ಆ್ಯಪ್ನಗರ

10 ವರ್ಷ ಕಳೆದರೂ ಗೃಹ ನಿರ್ಮಾಣಕ್ಕೆ ನಯಾಪೈಸೆ ಕೊಟ್ಟಿಲ್ಲ!

ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಯಾಗಿ ಹತ್ತು ವರ್ಷ ಕಳೆಯುತ್ತಾ ಬಂದರೂ ಒಬ್ಬೇ ಒಬ್ಬ ಫಲಾನುಭವಿಗೆ ಗೃಹ ನಿರ್ಮಾಣಕ್ಕಾಗಿ ನಯಾಪೈಸೆ ಸಹಾಯ ಧನ ನೀಡಿಲ್ಲ. ಅಷ್ಟು ಮಾತ್ರವಲ್ಲ, ಈ ಸೌಲಭ್ಯ ಅನುಷ್ಠಾನಗೊಳಿಸುವ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳಿಗೂ ಯಾವುದೇ ಸೂಚನೆ ನೀಡಿಲ್ಲ...

Vijaya Karnataka 31 Aug 2019, 5:00 am
ಚಿತ್ರದುರ್ಗ : ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಯಾಗಿ ಹತ್ತು ವರ್ಷ ಕಳೆಯುತ್ತಾ ಬಂದರೂ ಒಬ್ಬೇ ಒಬ್ಬ ಫಲಾನುಭವಿಗೆ ಗೃಹ ನಿರ್ಮಾಣಕ್ಕಾಗಿ ನಯಾಪೈಸೆ ಸಹಾಯ ಧನ ನೀಡಿಲ್ಲ. ಅಷ್ಟು ಮಾತ್ರವಲ್ಲ, ಈ ಸೌಲಭ್ಯ ಅನುಷ್ಠಾನಗೊಳಿಸುವ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳಿಗೂ ಯಾವುದೇ ಸೂಚನೆ ನೀಡಿಲ್ಲ...
Vijaya Karnataka Web despite 10 years of homebuilding
10 ವರ್ಷ ಕಳೆದರೂ ಗೃಹ ನಿರ್ಮಾಣಕ್ಕೆ ನಯಾಪೈಸೆ ಕೊಟ್ಟಿಲ್ಲ!


ಕಟ್ಟಡ ಕಾರ್ಮಿಕರಿಗೆ ಭರವಸೆ ನೀಡಿರುವ ಸೌಲಭ್ಯಗಳಲ್ಲಿಗೃಹ ನಿರ್ಮಾಣಕ್ಕಾಗಿ ಎರಡು ಲಕ್ಷ ರೂ. ಸಹಾಯಧನ ನೀಡುವ ಯೋಜನೆ ಅತ್ಯಂತ ಆಕರ್ಷಣೀಯವಾದುದು. ಮಂಡಳಿಯ ಇತರೆ ಆಕರ್ಷಕ ಸೌಲಭ್ಯಗಳಂತೆ ಇದೂ ಕೂಡ ಕಾಗದದಲ್ಲಷ್ಟೇ ಉಳಿದಿದೆ.

ಕಟ್ಟಡ ಕಾರ್ಮಿಕರಿಗೆ ಸರಕಾರದ ಯಾವುದಾದರೂ ವಸತಿ ಯೋಜನೆಯಡಿ ಮನೆ ಮಂಜೂರಾಗಿದ್ದಲ್ಲಿಅಂಥ ಫಲಾನುಭವಿಗೆ ಮನೆ ನಿರ್ಮಾಣಕ್ಕಾಗಿ ಎರಡು ಲಕ್ಷ ರೂ. ಮುಂಗಡ ಸಹಾಯಧನ ನೀಡಬೇಕು ಎಂದು ಹೇಳಿದೆ. ಈ ಬಗ್ಗೆ ಕಾರ್ಮಿಕರು ವಿಚಾರಿಸಿದರೆ ಹೆಡ್‌ ಆಫೀಸ್‌ನಿಂದ ಏನೂ ಮಾಹಿತಿ ಬಂದಿಲ್ಲಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದ್ದಾರೆ.

ದಯನೀಯ ಸ್ಥಿತಿ:

ಜಿಲ್ಲೆಯಲ್ಲಿಒಟ್ಟು 38 ಸಾವಿರ ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿಶೇ.60ರಿಂದ 70ರಷ್ಟು ಮಾತ್ರ ನೈಜ ಕಟ್ಟಡ ಕಾರ್ಮಿಕರು ಇದ್ದಾರೆ. ಅವರಲ್ಲಿಶೇ.50ರಷ್ಟು ಕಾರ್ಮಿಕರಿಗೆ ಸೂರಿನ ವ್ಯವಸ್ಥೆ ಇಲ್ಲಎಂಬುದು ಕಟ್ಟಡ ಕಾರ್ಮಿಕ ಸಂಘಟನೆಗಳ ಅನಿಸಿಕೆ.

ಕಟ್ಟಡ ಕಾರ್ಮಿಕರು ತಾತ್ಕಾಲಿಕ ಶೆಡ್‌ಗಳು, ಬಾಡಿಗೆ ಮನೆ, ಕೆಲಸದ ಸ್ಥಳಗಳಲ್ಲೇ ಅತ್ಯಂತ ಕನಿಷ್ಟ ಮೂಲ ಸೌಕರ್ಯ ಇಲ್ಲದೇ, ಪ್ರತಿಕೂಲಕರ ವಾತಾವರಣದಲ್ಲಿಜೀವನ ನಿರ್ವಹಿಸುತ್ತಿದ್ದಾರೆ. ಆದರೆ, ಇದುವರೆಗೂ ಕಟ್ಟಡ ಕಾರ್ಮಿಕರಿಗೂ ಸೂರು ಕಲ್ಪಿಸುವ ವಿಚಾರ ಮುನ್ನೆಲೆಗೆ ಬಂದೇ ಇಲ್ಲ. ಮಂಡಳಿಯಲ್ಲಿರುವ ಸಹಸ್ರಾರು ಕೋಟಿ ರೂ. ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಲು ಇರುವ ಉತ್ಸಾಹ, ಕಾರ್ಮಿಕರಿಗೆ ಸೂರು ಕಲ್ಪಿಸಲು ಇಲ್ಲಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ನಗರ ಹಾಗೂ ಗ್ರಾಮೀಣ ಪ್ರದೇಶದ ಎರಡೂ ಕಡೆ ಇರುವ ಕಟ್ಟಡ ಕಾರ್ಮಿಕರದೂ ಒಂದೇ ಪರಿಸ್ಥಿತಿ. ನಗರ ಪ್ರದೇಶದಲ್ಲಿನಿವೇಶನ ಇದ್ದಲ್ಲಿಈಗ ಹೌಸಿಂಗ್‌ ಫಾರ್‌ ಆಲ್‌ ಸ್ಕೀಮ್‌ನಲ್ಲಿ3.50 ಲಕ್ಷ ರೂ. ಸಹಾಯಧನ ನೀಡುತ್ತಾರೆ. ಗ್ರಾಮೀಣ ಪ್ರದೇಶದ 1.50ರಿಂದ 1.75 ಲಕ್ಷದ ತನಕ ಸಹಾಯಧನ ಇದೆ. ಇದರ ಜತೆಗೆ ಮಂಡಳಿ ಎರಡು ಲಕ್ಷ ರೂ. ಕೊಟ್ಟಲ್ಲಿವಾಸ ಯೋಗ್ಯವಾದ ಮನೆ ನಿರ್ಮಿಸಿಕೊಳ್ಳಲು ಅನುಕೂಲ ಆಗಲಿದೆ ಎಂದು ಹೇಳುತ್ತಾರೆ.

ಮಂಡಳಿ ಸಹಾಯಧನ ನೀಡದ ಕಾರಣ ಇರುವ ವಸತಿ ಯೋಜನೆಗಳಲ್ಲಿಮನೆ ಮಂಜೂರಾದವರು ನಾಲ್ಕೈದು ಲಕ್ಷ ರೂ. ಖಾಸಗಿ ಸಾಲ ಮಾಡಿ ಮನೆ ನಿರ್ಮಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಇದು ಹೊರತುಪಡಿಸಿ ಬೇರೆ ಪರಿಹಾರದ ದಾರಿ ಕಾಣಿಸುತ್ತಿಲ್ಲ.

**

ಬಾಕ್ಸ್‌

ಸರಕಾರ ಮೌನ


ಕಟ್ಟಡ ಕಾರ್ಮಿಕರ ವಾಸ ಸ್ಥಳ ಅಧ್ಯಯನ ಮಾಡಿ ವರದಿ ನೀಡಬೇಕು ಎಂದು ಹೈಕೋರ್ಟ್‌ ಸೂಚನೆ ನೀಡಿದ್ದರೂ ರಾಜ್ಯ ಸರಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಗೃಹಭಾಗ್ಯ ಅನುಷ್ಠಾನಗೊಳಿಸದೇ ಇರಲು ಇರುವ ಕಾರಣಗಳನ್ನೂ ತಿಳಿಸಿಲ್ಲಎಂಬುದು ಕಾರ್ಮಿಕ ಸಂಘಟನೆಗಳ ಆರೋಪ.

**

ಕೋಟ್‌

ಕಳೆದ ಇಪ್ಪತ್ತು ವರ್ಷಗಳಿಂದಲೂ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದೇನೆ. ಒಂದು ವರ್ಷದ ಕೆಳಗೆ ನಮ್ಮೂರು ಈರಜ್ಜನಹಟ್ಟಿಯಲ್ಲಿಮನೆ ಕಟ್ಟಿಸಿದ್ದೇನೆ. ಸರಕಾರ ಮನೆ ಮಂಜೂರು ಮಾಡಿದಾಗ ಮಂಡಳಿಯಿಂದ ಎರಡು ಲಕ್ಷ ರೂ. ಕೊಡುತ್ತಾರೆ ಅಂತ ಹೇಳಿದರು. ವಿಚಾರಿಸಿದರೆ, ಮನೆಗಳಿಗೆ ಸಹಾಯಧನ ಕೊಡುತ್ತಿಲ್ಲಎಂದು ಹೇಳಿದರು. ಹೆಚ್ಚುವರಿಯಾಗಿ ಎರಡೂವರೆ ಲಕ್ಷ ರೂ. ಸಾಲ ಮಾಡಿ ಮನೆ ನಿರ್ಮಿಸಿ ಕೊಂಡಿದ್ದೇನೆ.

-ಲೋಕೇಶ್‌, ಕಟ್ಟಡ ಕಾರ್ಮಿಕ, ಈರಜ್ಜನಹಟ್ಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ