ಆ್ಯಪ್ನಗರ

ಚಿತ್ರದುರ್ಗ ಡಿಸಿ ಕಚೇರಿ 150

ಐತಿಹಾಸಿಕ ಕೋಟೆನಾಡು ಚಿತ್ರದುರ್ಗ ಡಿಸಿ ಕಚೇರಿ ಕಟ್ಟಡಕ್ಕೆ ಇದೀಗ 150 ವರ್ಷಗಳ ಸಂಭ್ರಮ. 1869ನೇ ವರ್ಷದಲ್ಲಿಕಟ್ಟಲ್ಪಟ್ಟ ಈ ಕಟ್ಟಡ 150 ವಸಂತಗಳನ್ನು ಕಳೆದರೂ ಇಂದಿಗೂ ಸುಸ್ಥಿತಿಯಲ್ಲಿದೆ ಅಲ್ಲದೆ ಗಟ್ಟಿಮುಟ್ಟಾಗಿಯೂ ಇದೆ.

Vijaya Karnataka 16 Oct 2019, 8:50 pm
ಚಿತ್ರದುರ್ಗ: ಐತಿಹಾಸಿಕ ಕೋಟೆನಾಡು ಚಿತ್ರದುರ್ಗ ಡಿಸಿ ಕಚೇರಿ ಕಟ್ಟಡಕ್ಕೆ ಇದೀಗ 150 ವರ್ಷಗಳ ಸಂಭ್ರಮ. 1869ನೇ ವರ್ಷದಲ್ಲಿಕಟ್ಟಲ್ಪಟ್ಟ ಈ ಕಟ್ಟಡ 150 ವಸಂತಗಳನ್ನು ಕಳೆದರೂ ಇಂದಿಗೂ ಸುಸ್ಥಿತಿಯಲ್ಲಿದೆ ಅಲ್ಲದೆ ಗಟ್ಟಿಮುಟ್ಟಾಗಿಯೂ ಇದೆ.
Vijaya Karnataka Web chitradurga dc office 150
ಚಿತ್ರದುರ್ಗ ಡಿಸಿ ಕಚೇರಿ 150

ತನ್ನ ಅಂದ ಚೆಂದದಿಂದ ಕಟ್ಟಡ ಈಗಲೂ ಜನಾಕರ್ಷಣೆ ಕೇಂದ್ರವಾಗಿದೆ. ಇತಿಹಾಸದ ಪುಟಗಳಲ್ಲಿದಾಖಲಾಗಿರುವಂತೆ ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್‌(1799-1868)ರ ಅಧಿಕಾರಾವಧಿಯಲ್ಲಿಮೈಸೂರು ರಾಜ್ಯವು ಸುಗಮ ಆಡಳಿತದ ದೃಷ್ಟಿಯಿಂದ ಆರು ಫೌಜ್‌ದಾರ್‌ಗಳಾಗಿ ಹಾಗೂ 101 ತಾಲೂಕುಗಳಾಗಿ ವಿಂಗಡಿಸಲಾಗಿತ್ತು. ಬೆಂಗಳೂರು ಹಾಗೂ ಮದ್ದಗಿರಿ(ಈಗಿನ ಮಧುಗಿರಿ) ಜಿಲ್ಲೆಗಳ ವ್ಯಾಪ್ತಿಯಲ್ಲಿ27 ತಾಲೂಕು, ಚಿತಲ್‌ಡ್ರುಗ್‌(ಈಗಿನ ಚಿತ್ರದುರ್ಗ) ವ್ಯಾಪ್ತಿಗೆ 13 ತಾಲೂಕುಗಳು, ಅಷ್ಟಗ್ರಾಮ ವ್ಯಾಪ್ತಿಗೆ 25, ಮಂಜರಾಬಾದ್‌-11 ಹಾಗೂ ನಗರ್‌ ವ್ಯಾಪ್ತಿಗೆ 25 ತಾಲೂಕುಗಳು ಸೇರಿದ್ದವು. 1834ರಲ್ಲಿಈ 06 ಫೌಜ್‌ದಾರ್‌ಗಳನ್ನು 04 ವಿಭಾಗಗಳಾಗಿ ಅಂದರೆ ಬೆಂಗಳೂರು, ನಗರ್‌, ಚಿತಲ್‌ಡ್ರುಗ್‌ ಹಾಗೂ ಅಷ್ಠಗ್ರಾಮ ವಿಭಾಗಗಳಾಗಿ ಮರು ವಿಂಗಡಣೆ ಮಾಡಲಾಯಿತು. ತುಮಕೂರು ಜಿಲ್ಲೆಮತ್ತು ಮದ್ದಗಿರಿ(ಈಗಿನ ಮಧುಗಿರಿ) ಫೌಜ್‌ದಾರ್‌ಗಳನ್ನು ಸೇರಿಸಿ ಚಿತಲ್‌ಡ್ರುಗ್‌ ವಿಭಾಗವಾಗಿ ಮಾಡಲ್ಪಟ್ಟಿತ್ತು. ಅಲ್ಲದೆ ತುಮಕೂರನ್ನು ಕೇಂದ್ರಸ್ಥಾನವನ್ನಾಗಿ ಮಾಡಲಾಯಿತು.
ಪ್ರತಿ ವಿಭಾಗಕ್ಕೂ ಯೂರೋಪಿಯನ್‌ ಸೂಪರಿಂಟೆಂಡೆಂಟ್‌ ನೇಮಕ ಮಾಡಿ, ರೆವಿನ್ಯೂ ಮತ್ತು ಜುಡಿಯನ್‌ ಅಧಿಕಾರ ನೀಡಲಾಯಿತು. ನಂತರದ ವರ್ಷಗಳಲ್ಲಿ1862ರಲ್ಲಿಲಿವಿನ್‌ ಬೆಂಥೆಮ್‌ ಬೋರಿಂಗ್‌ ಅವರನ್ನು ಮೈಸೂರು ಕಮಿಷನರ್‌ ಆಗಿ ಬ್ರಿಟಿಷ್‌ ಸರಕಾರ ನೇಮಕ ಮಾಡಿತು. ಸೂಪರಿಂಟೆಂಡೆಂಟ್‌ ನೇಮಕ: ಇವರು ಆಡಳಿತದ ದೃಷ್ಟಿಯಿಂದ ಮೈಸೂರು ರಾಜ್ಯವನ್ನು 8 ಜಿಲ್ಲೆಗಳಾಗಿ ವಿಂಗಡಿಸಿದರು. ಇದರಲ್ಲಿಚಿತಲ್‌ಡ್ರುಗ್‌ ಸಹ ಒಂದು. ಈ ಎಂಟು ಜಿಲ್ಲೆಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಪ್ರತಿ ವಿಭಾಗಕ್ಕೂ ಒಬ್ಬರು ಸೂ± Üರಿಂಟೆಂಡೆಂಟ್‌ ಮತ್ತು ಜಿಲ್ಲೆಗಳಿಗೆ ಡೆಪ್ಯೂಟಿ ಸೂಪರಿಂಟೆಂಡೆಂಟ್‌ ನೇಮಿಸಲಾಯಿತು. ನಂತರದಲ್ಲಿಇಡೀ ರಾಜ್ಯಕ್ಕೆ ಒಬ್ಬರೇ ಚೀಫ್‌ ಕಮಿಷನರ್‌ರನ್ನು ಮತ್ತು ಪ್ರತಿ ಜಿಲ್ಲೆಗೆ ಡೆಪ್ಯೂಟಿ ಕಮಿಷನರ್‌ಗಳನ್ನು ನೇಮಕ ಮಾಡಲಾಯಿತು. ಈ ಕಾರಣಕ್ಕಾಗಿಯೇ ಇಂದಿಗೂ ಕರ್ನಾಟಕದಲ್ಲಿಜಿಲ್ಲಾಧಿಕಾರಿಗಳನ್ನು ಇಂಗ್ಲಿಷ್‌ನಲ್ಲಿಡೆಪ್ಯೂಟಿ ಕಮಿಷನರ್‌ ಎಂದೇ ಕರೆಯಲಾಗುತ್ತದೆ. 

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ