ಆ್ಯಪ್ನಗರ

ಸಾಲಬಾಧೆ: ರೈತ ಆತ್ಮಹತ್ಯೆ

ತಾಲೂಕಿನ ಉಪ್ಪಳಗೆರೆ ಗ್ರಾಮದಲ್ಲಿಸಾಲಬಾಧೆಯಿಂದ ರೈತರೊಬ್ಬರು ಶುಕ್ರವಾರ ತನ್ನ ಮನೆಯಲ್ಲಿನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Vijaya Karnataka 2 Nov 2019, 9:14 pm
ಹಿರಿಯೂರು: ತಾಲೂಕಿನ ಉಪ್ಪಳಗೆರೆ ಗ್ರಾಮದಲ್ಲಿಸಾಲಬಾಧೆಯಿಂದ ರೈತರೊಬ್ಬರು ಶುಕ್ರವಾರ ತನ್ನ ಮನೆಯಲ್ಲಿನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web debt farmers suicide
ಸಾಲಬಾಧೆ: ರೈತ ಆತ್ಮಹತ್ಯೆ


ಉಪ್ಪಳಗೆರೆ ಗ್ರಾಮದ ವಾಸಿ ರಾಜಣ್ಣ(40) ಆತ್ಮಹತ್ಯೆ ಮಾಡಿಕೊಂಡ ರೈತ. ಉಪ್ಪಳಗೆರೆ ಗ್ರಾಮದಲ್ಲಿ1.20 ಎಕರೆ ಜಮೀನು ಹೊಂದಿದ್ದು, ನಾಲ್ಕು ಕೊಳವೆ ಬಾವಿ ಕೊರೆಸಿ ಅಡಕೆ ಬೆಳೆಸಿದ್ದರು. ಇದಕ್ಕಾಗಿ ತಾಲೂಕಿನ ನಾನಾ ಬ್ಯಾಂಕುಗಳಲ್ಲಿಹಾಗೂ ಕೈ ಸಾಲವಾಗಿ ಸುಮಾರು 7.90 ಲಕ್ಷ ರೂ. ಸಾಲ ಮಾಡಿದ್ದರು. ಆದರೆ, ಕಳೆದ ಎರಡು ವರ್ಷಗಳಿಂದ ಸರಿಯಾಗಿ ಮಳೆಯಿಲ್ಲದೇ ಕೊಳವೆಬಾವಿಗಳು ಬತ್ತಿ ಹೋಗಿ ಅಡಕೆ ತೋಟ ಸಂಪೂರ್ಣ ಒಣಗಿದೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿಕೇಸು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ