ಆ್ಯಪ್ನಗರ

ಇಂದು ನಾಯಕನಹಟ್ಟಿಗೆ ಪ್ರಚಾರಕ್ಕೆ ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಪಟ್ಟಣದಲ್ಲಿ ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದು, ಸಿದ್ಧತೆಗಳು ಅಂತಿಮ ಹಂತದಲ್ಲಿವೆ.

Vijaya Karnataka 3 May 2018, 5:00 am
ನಾಯಕನಹಟ್ಟಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಪಟ್ಟಣದಲ್ಲಿ ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದು, ಸಿದ್ಧತೆಗಳು ಅಂತಿಮ ಹಂತದಲ್ಲಿವೆ.
Vijaya Karnataka Web cm siddaramaiah will come to nayakanahatti
ಇಂದು ನಾಯಕನಹಟ್ಟಿಗೆ ಪ್ರಚಾರಕ್ಕೆ ಸಿಎಂ


ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಎನ್‌.ವೈ.ಗೋಪಾಲಕೃಷ್ಣ ಕಾಂಗ್ರೆಸ್‌ ಟಿಕೆಟ್‌ ತಪ್ಪಿದ ಕಾರಣ ಬಿಜೆಪಿ ಸೇರಿದ್ದಾರೆ. ಹೀಗಾಗಿ ಯುವ ಕೋಟಾದಡಿ ಡಾ.ಯೋಗೀಶ್‌ ಬಾಬುಗೆ ಟಿಕೆಟ್‌ ನೀಡಲಾಗಿದೆ. ಅವರನ್ನು ಗೆಲ್ಲಿಸುವ ಜವಾಬ್ದಾರಿ ಸಿಎಂ ಮೇಲಿದೆ. ಜತೆಗೆ ಬದಾಮಿ ಕ್ಷೇತ್ರದಲ್ಲಿ ಬಿ.ಶ್ರೀರಾಮುಲು ಎದುರಾಳಿಯಾಗಿದ್ದಾರೆ. ಈ ಎರಡು ಕಾರಣಗಳಿಂದ ಸಿಎಂ ಆಗಮಿಸಲಿದ್ದಾರೆ.

ಈ ಮೊದಲು ಕಾರ್ಯಕ್ರಮ ಮೊಳಕಾಲ್ಮುರು ಪಟ್ಟಣದಲ್ಲಿ ನಿಗದಿಪಡಿಸಲಾಗಿತ್ತು. ಆದರೆ ಜಿಲ್ಲಾ ಕಾಂಗ್ರೆಸ್‌ ಮುಖಂಡರ ಒತ್ತಾಯದ ಮೇರೆಗೆ ನಾಯಕನಹಟ್ಟಿಯಲ್ಲಿ ನಿಗದಿಗೊಳಿಸಲಾಗಿದೆ.

ಕಾರ್ಯಕ್ರಮ : ಸಂಜೆ 4.30ಗಂಟೆಗೆ ಹೆಲಿಕಾಪ್ಟರ್‌ ಮೂಲಕ ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದಾರೆ. ನಂತರ ಒಳಮಠಕ್ಕೆ ಭೇಟಿ ನೀಡಿದ ಬಳಿಕ 5 ಗಂಟೆಗೆ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಟ್ಟಣದ ಎಸ್‌ಟಿಎಸ್‌ಆರ್‌ ಪ್ರೌಢಶಾಲೆ ಮೈದಾನದಲ್ಲಿ ವೇದಿಕೆ ರೆಡಿಯಾಗಿದೆ. ಸಿಎಂ ಜತೆ ಸತೀಶ್‌ಜಾರಕಿ ಹೊಳಿ, ಸಿಇಂ ಇಬ್ರಾಹಿಂ, ರಾಜ್ಯಸಭಾ ಸದಸ್ಯ ತುಳಸೀರೆಡ್ಡಿ, ಆರ್‌.ವಿ. ವೆಂಕಟೇಶ್‌ ಇತರೆ ಮುಖಂಡರು ಭಾಗವಹಿಸಲಿದ್ದಾರೆ. ರಾಮುಲು ದೇವಾಲಯಕ್ಕೆ ಆಗಮಿಸಿದಾಗ ಗಲಾಟೆಯಾಗಿತ್ತು. ಹೀಗಾಗಿ ಸಿಎಂ ಭೇಟಿಗೆ ಹೆಚ್ಚಿನ ಬಂದೋಬಸ್ತ್‌ ಹಾಕಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ