ 2018-19ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಪರಿಸರ ಹಾಳಾದರೆ ಎಲ್ಲ ಹಾಳಾದಂತೆ. ಪರಿಸರ ಎಂದರೆ ಅದು ಬರಿ ಮಾನವರಿಗೆ ಮಾತ್ರ ಸಂಬಂಧಪಟ್ಟಿಲ್ಲ, ಎಲ್ಲ ಪ್ರಾಣಿಗಳಿಗೂ ಸಹ ಸಂಬಂಧಪಟ್ಟಿದೆ. ಆದರೆ ನಾವು ಸ್ವಾರ್ಥದಿಂದ ಪರಿಸರ ನಾಶ ಮಾಡುತ್ತಿದೇವೆ. ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ಇಂಥ ಕಾರ್ಯಕ್ರಮ ಆಯೋಜಿಸಲಾಗಿದೆ. ಶಾಲೆಯಲ್ಲಿ ಪರಿಸರ ಬೆಳೆಸುವ ಮೂಲಕ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕಿದೆ ಎಂದರು.

ವಿಶ್ವದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದೆ ಹೊರತು ಇರುವ ಭೂಮಿ ಬೆಳೆಯುತ್ತಿಲ್ಲ. ಇರುವ ಭೂಮಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮುಂದಿನ ಜನಾಂಗಕ್ಕೆ ನೀಡಬೇಕಿದೆ. ಗಣಿಗಾರಿಕೆಯಿಂದ ಪರಿಸರ ಪೂರ್ಣ ಪ್ರಮಾಣದಲ್ಲಿ ಹಾಳಾಗುತ್ತಿದೆ. ನ್ಯಾಯಾಲಯ ಇದರ ಬಗ್ಗೆ ಕಾಳಜಿ ವಹಿಸಿದಾಗ ಗಣಿಗಾರಿಕೆ ನಿಂತಿದೆ. ಇಲ್ಲದಿದ್ದರೆ ಭೂಮಿಯನ್ನು ಪೂರ್ಣ ಪ್ರಮಾಣದಲ್ಲಿ ಬರಿದು ಮಾಡಲಾಗುತ್ತಿತ್ತು ಎಂದು ವಿಷಾದಿಸಿದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿಂಡಲಕೊಪ್ಪ, ಡಿಡಿಪಿಐ ಅಥೋನಿ, ಡಯಟ್‌ನ ರಮೇಶ್‌, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಕುಮಾರ್‌, ಡಯಟ್‌ ಉಪನಿರ್ದೇಶಕ ಕೋದಂಡರಾಮ, ಪರಿಸರವಾದಿ ಸ್ವಾಮಿ ಮತ್ತಿತರರಿದ್ದರು.


ಪ್ರಮಾಣ ಪತ್ರ ವಿತರಣೆ
ಕಾರ್ಯಕ್ರಮದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಪರಿಸರಮಿತ್ರ ಪ್ರಶಸ್ತಿ ಪಡೆದ ಶಾಲೆಗೆ 30 ಸಾವಿರ ರೂ., ಪ್ರಮಾಣ ಪತ್ರ ಮತ್ತು ಫಲಕ ವಿತರಣೆ ಮಾಡಲಾಯಿತು. 10 ಶಾಲೆಗಳನ್ನು ಹಸಿರು ಶಾಲೆ ಮತ್ತು 10 ಶಾಲೆಗಳನ್ನು ಹಳದಿ ಶಾಲೆಗಳನ್ನಾಗಿ ಗುರುತಿಸಿ ಪ್ರಮಾಣ ಪತ್ರ, ಫಲಕ ನೀಡಲಾಯಿತು.

ಪ್ಲಾಸ್ಟಿಕ್‌ ಬಳಕೆ ನಿಲ್ಲಿಸೋಣ
ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಬಳಕೆ ಹೆಚ್ಚಾಗಿದೆ. ಪ್ರತಿದಿನ ಲೋಡಗಟ್ಟಲೆ ಪ್ಲಾಸ್ಟಿಕ್‌ ಕಸದ ರೂಪದಲ್ಲಿ ಬೀಳುತ್ತಿದೆ. ಇದರಿಂದ ಭೂಮಿ ನಾಶದ ಅಂಚಿನಲ್ಲಿದೆ. ಒಂದು ಪ್ಲಾಸ್ಟಿಕ್‌ ಕೊಳೆಯಲು ವರ್ಷಗಟ್ಟಲೆ ಸಮಯ ಬೇಕಾಗುತ್ತದೆ. ಆದರೆ ಇದರ ಬಗ್ಗೆ ಗಮನ ನೀಡದೇ ನಾವು ಎಲ್ಲದಕ್ಕೂ ಪ್ಲಾಸ್ಟಿಕ್‌ ಬಳಕೆ ಮಾಡುತ್ತಿದ್ದೇವೆ. ಇನ್ನೂ ಮುಂದಾದರು ಪ್ಲಾಸ್ಟಿಕ್‌ ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸುವುದರ ಮೂಲಕ ಭೂಮಿ ಕಾಪಾಡಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ