ಆ್ಯಪ್ನಗರ

ಚಿತ್ರಹಳ್ಳಿ ಚಿತ್ರಲಿಂಗೇಶ್ವರ ಅಂಬಿನೋತ್ಸವ ಅದ್ದೂರಿ

ತಾಲೂಕಿನ ದೊಡ್ಡ ಜಾತ್ರೆಗಳಲ್ಲೊಂದಾದ ಚಿತ್ರಹಳ್ಳಿ ಶ್ರೀ ಚಿತ್ರಲಿಂಗೇಶ್ವರಸ್ವಾಮಿ ಅಂಬಿನೋತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.

Vijaya Karnataka 9 Oct 2019, 5:00 am
ಹೊಳಲ್ಕೆರೆ: ತಾಲೂಕಿನ ದೊಡ್ಡ ಜಾತ್ರೆಗಳಲ್ಲೊಂದಾದ ಚಿತ್ರಹಳ್ಳಿ ಶ್ರೀ ಚಿತ್ರಲಿಂಗೇಶ್ವರಸ್ವಾಮಿ ಅಂಬಿನೋತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.
Vijaya Karnataka Web chitrahalli chitralingeshwara ambinotsava is lavish
ಚಿತ್ರಹಳ್ಳಿ ಚಿತ್ರಲಿಂಗೇಶ್ವರ ಅಂಬಿನೋತ್ಸವ ಅದ್ದೂರಿ


ತಾಲೂಕಿನಲ್ಲಷ್ಟೆ ಅಲ್ಲದೆ ರಾಜ್ಯದ ನಾನಾ ಭಾಗಗಳಲ್ಲಿಸ್ವಾಮಿಗೆ ಅಪಾರ ಭಕ್ತ ಸಮೂಹವಿದ್ದು, ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಭಕ್ತರು ಅಂಬಿನೋತ್ಸವದಲ್ಲಿಪಾಲ್ಗೊಂಡಿದ್ದರು. ಅಂಬಿನೋತ್ಸವಕ್ಕೆ ತಹಸೀಲ್ದಾರ್‌ ಕೆ.ನಾಗರಾಜ್‌ ಚಾಲನೆ ನೀಡಿದರು.

ಕಳೆದ ಹದಿನೈದು ದಿನಗಳಿಂದ ತಾಲೂಕು ಆಡಳಿತದ ನೇತೃತ್ವದಲ್ಲಿದೇವಾಲಯ ಸಮಿತಿ, ಗ್ರಾಮಸ್ಥರು, ಹಾಗೂ ಎಲ್ಲಇಲಾಖೆ ಅಧಿಕಾರಿಗಳು ಸೇರಿ ಪೂರ್ವಭಾವಿ ಸಭೆ ನಡೆಸಿ ಸಿದ್ದತೆಗಳ ರೂಪು ರೇಷಗಳನ್ನು ನಡೆಸಿದ್ದರು.

ಜಾತ್ರೆಯ ವಿಶೇಷ:

ಮನೆ, ಜಮೀನುಗಳಲ್ಲಿಹಾವು, ಚೇಳು ಸೇರಿದಂತೆ ಯಾವುದೇ ವಿಷ ಜಂತುಗಳ ಭಯ ಕಾಡಬಾರದು ಎಂಬ ಕಾರಣಕ್ಕೆ ಚಿತ್ರಲಿಂಗೇಶ್ವರಸ್ವಾಮಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಹಾಗಾಗಿಯೇ ರೈತ ಸಮುದಾಯ ಬೇರೆ ಬೇರೆ ಕಡೆಗಳಿಂದ ಬಂದು ಸ್ವಾಮಿಯನ್ನು ಪ್ರಾರ್ಥಿಸಿಕೊಳ್ಳುತ್ತಾರೆ. ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಾರೆ.

ಎರಡು ಬಾರಿ ಅಂಬಿನೋತ್ಸವ:

ಚಿತ್ರಹಳ್ಳಿಯಲ್ಲಿಎರಡು ಬಾರಿ ಅಂಬಿನೋತ್ಸವ ನಡೆಯುವುದು ಇಲ್ಲಿನ ವಿಶೇಷವಾಗಿದೆ. ಸೋಮವಾರ ಸಂಜೆ ಸ್ವಾಮಿಯನ್ನು ಕುದುರೆ ಉತ್ಸವದೊಂದಿಗೆ ಹೊಳೆ ಪೂಜೆಗೆ ಕರೆದೊಯ್ಯಲಾಗಿತ್ತು.

ಮಂಗಳವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಮೊದಲು ಶ್ರೀ ಆಂಜನೇಯಸ್ವಾಮಿ ಅಂಬಿನೋತ್ಸವ ನಡೆಯಿತು. ನಂತರ 8 ಗಂಟೆ ಸುಮಾರಿಗೆ ಎರಡನೇಯದಾಗಿ ಶ್ರೀ ಚಿತ್ರಲಿಂಗೇಶ್ವರಸ್ವಾಮಿ ಅಂಬಿನೋತ್ಸವ ಜರುಗಿತು.

ವಾಹನ ಮಾರ್ಗಸೂಚಿ:

ಚಿತ್ರದುರ್ಗ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಚಿತ್ರಹಳ್ಳಿ ಗೇಟ್‌ ಇದ್ದು, ಅಲ್ಲಿಂದ ದೇವಾಲಯಕ್ಕೆ ಹೋಗಲು 1 ಕಿಮೀ ಕ್ರಮಿಸಬೇಕು. ಜನ ದಟ್ಟಣೆ ಹೆಚ್ಚಾಗಿರುವ ಕಾರಣ ವಾಹನಗಳನ್ನು ಚಿತ್ರಹಳ್ಳಿ ಗೇಟ್‌ನಲ್ಲಿಯೇ ಸಾಕಷ್ಟು ಸ್ಥಳಾವಕಾಶವಿದ್ದು, ಅಲ್ಲಿಯೇ ನಿಲ್ಲಿಸಲು ಪೊಲೀಸ್‌ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡಿತ್ತು.

ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳು ಕುಡಿಯುವ ನೀರು, ಸ್ವಚ್ಛತೆ, ರಕ್ಷಣೆಗೆ ಆದ್ಯತೆ ನೀಡಿ ಭಕ್ತರಿಗೆ ಎಲ್ಲಸೌಲಭ್ಯ ಮಾಡಿದ್ದವು. ಸ್ವಾಮಿಯ ದರ್ಶನಕ್ಕೆ ಸಕಲ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.

ಜಿಪಂ ಸದಸ್ಯ ಡಿ.ಕೆ.ಶಿವಮೂರ್ತಿ, ತಾಪಂ ಸದಸ್ಯ ಪರಮೇಶ್ವರಪ್ಪ, ಗ್ರಾಪಂ ಅಧ್ಯಕ್ಷೆ ಲಕ್ಕಮ್ಮ ನಾಗರಾಜ್‌, ತಹಸೀಲ್ದಾರ್‌ ಕೆ.ನಾಗರಾಜ್‌, ಡಿವೈಎಸ್ಪಿ ಸಂತೋಷ್‌, ಸಿಪಿಐಗಳಾದ ರವೀಶ್‌, ನಹೀಮ್‌, ಗಿರೀಶ್‌, ಪಿಎಸ್‌ಐಗಳಾದ ಚಿತ್ರಹಳ್ಳಿ ಚಂದ್ರಶೇಖರ್‌, ರಾಮಚಂದ್ರಪ್ಪ, ಪರಮೇಶ್‌, ರಾಜು, ಲೋಕೇಶ್‌, ತಾಳ್ಯ ಉಪತಹಸೀಲ್ದಾರ್‌ ವಿ.ಎಸ್‌.ಲಕ್ಷತ್ರ್ಮಮ್ಮ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ