ಆ್ಯಪ್ನಗರ

ಸಂಭ್ರಮದ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ

ತಾಲೂಕಿನ ಕೆಲ್ಲೋಡು ಗ್ರಾಮದ ಶ್ರೀಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

Vijaya Karnataka 20 Apr 2019, 5:00 am
ಹೊಸದುರ್ಗ : ತಾಲೂಕಿನ ಕೆಲ್ಲೋಡು ಗ್ರಾಮದ ಶ್ರೀಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
Vijaya Karnataka Web celebrate anjaneyaswamy brahmarathotsava
ಸಂಭ್ರಮದ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ


ತಾಲೂಕಿನ ನಾನಾ ಗ್ರಾಮಗಳಿಂದ ಬಂದಿದ್ದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿ ಕೃಪೆಗೆ ಪಾತ್ರರಾದರು. ರಥವನ್ನು ನಾನಾ ಬಣ್ಣ ಬಣ್ಣದ ಬಟ್ಟೆಗಳಿಂದ ಹಾಗೂ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಹಾಗೆ ದೊಡ್ಡ ಹೂವಿನ ಹಾರಗಳಿಂದ ಅಲಂಕಾರಗೊಂಡಿದ್ದ ರಥದಲ್ಲಿ ಶ್ರೀಸ್ವಾಮಿ ಪ್ರತಿಷ್ಠಾಪಿಸಲಾಯಿತು.

ನಂತರ ರಥೋತ್ಸವದಲ್ಲಿ ಭಾಗಿಯಾಗಿದ್ದ ಸಾವಿರಾರು ಭಕ್ತರು ರಥ ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಗ್ರಾಮದ ದೇವಸ್ಥಾನದಿಂದ ಗ್ರಾಪಂವರೆಗೂ ರಥ ಸಾಗಿಬಂತು. ನಂತರ ಪಾನಕ ಗಾಡಿ ಉತ್ಸವ ನಡೆಸಲಾಯಿತು. ಸಂಜೆ ಮಂಗಳವಾದ್ಯಗಳೊಂದಿಗೆ ಕೆಲ್ಲೋಡಿನ ಶ್ರೀಆಂಜನೇಯಸ್ವಾಮಿ, ಶ್ರೀಕರಿಸಿದ್ದೇಶ್ವರಸ್ವಾಮಿ ಹಾಗೂ ಅತಿಘಟ್ಟದ ಆಂಜನೇಯಸ್ವಾಮಿ ಗೊರವಿಗೊಂಡನಹಳ್ಳಿಯ ತಿಮ್ಮಪ್ಪಸ್ವಾಮಿ ದೇವರ ಕೂಡುಭೇಟಿ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ನಡೆದು ಪುನಃ ಆಂಜನೇಯಸ್ವಾಮಿಯನ್ನು ದೇವಸ್ಥಾನಕ್ಕೆ ಕರೆತರಲಾಯಿತು.

ಕಳೆದ ಎರಡು ದಿನಗಳಿಂದ ದೇವಾಲಯದಲ್ಲಿ ವಿಶೇಷ ಪೂಜೆಗಳು, ಧಾರ್ಮಿಕ ಕಾರ್ಯ ನಡೆದಿದ್ದವು. ಬುಧವಾರ ಸಂಜೆ 4.30ಕ್ಕೆ ಧ್ವಜಾರೋಹಣ ನೆರವೇರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ರಾತ್ರಿ ಮೊದಲನೇ ಮಧುವಣಿಗೆ ಶಾಸ್ತ್ರ ಹಾಗೂ ಗುರುವಾರದಂದು ದ್ವಿತೀಯ ಮಧುವಣಿಗೆ ಶಾಸ್ತ್ರ ಜರುಗಿಸಲಾಗಿತ್ತು.

ಶುಕ್ರವಾರ ರಾತ್ರಿ ಗ್ರಾಮದಲ್ಲಿ ಶ್ರೀಮಾರುತಿ ಕೃಪಾ ಪೋಷಿತಾ ನಾಟಕ ಮಂಡಳಿ ಕೆಲ್ಲೋಡು ವತಿಯಿಂದ ಕುರುಕ್ಷೇತ್ರ ಅರ್ಥಾತ್‌ ದುರ್ಯೋಧನನ ಗರ್ವ ಭಂಗ ಎಂಬ ಸಂಗೀತ ಪೌರಾಣಿಕ ನಾಟಕ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ