ಆ್ಯಪ್ನಗರ

ವಿಕ ಹಾಸ್ಟೆಲ್‌ ರಿಯಾಲಿಟಿ ವರದಿಗೆ ಸ್ಪಂದನೆ | ನಗರಸಭೆಯಿಂದ ಜಾಗ ಮಂಜೂರು ಪ್ರಕ್ರಿಯೆ

ನಗರದ ಎಸ್‌ಟಿ ಹಾಸ್ಟೆಲ್ಲ್‌ ಸ್ವಂತ ಕಟ್ಟಡಕ್ಕೆ ನಗರಸಭೆ ನಿವೇಶನ ನೀಡಲು ಮುಂದಾಗಿದ್ದು, ಮಂಗಳವಾರ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಂತಿಮಗೊಳಿಸುವ ಪ್ರಕ್ರಿಯೆಗೆ ಮುಂದಾಗಿದ್ದಾರೆ.

Vijaya Karnataka 5 Dec 2018, 5:00 am
ಚಳ್ಳಕೆರೆ : ನಗರದ ಎಸ್‌ಟಿ ಹಾಸ್ಟೆಲ್ಲ್‌ ಸ್ವಂತ ಕಟ್ಟಡಕ್ಕೆ ನಗರಸಭೆ ನಿವೇಶನ ನೀಡಲು ಮುಂದಾಗಿದ್ದು, ಮಂಗಳವಾರ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಂತಿಮಗೊಳಿಸುವ ಪ್ರಕ್ರಿಯೆಗೆ ಮುಂದಾಗಿದ್ದಾರೆ.
Vijaya Karnataka Web department examines two sites
ವಿಕ ಹಾಸ್ಟೆಲ್‌ ರಿಯಾಲಿಟಿ ವರದಿಗೆ ಸ್ಪಂದನೆ | ನಗರಸಭೆಯಿಂದ ಜಾಗ ಮಂಜೂರು ಪ್ರಕ್ರಿಯೆ


ನಗರದಲ್ಲಿ ಹಾಸ್ಟೆಲ್‌ಗೆ ಬಾಡಿಗೆ ಕಟ್ಟಡ ದೊರೆಯದೆ ಹೊರವಲಯದ ಜಮೀನಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಕುರಿತು ವಿಕ ಹಾಸ್ಟೆಲ್‌ ರಿಯಾಲಿಟಿ ಅಭಿಯಾನದಡಿ ಸೋಮವಾರ ಪ್ರಕಟಿಸಿದ 'ಊಟಕ್ಕೆ ಓಡಾಟ, ವಾಸ್ತವ್ಯ ಪರದಾಟ' ವರದಿಗೆ ಸ್ಥಳೀಯ ಜನಪ್ರತಿನಿಧಿಗಳು, ಸಂಸದರು, ನಗರಸಭೆ ಹಾಗೂ ಇಲಾಖೆ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದಾರೆ.

ವಿಜಯ ಕರ್ನಾಟಕದಲ್ಲಿ ವರದಿ ಪ್ರಕಟವಾದ ದಿನ ಸೋಮವಾರವೇ ಚಿತ್ರದುರ್ಗ ಜಿಪಂ ಸಭೆಯಲ್ಲಿ ಸಂಸದ ಬಿ.ಎನ್‌. ಚಂದ್ರಪ್ಪ , ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸಂಬಂಧಪಟ್ಟ ಇಲಾಖಾಧಿಕಾರಿ ಪರಮೇಶ್ವರಪ್ಪ ಅವರಿಂದ ಮಾಹಿತಿ ಪಡೆದರು. ಅಲ್ಲದೆ ನಗರದ ಹೊರಗಡೆ ಯಾಕೆ ಹಾಸ್ಟೆಲ್‌ ಮಾಡಿದ್ದೀರಿ, ಮಕ್ಕಳಿಗೆ ಓಡಾಡಲು ತೊಂದರೆ ಆಗುತ್ತದೆ. ಚಳ್ಳಕೆರೆಯಲ್ಲೂ ಶಾಸಕ ಟಿ.ರಘುಮೂರ್ತಿ ಇಲಾಖೆ ಅಧಿಕಾರಿಗಳನ್ನು ಕರೆಸಿಕೊಂಡು ಕೇಳಿದ್ದಾರೆ. ವಿಕ ವರದಿಗೆ ಸ್ಪಂದಿಸಿದ ನಗರಸಭೆಯವರು ಕೂಡ ನಗರದ ಒಳಗಡೆ ಬಾಲಕ, ಬಾಲಕಿಯರಿಗೆ ಎರಡು ಹಾಸ್ಟೆಲ್‌ಗಳಿಗೂ ಜಾಗ ನೀಡುವುದಾಗಿ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಹಾಸ್ಟೆಲ್‌ಗೆ ಸ್ವಂತ ಕಟ್ಟಡ ಇರಲಿಲ್ಲ. ಇದೀಗ ನಗರಸಭೆಯಿಂದ ಗುರುತಿಸಿ ಜಾಗ ಕೊಡುವಂತೆ ಶಾಸಕರು ಸೂಚನೆ ನೀಡಿದ್ದರಿಂದ ಎರಡು ಸೈಟ್‌ ನೀಡಲು ಮುಂದಾಗಿದ್ದಾರೆ ಎಂದು ಕಲ್ಯಾಣಾಧಿಕಾರಿ ಮಾಲತಿ ವಿಕ ಗೆ ತಿಳಿಸಿದರು.

ಜಾಗ ಮಂಜೂರಾತಿಗೆ ನಗರಸಭೆಯಿಂದ ಡಿಸಿಯವರಿಗೆ ಕಡತ ಕಳಿಸಿದ್ದು, ಅಲ್ಲಿಂದ ಮಂಜೂರಾಗಿ ಬಂದ ಕೂಡಲೇ ಇಲಾಖೆ ವಶಕ್ಕೆ ಪಡೆದು ಹಾಸ್ಟೆಲ್‌ ಕಟ್ಟಡ ನಿರ್ಮಿಸಲು ಇಲಾಖೆಗೆ ಅನುದಾನಕ್ಕೆ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ