ಆ್ಯಪ್ನಗರ

ಚಿತ್ರದುರ್ಗ ಕಬಡ್ಡಿ ಪ್ರೀಮಿಯರ್‌ ಲೀಗ್‌ ಸೀಜನ್‌2 ಪಂದ್ಯ

ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಿಕೆಪಿಎಲ್‌ ಕಮಿಟಿಯಿಂದ ಆಯೋಜಿಸಿರುವ ಚಿತ್ರದುರ್ಗ ಕಬಡ್ಡಿ ಪ್ರೀಮಿಯರ್‌ ಲೀಗ್‌(ಸಿಕೆಪಿಎಲ್‌)ಸೀಜನ್‌ 2 ಲೀಗ್‌ ಹಂತದ ಮೊದಲ ಪಂದ್ಯದಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕ ತಂಡದ ವಿರುದ್ಧ ಸೆಣಸಾಡಿದ ಚಿತ್ರದುರ್ಗ ಡೆವಿಲ್ಸ್‌ ತಂಡ 44 ಅಂಕ ಗಳಿಸಿ ಜಯಗಳಿಸಿತು. ಬಿಚ್ಚುಗತ್ತಿ ಭರಮಣ್ಣ ನಾಯಕ ತಂಡ 42 ಅಂಕ ಪಡೆಯಿತು.

Vijaya Karnataka 9 Sep 2018, 5:00 am
ಚಿತ್ರದುರ್ಗ: ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಿಕೆಪಿಎಲ್‌ ಕಮಿಟಿಯಿಂದ ಆಯೋಜಿಸಿರುವ ಚಿತ್ರದುರ್ಗ ಕಬಡ್ಡಿ ಪ್ರೀಮಿಯರ್‌ ಲೀಗ್‌(ಸಿಕೆಪಿಎಲ್‌)ಸೀಜನ್‌ 2 ಲೀಗ್‌ ಹಂತದ ಮೊದಲ ಪಂದ್ಯದಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕ ತಂಡದ ವಿರುದ್ಧ ಸೆಣಸಾಡಿದ ಚಿತ್ರದುರ್ಗ ಡೆವಿಲ್ಸ್‌ ತಂಡ 44 ಅಂಕ ಗಳಿಸಿ ಜಯಗಳಿಸಿತು. ಬಿಚ್ಚುಗತ್ತಿ ಭರಮಣ್ಣ ನಾಯಕ ತಂಡ 42 ಅಂಕ ಪಡೆಯಿತು.
Vijaya Karnataka Web chitradurga kabaddi premier league season 2 match
ಚಿತ್ರದುರ್ಗ ಕಬಡ್ಡಿ ಪ್ರೀಮಿಯರ್‌ ಲೀಗ್‌ ಸೀಜನ್‌2 ಪಂದ್ಯ


2ನೇ ಪಂದ್ಯದಲ್ಲಿ ಬೆಸ್ಟ್‌ ಸ್ಟುಡಿಯೋ ಬಾಯ್ಸ್‌ ವಿರುದ್ಧ ಕಾದಾಡಿದ ಸನ್‌ ರೈಸರ್ರ್ಸ್‌ ಮುದ್ದಾಪುರ ತಂಡದ ಹುಡುಗರು 43 ಅಂಕಗಳಿಸಿ ವಿಜಯದ ನಗೆ ಬೀರಿದರು. ಬೆಸ್ಟ್‌ ಸ್ಟುಡಿಯೋ ಬಾಯ್ಸ್‌ 36 ಅಂಕ ಪಡೆದು ಸೋಲೊಪ್ಪಿದರು.

ಮೂರನೇ ಪಂದ್ಯದಲ್ಲಿ ಲಿಜೆಂಡ್‌ ಚಂದ್ರು ಗ್ರೂಫ್ಸ್‌ ತಂಡದ ವಿರುದ್ಧ ವಂದೇ ಮಾತರಂ ತಂಡದ ಹುಡುಗರು 67 ಅಂಕ ಗಳಿಸುವ ಮೂಲಕ ಭರ್ಜರಿ ಜಯಭೇರಿ ಬಾರಿಸಿದರು. ಲಿಜೆಂಡ್‌ ಚಂದ್ರು ಗ್ರೂಫ್ಸ್‌ ತಂಡದ ಕ್ರೀಡಾಪಟುಗಳು ಕೇವಲ 38 ಅಂಕಗಳಿಸಿ ಸುಲಭವಾಗಿ ಶರಣಾದರು.

ಮೊದಲ ಪಂದ್ಯದಲ್ಲಿ ಚಿತ್ರದುರ್ಗ ಡೆವಿಲ್ಸ್‌ ತಂಡಕ್ಕೆ ಶರಣಾಗಿದ್ದ ಬಿಚ್ಚುಗತ್ತಿ ಭರಮಣ್ಣ ನಾಯಕ ತಂಡ ನಾಲ್ಕನೇ ಪಂದ್ಯದಲ್ಲಿ 51 ಅಂಕಗಳಿಸುವ ಮೂಲಕ ಕೇವಲ 32 ಅಂಕಗಳಿಸಿದ ಬೆಸ್ಟ್‌ ಸ್ಟುಡಿಯೋ ಬಾಯ್ಸ್‌ ತಂಡವನ್ನು ಮಣಿಸಿತು.

ತೀರ್ಪುಗಾರರಾಗಿ ಬೆಂಗಳೂರಿನ ಮಾಯಣ್ಣ, ಪುಟ್ಟರಾಜು, ಉಮಾಪತಿ, ಚಮಂದ್‌, ಚಿತ್ರದುರ್ಗದ ಶ್ರೀನಿವಾಸ್‌, ಕುಮಾರಸ್ವಾಮಿ, ವಿನಯ್‌, ಯಲ್ಲಪ್ಪ ಕಾರ್ಯನಿರ್ವಹಿಸಿದರು. ಸಿಕೆಪಿಎಲ್‌ ಕಮಿಟಿ ಚಿತ್ರದುರ್ಗ ಸೀಜನ್‌ 2 ಪಂದ್ಯಾವಳಿಯ ಸಂಘಟಕರಾದ ಸಿ.ಮುರುಗೇಶ್‌, ಟಿ.ಕೆ. ಬಸವರಾಜ್‌, ಜಗದೀಶ್‌, ನಾಗಭೂಷಣ್‌, ಸತ್ಯನಾರಾಯಣ ನಾಯ್ಡು, ಪ್ರವೀಣ್‌ ನಾಯ್ಕ್‌ ಪಂದ್ಯಾವಳಿ ನೇತೃತ್ವ ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ