ಆ್ಯಪ್ನಗರ

ಕೋರ್ಟ್‌ ಕಟ್ಟೆ ಹತ್ತಿದ ಮೀಸಲು ಕಟ್ಲೆ

ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಗಳು ಕಳೆದ ಆರು ತಿಂಗಳಿಂದ ಖಾಲಿ ಬಿದ್ದಿವೆ. ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಅಧಿಕಾರದ ಭಾಗ್ಯವೂ ದೊರೆತಿಲ್ಲ. ಸದ್ಯಕ್ಕೆ ಅಧಿಕಾರಿಗಳೇ ಇಡೀ ಪಪಂ ಆಡಳಿತದ ರೂವಾರಿಗಳು.

Vijaya Karnataka 6 Jun 2019, 5:00 am
ನಾಯಕನಹಟ್ಟಿ : ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಗಳು ಕಳೆದ ಆರು ತಿಂಗಳಿಂದ ಖಾಲಿ ಬಿದ್ದಿವೆ. ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಅಧಿಕಾರದ ಭಾಗ್ಯವೂ ದೊರೆತಿಲ್ಲ. ಸದ್ಯಕ್ಕೆ ಅಧಿಕಾರಿಗಳೇ ಇಡೀ ಪಪಂ ಆಡಳಿತದ ರೂವಾರಿಗಳು.
Vijaya Karnataka Web courtalla cutley reserve
ಕೋರ್ಟ್‌ ಕಟ್ಟೆ ಹತ್ತಿದ ಮೀಸಲು ಕಟ್ಲೆ


ಪಪಂ ಅಧ್ಯಕ್ಷ , ಉಪಾಧ್ಯಕ್ಷ ಚುನಾವಣೆಗೆ ಮೀಸಲು ಪ್ರಕಟವಾಗಿ ಆರು ತಿಂಗಳು ಕಳೆದಿದೆ. ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಬಿಸಿಎಂ ವರ್ಗಕ್ಕೆ ಮೀಸಲಾಗಿದೆ. ಆದರೆ ಇದನ್ನು ಪ್ರಶ್ನಿಸಿ ಕೆಲವರು ಕೋರ್ಟ್‌ ಮೆಟ್ಟಿಲೇರಿದ್ದಾರೆ. ಕೋರ್ಟ್‌ ತೀರ್ಪು ಹೊರಬೀಳುವತನಕ ಚುನಾಯಿತ ಆಡಳಿತ ಮಂಡಳಿ ರಚನೆ ಕಷ್ಟ ಸಾಧ್ಯ. ಎರಡೂವರೆ ವರ್ಷದ ಎರಡನೇ ಅಧಿಕಾರಾವಧಿಯಲ್ಲಿ ಆರು ತಿಂಗಳು ಈಗಾಗಲೇ ಕಳೆದಿದೆ. ಮುಂದಿನ ಎರಡು ವರ್ಷ ಮಾತ್ರ ಅಧಿಕಾರಾವಧಿ ಬಾಕಿ ಇದೆ. ರಾಜ್ಯ ಸರಕಾರ ಈ ಸ್ಥಾನಗಳ ಆಯ್ಕೆಗೆ ಇನ್ನೂ ದಿನಾಂಕ ನಿಗದಿಪಡಿಸಿಲ್ಲ. ಆರು ತಿಂಗಳಿನಿಂದ ಕೌನ್ಸಿಲರ್‌ಗಳಿಗೆ ಅಧಿಕಾರವೂ ಇಲ್ಲವಾಗಿದೆ. ಪಪಂ ಕಚೇರಿಯಲ್ಲಿ ಜನಪ್ರತಿನಿಧಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

ಮೂವರು ಆಡಳಿತಾಧಿಕಾರಿ:

ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನ ಖಾಲಿ ಇರುವ ಕಾರಣ ಚಳ್ಳಕೆರೆ ತಹಸೀಲ್ದಾರ್‌ ಆಡಳಿತಾಧಿಕಾರಿಯಾಗಿದ್ದಾರೆ. ಲೋಕಸಭೆ ಚುನಾವಣೆ ಕಾರಣ ಆರು ತಿಂಗಳಲ್ಲಿ ಮೂವರು ತಹಸೀಲ್ದಾರ್‌ ಇಲ್ಲಿನ ಆಡಳಿತಾಧಿಕಾರಿಗಳಾಗಿ ಬಂದು ಹೋಗಿದ್ದಾರೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ, ವಸತಿ ಬಿಲ್‌ ಸೇರಿದಂತೆ ಇತರೆ ಯೋಜನೆ ಕಾರ್ಯಗಳು ಸ್ಥಗಿತಗೊಂಡಿವೆ. ಈ ಅವಧಿಯಲ್ಲಿ ಒಂದು ಬಜೆಟ್‌ ಸಭೆ ಹೊರತುಪಡಿಸಿ ಯಾವುದೇ ಪ್ರಗತಿ ಪರಿಶೀಲನ ಸಭೆ, ಕೌನ್ಸಿಲ್‌ ಸಭೆಗಳು ಜರುಗಿಲ್ಲ. ಇಡೀ ಆಡಳಿತ ವ್ಯವಸ್ಥೆ ಸ್ಥಗಿತವೇ ಆಗಿ ಹೋಗಿದೆ.

ಬಿಲ್‌ ಪಾವತಿ ಇಲ್ಲ :

ಪಟ್ಟಣದಲ್ಲಿ ವಸತಿ ಯೋಜನೆಯಡಿ 500 ಮನೆಗಳ ನಿರ್ಮಾಣಕ್ಕೆ ಅನುದಾನ ದೊರೆತಿದೆ. ಕೆಲ ಜನರಿಗೆ ಮೊದಲ ಹಂತದ ಬಿಲ್‌ ನೀಡಲಾಗಿದೆ. ಕೆಲವರು ತಾವು ವಾಸವಿದ್ದ ಗುಡಿಸಲು ಕೆಡವಿ ತಾತ್ಕಾಲಿಕ ಷೆಡ್‌ಗಳಲ್ಲಿ ವಾಸವಾಗಿದ್ದಾರೆ. ಬುನಾದಿ ಮಟ್ಟದವರೆಗೆ ನಿರ್ಮಿಸಿ ಆರು ತಿಂಗಳು ಕಳೆದಿದೆ. ಆದರೆ ಇನ್ನೂ ಬಿಲ್‌ ಪಾವತಿಯಾಗಿಲ್ಲ. ಮನೆ ಕಟ್ಟಡಗಳು ಅರ್ಧಗೊಂಡಿರುವ ನೂರಾರು ಜನ ಬಯಲಿನಲ್ಲಿ ವಾಸವಿದ್ದಾರೆ. ಮಳೆಗಾಲದ ಈ ದಿನಗಳಲ್ಲಿ ಹತ್ತಾರು ಕುಟುಂಬಗಳು ಬೀದಿಗೆ ಬಿದ್ದಂತಾಗಿದೆ. ಅಧ್ಯಕ್ಷ , ಉಪಾಧ್ಯಕ್ಷ ರ ಆಯ್ಕೆ ನಡೆಯಬೇಕು, ಪಪಂ ಮುಖ್ಯಾಧಿಕಾರಿ ನೇಮಕ ಕಾರ್ಯ ಆದಷ್ಟು ಬೇಗ ಆಗÜಬೇಕು ಎಂಬದು ಸಾರ್ವಜನಿಕರ ಒತ್ತಾಯ.

-----ಕೋಟ್‌ ---

ಆರು ತಿಂಗಳಿನಿಂದ ಮನೆ ನಿರ್ಮಾಣದ ಬಿಲ್‌ಗಳು ಪೆಂಡಿಂಗ್‌ ಇವೆ. ವಸತಿ ಯೋಜನೆಯಡಿ ಮನೆ ನಿರ್ಮಿಸುತ್ತಿರುವ ಜನರಿಗೆ ಬಿಲ್‌ ಮೊತ್ತ ಪಾವತಿಯಾಗಿಲ್ಲ. ಶೌಚಾಲಯದ ಬಿಲ್‌, ನೀರಿನ ಸಮಸ್ಯೆ ನಿವಾರಣೆಗೆ ಜನಪ್ರತಿನಿಧಿಗಳು ಇಲ್ಲ.

-ಮನ್ಸೂರ್‌, ಕೌನ್ಸಿಲರ್‌,

-----ಕೋಟ್‌ ---


ಚುನಾವಣೆ ನಿಮಿತ್ತ ವರ್ಗಾವಣೆಯಾಗಿದ್ದೇನೆ. ಇಲ್ಲಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಯತ್ನ ನಡೆಸಿದ್ದೇನೆ. ಸಮಸ್ಯೆಗಳಿದ್ದಾಗ ತಹಸೀಲ್ದಾರ್‌ ಜತೆಗೆ ಚರ್ಚೆ ನಡೆಸಿದ್ದೇನೆ. ಆದರೆ ಚುನಾವಣೆ ನೀತಿ ಸಂಹಿತೆ ಕಾರಣ ಸಾಮಾನ್ಯ ಸಭೆ ನಡೆಸಲು ಸಾಧ್ಯವಾಗಿಲ್ಲ.

-ಎಲ್‌.ವಿ.ಮಂಜುನಾಥ್‌, ಪ್ರಭಾರ ಮುಖ್ಯಾಧಿಕಾರಿ, ಪಪಂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ