ಆ್ಯಪ್ನಗರ

ಬಿಸಿಲ ಝಳ ತಂಪುಪಾನಿಯಕ್ಕೆ ಡಿಮ್ಯಾಂಡ್‌

ಬಿಸಿಲ ತಾಪದಿಂದ ತಂಪುಪಾನಿಯ, ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬರದೂರು ಚಳ್ಳಕೆರೆಯಲ್ಲಿ ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಬೇಸಿಗೆ ಆರಂಭದಲ್ಲೇ ಬಿಸಿಲು ನಾಡಿನಲ್ಲಿ ಕೆಂಡದಂಥ ಬಿಸಿಲು, ಝಳ ತಾಳಲಾರದೆ ಜನರು ಘನ ಪದಾರ್ಥಕ್ಕಿಂತ, ತಂಪುಪಾನೀಯ ಮೊರೆ ಹೋಗುತ್ತಿರುವ ದೃಶ್ಯ ನಗರದೆಲ್ಲೆಡೆ ಸಾಮಾನ್ಯವಾಗಿದೆ.

Vijaya Karnataka 23 Mar 2019, 5:00 am
ಚಳ್ಳಕೆರೆ : ಬಿಸಿಲ ತಾಪದಿಂದ ತಂಪುಪಾನಿಯ, ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬರದೂರು ಚಳ್ಳಕೆರೆಯಲ್ಲಿ ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಬೇಸಿಗೆ ಆರಂಭದಲ್ಲೇ ಬಿಸಿಲು ನಾಡಿನಲ್ಲಿ ಕೆಂಡದಂಥ ಬಿಸಿಲು, ಝಳ ತಾಳಲಾರದೆ ಜನರು ಘನ ಪದಾರ್ಥಕ್ಕಿಂತ, ತಂಪುಪಾನೀಯ ಮೊರೆ ಹೋಗುತ್ತಿರುವ ದೃಶ್ಯ ನಗರದೆಲ್ಲೆಡೆ ಸಾಮಾನ್ಯವಾಗಿದೆ.
Vijaya Karnataka Web demand for hot water coolant
ಬಿಸಿಲ ಝಳ ತಂಪುಪಾನಿಯಕ್ಕೆ ಡಿಮ್ಯಾಂಡ್‌


ಬಿಸಿಲ ಝಳ, ಸೆಕೆಯಿಂದ ತಪ್ಪಿಸಿಕೊಳ್ಳಲು ನಾಗರಿಕರು ತಂಪಾದ ದ್ರವ ಆಹಾರಕ್ಕೆ ಮೊರೆ ಹೋಗಿದ್ದಾರೆ. ಮೊಸರು, ಮಜ್ಜಿಗೆ, ಕಬ್ಬಿನ ಹಾಲು, ನಾನಾ ಬಗೆಯ ಹಣ್ಣುಗಳ ಜ್ಯೂಸ್‌, ಕೂಲ್‌ ಡ್ರಿಂಕ್‌ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ. ಅದರಲ್ಲೂ ಎಳನೀರು, ಅಪರೂಪಕ್ಕೆ ಮಾರುಕಟ್ಟೆಗೆ ಬರುವ ತಾಳೆ ಕೊಬ್ಬರಿಗಂತೂ ಭಾರೀ ಡಿಮ್ಯಾಂಡ್‌ ಬಂದಿದೆ.

ನಗರದ ತಾಲೂಕು ಕಚೇರಿ ಬಳಿ ಫುಟ್‌ಪಾತ್‌ನಲ್ಲಿ ಶುಕ್ರವಾರ ವ್ಯಾಪಾರಿಯೊಬ್ಬ ಬಳ್ಳಾರಿಯಿಂದ ತಾಳೆ ಕೊಬ್ಬರಿ ಮಾರಾಟ ಮಾಡುತ್ತಿದ್ದು, ಇದನ್ನು ಸವಿಯಲು ಜನ ತಾ ಮುಂದು, ನಾ ಮುಂದು ಎಂದು ದಾಹ ತಣಿಸಿಕೊಳ್ಳುತ್ತಿರುವುದು ಕಂಡುಬಂತು. ಈ ಹಿಂದೆ ತಾಳೆ ಮರಗಳು ಕೆರೆ, ಜಮೀನು ಬದುವಿನಲ್ಲಿ ಮರಗಳಿದ್ದವು, ಮಳೆ ಕಡಿಮೆ ಆಗುತ್ತಾ ಪ್ರಕೃತಿ ಏರುಪೇರಿನಿಂದ ತಾಳೆ ಮರಗಳು ಕಣ್ಮರೆಯಾಗಿವೆ. ಆದರೆ, ವ್ಯಾಪಾರಿಯೊಬ್ಬ ಮಾರಾಟ ತಾಳೆ ಹಣ್ಣು ಮಾರಾಟ ಮಾಡುತ್ತಿದ್ದರೂ, ಜನರ ಬೇಡಿಕೆಯಷ್ಟು ಮಾರುಕಟ್ಟೆಗೆ ಬರುತ್ತಿಲ್ಲ.

----- ಕೋಟ್‌...

ತಾಳೆ ಕಾಯಿ ಕೊಬ್ಬರಿ ಆರೋಗ್ಯಕ್ಕೆ ತಂಪು ಮತ್ತು ಕೊಬ್ಬರಿಯೊಳಗೆ ಅಲ್ಪ ನೀರೇಗೆ ಜನ ದುಡ್ಡು ಕೊಡುವುದು. ಕೊಬ್ಬರಿಯೂ ತಿನ್ನಬಹುದು. ನಮ್ಮ ತಂದೆ ತಾತಂದಿರ ಕಾಲದಲ್ಲಿ ಹಳ್ಳಗಳ ದಂಡೆಗಳಲ್ಲಿ ಬೆಳೆಯುತ್ತಿದ್ದವು, ಈಗ ಅವು ಕಣ್ಮರೆಯಾಗಿವೆ. ಮರಹತ್ತಿ ಕೀಳುವುದೇ ಕಷ್ಟ. ಬಳ್ಳಾರಿಯಿಂದ ತಂದು ಮಾರಾಟ ಮಾಡುತ್ತಿದ್ದೇನೆ.

-ಬಸವರಾಜು, ವ್ಯಾಪಾರಿ.

ಕೋಟ್‌...


ಎಳೆನೀರು ಬೆಲೆ ಈಗ 35 ರೂ. ಇದ್ದರೆ, ಮೂರು ಕಣ್ಣಿನ ಒಂದು ತಾಳೆ ಕೊಬ್ಬರಿಗೆ ದೊಡ್ಡದು 20 ರೂ., ಸಣ್ಣದಿದ್ದಲ್ಲಿ 10 ರೂ. ಕೊಟ್ಟು ಜನ ಸವಿದು, ಮನೆಗೂ ಕೊಂಡೊಯ್ಯುತ್ತಿದ್ದಾರೆ. ಮಜ್ಜಿಗೆ, ಮೊಸರು, ದ್ರವರೂಪದ ಜ್ಯೂಸ್‌, ಕೂಲ್‌ ಡ್ರಿಂಕ್‌ಗೆ ಡಿಮ್ಯಾಂಡ್‌ ಹೆಚ್ಚಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಪಾನೀಯಗಳಿಗೆ ಬೇಡಿಕೆ ಇದೆ.

-ಸಣ್ಣೀರಣ್ಣ, ನಾಗಗೊಂಡನಹಳ್ಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ