ಆ್ಯಪ್ನಗರ

ಚೌಳೂರು ರೈತನ ಕೃಷಿ ಹೊಂಡ ಈಜು ಪ್ರಿಯರ ನೆಚ್ಚಿನ ತಾಣ

ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಏರುತ್ತಿದ್ದು ಇದೀಗ 40 ಡಿಗ್ರಿ ತಲುಪಿದೆ. ಮುಂಗಾರು ಪೂರ್ವ ಮಳೆಯೂ ಬಾರದೇ ಇನ್ನೂ ಸೆಖೆಗಾಲವೇ ಮುಂದುವರಿಯುತ್ತಿದೆ. ಇಂಥ ವಾತಾವರಣದಲ್ಲಿ ಕೆರೆಕಟ್ಟೆ, ಬಾವಿ, ನಾಲೆ ಹುಡುಕುವ ಜನರಿಗೊಂದು ಕೃಷಿ ಹೊಂಡ ನೆಚ್ಚಿನ ತಾಣ. ಬಯಲುಸೀಮೆ ಸ್ಥಳೀಯರಿಗೆ ಹಾಗೂ ಶಾಲಾ-ಕಾಲೇಜು ಮಕ್ಕಳ ಪಾಲಿಗೆ ಈಜುಕೊಳ ತಣ್ಣನೆ ತಾಣವಾಗಿದೆ.

Vijaya Karnataka 25 May 2019, 5:00 am
ಪರಶುರಾಂಪುರ : ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಏರುತ್ತಿದ್ದು ಇದೀಗ 40 ಡಿಗ್ರಿ ತಲುಪಿದೆ. ಮುಂಗಾರು ಪೂರ್ವ ಮಳೆಯೂ ಬಾರದೇ ಇನ್ನೂ ಸೆಖೆಗಾಲವೇ ಮುಂದುವರಿಯುತ್ತಿದೆ. ಇಂಥ ವಾತಾವರಣದಲ್ಲಿ ಕೆರೆಕಟ್ಟೆ, ಬಾವಿ, ನಾಲೆ ಹುಡುಕುವ ಜನರಿಗೊಂದು ಕೃಷಿ ಹೊಂಡ ನೆಚ್ಚಿನ ತಾಣ. ಬಯಲುಸೀಮೆ ಸ್ಥಳೀಯರಿಗೆ ಹಾಗೂ ಶಾಲಾ-ಕಾಲೇಜು ಮಕ್ಕಳ ಪಾಲಿಗೆ ಈಜುಕೊಳ ತಣ್ಣನೆ ತಾಣವಾಗಿದೆ.
Vijaya Karnataka Web chauhur farmers farm is a favorite spot for swimming lovers
ಚೌಳೂರು ರೈತನ ಕೃಷಿ ಹೊಂಡ ಈಜು ಪ್ರಿಯರ ನೆಚ್ಚಿನ ತಾಣ


ಹೌದು, ಸಮೀಪದ ಚೌಳೂರು ಗ್ರಾಮದ ದ್ಯಾವಣ್ಣ ಎಂಬ ರೈತನ ಜಮೀನಿನ ಕೃಷಿ ಹೊಂಡ ಈಜು ಪ್ರಿಯರ ನೆಚ್ಚಿನ ತಾಣವಾಗಿದೆ.

ಕೃಷಿ ಭಾಗ್ಯ ಯೋಜನೆಯಡಿ ಸುಮಾರು 1.20 ಲಕ್ಷ ವೆಚ್ಚದಲ್ಲಿ ಕೃಷಿ ಹೊಂಡ ನಿರ್ಮಿಸಿದ್ದಾರೆ. 21*21 ಮೀಟರ್‌ ಉದ್ದಗಲ ಇದ್ದು, ಮೂರು ಮೀಟರ್‌ ಆಳವಿದೆ. 9.72 ಲಕ್ಷ ಲೀಟರ್‌ ನೀರು ನಿಲ್ಲುವ ಈ ಹೊಂಡದ ತಳಭಾಗದಲ್ಲಿ ಜೆಲ್ಲಿ ಕಾಂಕ್ರಿಟ್‌ ಹಾಕಿಸಿದ್ದಾರೆ. ಒಳಗೆ ಯಾರೂ ಹೋಗದಂತೆ ಸುತ್ತ ತಂತಿ ಬೇಲಿ ಹಾಕಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಸುಸಜ್ಜಿತ ಕೃಷಿ ಹೊಂಡ ರಸ್ತೆಬದಿಗೆ ಇರುವುದರಿಂದ ದಾರಿಹೋಕರನ್ನು ಆಕರ್ಷಿಸುತ್ತಿದೆ.

ತಣ್ಣೀರು ಜಳಕ :

ಈ ಹಿಂದೆ ಮಳೆಗಾಲದಲ್ಲಿ ತೆರೆದ ಬಾವಿಗಳು, ಗೋಕಟ್ಟೆಗಳು, ಕೆರೆ-ಕಟ್ಟೆಗಳಲ್ಲಿ ಹೆಚ್ಚು ನೀರು ಇರುತ್ತಿತ್ತು. ಆ ವೇಳೆ ಹುಡುಗರು ಬೇಸಿಗೆ ವೇಳೆ ತಣ್ಣೀರಲ್ಲಿ ಈಜಾಡಿ ದಣಿವು ನೀಗಿಸಿಕೊಳ್ಳುತ್ತಿದ್ದರು. ಈಗ ಅಂಥ ಕೆರೆಕಟ್ಟೆ, ಬಾವಿ, ಗೊಕಟ್ಟೆಗಳು ಮಳೆ ಇಲ್ಲದೆ ಬರಿದಾಗಿವೆ. ಗ್ರಾಮೀಣ ಭಾಗದಲ್ಲೀಗ ಬೇಸಿಗೆ ಜಳಕಕ್ಕೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ.

ಬೆಳೆಗೆ ನೀರು :

ರೈತ ತಮ್ಮ ಕೊಳವೆಬಾವಿ ನೀರನ್ನು ಈ ಕೃಷಿ ಹೊಂಡಕ್ಕೆ ಶೇಖರಿಸಿ ತಮ್ಮ ಜಮೀನಿಗೆ ಡ್ರಿಪ್‌ ನೀರು ಹಾಯಿಸುತ್ತಿದ್ದಾರೆ. ಆದರೆ ಇವರ ಉದ್ದೇಶ ಇಷ್ಟೆ. ಬೋರಿನಿಂದ ಡೈರೆಕ್ಟ್ ಡ್ರಿಪ್‌ಗೆ ಕೊಟ್ಟು ಬೆಳೆಗೆ ನೀರು ಹಾಯಿಸಿದರೆ ಹೆಚ್ಚಿದ ಬಿಸಿಲಿಗೆ ಲ್ಯಾಟ್ರೋಲ್‌ನಲ್ಲಿ ಬಿಸಿನೀರು ಬರುತ್ತದೆ.

ಹೊಂಡದ ನೀರು ಬಳಸುವುದರಿಂದ ಸೂರ್ಯನ ಕಿರಣ ನೀರಿನ ಮೇಲೆ ಬಿದ್ದು, ನೀರು ಆರೋಸ್ಟ್‌ ಬರುವ ಜತೆಗೆ ತಿಳಿಗೊಂಡು ಉಪ್ಪಿನ ಅಂಶ ಕಡಿಮೆಯಾಗುತ್ತದೆ. ಇಂತಹ ನೀರು ಬೆಳೆಗಳಿಗೆæ ಹಾಯಿಸಿದರೆ ಮಣ್ಣು ಮತ್ತು ಬೆಳೆ ಹಾನಿ ತಪ್ಪಿಸಬಹುದು ಎನ್ನುತ್ತಾರೆ ಕೃಷಿಕ ದ್ಯಾವಣ್ಣ.

========== ಕೋಟ್‌

ಹೊಂಡಗಳಿಂದ ಅನುಕೂಲ ಇದೆ. ನಮ್ಮ ಕೃಷಿ ಹೊಂಡಕ್ಕೆ ತಂತಿಬೇಲಿ ಹಾಕಿಸುವುದು ಬಾಕಿ ಇದೆ. ಮಕ್ಕಳಿಗೆ ಅಪಾಯ ಎದುರಾಗಬಹುದು ಅಂತ ಹೊಂಡದಲ್ಲಿ ಹೆಚ್ಚಿನ ನೀರು ಶೇಖರಣೆ ಮಾಡುತ್ತಿಲ್ಲ.

-ದೇವರಾಜ್‌, ರೈತ ಚೌಳೂರು.

== ಕೋಟ್‌


ಇಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಒಟ್ಟು 490 ಕೃಷಿ ಹೊಂಡಗಳನ್ನು ತೆಗೆಸಲಾಗಿದೆ. ಇವುಗಳಲ್ಲಿ ಕೆಲ ಹೊಂಡಗಳಿಗೆ ತಾಡಪಾಲ್‌ ನೀಡಿದ್ದು, ಕೆಲ ಹೊಂಡಗಳಿಗೆ ಕಲ್ಲು ಪಿಚ್ಚಿಂಗ್‌ ನಿರ್ಮಾಣಕ್ಕೆ ಧನ ಸಹಾಯ ನೀಡಲಾಗಿದೆ.

-ಡಾ.ಮಾರುತಿ, ಎಡಿಎ, ಚಳ್ಳಕೆರೆ

===== ಕೋಟ್‌


ಮಳೆಗಾಲದಲ್ಲಿ ಶೇಖರಣೆಯಾದ ನೀರನ್ನು ಕೊರತೆ ಇದ್ದಾಗ ಬಳಸಬಹುದು. ಒಂದು ಊರಲ್ಲಿ ನಾಲ್ಕು ಜನ ಹೊಂಡ ತೆಗೆಸಿದ ಫಲಾನುಭವಿಗಳು ಸೇರಿ ಒಂದು ಡೀಸೆಲ್‌ಎಂಜಿನ್‌ ಉಚಿತ ಪಡೆದು ಎಲ್ಲರೂ ನೀರು ಹಾಯಿಸಿ ಕೊಳ್ಳಬಹುದು. ಇಲಾಖೆ ಯಿಂದ ರಿಯಾಯ್ತಿ ದರದಲ್ಲಿ ಸ್ಟ್ರಿಂಕ್‌ಲೇರ್‌ ಕೂಡ ನೀಡಲಾಗುತ್ತಿದೆ.

-ಗಿರೀಶ್‌, ತಿಪ್ಪೇಸ್ವಾಮಿ, ಕೃಷಿ ಅಧಿಕಾರಿಗಳು, ಪರಶುರಾಂಪುರ

===ಕೋಟ್‌


ಬೇಸಿಗೆ ಬಿಸಿಲು ಜಾಸ್ತಿಯಾಗಿ ನೀರು ಕಂಡರೆ ಹೋಗಿ ಮುಳುಗೋಣ ಅನ್ನಿಸುತ್ತದೆ. ನಾವು ನಿತ್ಯ ಈ ಹೊಂಡದಲ್ಲಿ ಇರುವಷ್ಟು ನೀರಲ್ಲೇ ಈಜಾಡಿ ಖುಷಿ ಪಡುತ್ತೇವೆ*.

-ಅಬ್ಬಾಸ್‌,ಯುವಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ