ಆ್ಯಪ್ನಗರ

ಟಿಎಚ್‌ಒ ಪರ ಡಿ.ಗ್ರೂಪ್‌ ನೌಕರ ಸಹಿ

ಡಿ.ಗ್ರೂಪ್‌ ನೌಕರನೊಬ್ಬ ತನ್ನ ಮೇಲಾಧಿಧಿಕಾರಿ ಕರ್ತವ್ಯಕ್ಕೆ ಹಾಜರಾಗದಿದ್ದರೂ ಅವರ ಪರವಾಗಿ ಗ್ರೀನ್‌ ಇಂಕಲ್ಲಿಸಹಿ ಮಾಡಿರುವ ಘಟನೆ ತಾಲೂಕು ಆರೋಗ್ಯಾಧಿಧಿಕಾರಿ ಕಚೇರಿಯಲ್ಲಿನಡೆದಿದೆ.

Vijaya Karnataka 26 Aug 2019, 5:00 am
ಮೊಳಕಾಲ್ಮುರು: ಡಿ.ಗ್ರೂಪ್‌ ನೌಕರನೊಬ್ಬ ತನ್ನ ಮೇಲಾಧಿಧಿಕಾರಿ ಕರ್ತವ್ಯಕ್ಕೆ ಹಾಜರಾಗದಿದ್ದರೂ ಅವರ ಪರವಾಗಿ ಗ್ರೀನ್‌ ಇಂಕಲ್ಲಿಸಹಿ ಮಾಡಿರುವ ಘಟನೆ ತಾಲೂಕು ಆರೋಗ್ಯಾಧಿಧಿಕಾರಿ ಕಚೇರಿಯಲ್ಲಿನಡೆದಿದೆ.
Vijaya Karnataka Web d group employee signature on behalf of the tho
ಟಿಎಚ್‌ಒ ಪರ ಡಿ.ಗ್ರೂಪ್‌ ನೌಕರ ಸಹಿ


ತಾಲೂಕು ಆರೋಗ್ಯಾಧಿಧಿಕಾರಿ ಡಾ.ತುಳಸಿ ರಂಗನಾಥ್‌ ಪರ ಡಿ.ಗ್ರೂಪ್‌ ನೌಕರನೊಬ್ಬ ಸಹಿ ಮಾಡಿ ಈಗ ತಪ್ಪೊಪ್ಪಿಕೊಂಡಿದ್ದಾನೆ.

ಟಿಎಚ್‌ಒ ಆಗಸ್ಟ್‌ 15ರ ಸ್ವಾತಂತ್ರ್ಯೋತ್ಸವಕ್ಕೂ ಹಾಜರಾಗಿಲ್ಲ. ಈ ತಿಂಗಳಲ್ಲಿಯಾರಿಗೂ ರಜೆ ಚೀಟಿಯನ್ನೂ ನೀಡದೆ ಕೆಲಸಕ್ಕೆ ಹಾಜರಾಗಿರುವುದು ಕೇವಲ ಒಂದು ದಿನ ಮಾತ್ರ. ಆದರೆ ಕಚೇರಿಯ ಅಟೆಂಡೆನ್ಸ್‌ನಲ್ಲಿಮಾತ್ರ ಪ್ರತಿ ದಿನವೂ ಹಾಜರಾಗಿರುವಂತೆ ಹಸಿರು ಇಂಕಲ್ಲಿಸಹಿ ಮಾಡಲಾಗಿದೆ.

ಟಿಎಚ್‌ಒ ಕಚೇರಿಗೆ ಇತ್ತೀಚಿಗೆ ಭೇಟಿ ನೀಡಿದ್ದ ಡಿಎಚ್‌ಒ ಡಾ.ಪಾಲಾಕ್ಷ ಅಟೆಂಡೆನ್ಸ್‌ ಪುಸ್ತಕ ಪರಿಶೀಲಿಸಿದ್ದಾರೆ. ಈತ ಕರ್ತವ್ಯಕ್ಕೆ ಹಾಜರಾದ ದಿನ ಹಾಗೂ ಬದಲು ಸಹಿ ಮಾಡಿದವರು ಯಾರೆಂದು ಮಾಹಿತಿ ಪಡೆದಿದ್ದಾರೆ.

ಇವರು ಕರ್ತವ್ಯಕ್ಕೆ ಗೈರಾಗುವುದು ಇದು ಮೊದಲೇನಲ್ಲ, ಜಿಲ್ಲಾಕೇಂದ್ರದಲ್ಲಿಯೇ ಇದ್ದು ಯಾವುದೇ ಕಾರ್ಯಕ್ರಮ, ಸಭೆ, ಮಿಟಿಂಗ್‌ಗಳಿಗೆ ಬಾರದೆ ತಮಗಿಷ್ಟ ಬಂದಾಗ ಬಂದೋಗುತ್ತಾರೆ ಎನ್ನುವ ದೂರು ತಾಪಂ ಸಭೆಗಳಲ್ಲಿಕೇಳುತ್ತಿತ್ತು. ಕೆಡಿಪಿ ಸಭೆಗಳಿಗೆ ಹಾಜರಾಗುತ್ತಿದ್ದ ಅಧಿಧೀನ ಅಧಿಧಿಕಾರಿಗಳು ಸಬೂಬು ಹೇಳುತ್ತಾ ಟಿಎಚ್‌ಒ ಪರ ಬ್ಯಾಟಿಂಗ್‌ ಮಾಡುತ್ತಿದ್ದರು. ಟಿಎಚ್‌ಒ ಬಗ್ಗೆ ಅನೇಕರು ಕಂಪ್ಲೇಂಟ್‌ ಮಾಡಿದ್ದು ಡಿಎಚ್‌ಒ ನಾಲ್ಕು ಬಾರಿ ವಿಸಿಟ್‌ ಮಾಡಿದ್ದಾರೆ. ಇದರಲ್ಲಿಒಮ್ಮೆ ಮಾತ್ರ ಸ್ಥಳದಲ್ಲಿದ್ದರು. ಇದುವರೆಗೂ ಕರ್ತವ್ಯಕ್ಕೆ ಹಾಜರಾಗಿಲ್ಲಎನ್ನಲಾಗಿದೆ.

========= ಕೋಟ್‌:

ಒಬ್ಬ ಟಿಎಚ್‌ಒ 'ಡಿ' ಗ್ರೂಪ್‌ ನೌಕರನಿಂದ ಅಟೆಂಡೆನ್ಸ್‌ಗೆ ಸಹಿ ಮಾಡಿಸಿರುವುದು ಅಪರಾಧ. ಆಗಸ್ಟ್‌ 16 ರಂದು ನಾನು ಭೇಟಿ ನೀಡುವ ವಿಷಯ ತಿಳಿದು ಅಂದು ಗ್ರೀನ್‌ ಇಂಕ್‌ ಮೂಲಕ ಸಿಎಲ್‌ ಅಂತ ಬರೆದಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸಲಾಗುವುದು.

-ಡಾ.ಪಾಲಾಕ್ಷ, ಡಿಎಚ್‌ಒ, ಚಿತ್ರದುರ್ಗ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ