ಆ್ಯಪ್ನಗರ

ಕಾಡುಗೊಲ್ಲರ ಪ್ರಸ್ತುತ ಸ್ಥಿತಿಗತಿ ಕುರಿತ ಸಂವಾದ

ನಮ್ಮ ಸಮುದಾಯದ ಕೆಲ ಮುಂಚೂಣಿ ನಾಯಕರು ಭಿನ್ನ ಹಾದಿಯಲ್ಲಿರುವ ಕಾರಣ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹೋರಾಟಗಳಿಗೆ ಸ್ಪಷ್ಟ ನಿಲುವು ತಾಳಲು ಸಾಧ್ಯವಾಗುತ್ತಿಲ್ಲಎಂದು ಗೊಲ್ಲಸಮುದಾಯದ ಯುವ ಮುಖಂಡ ಕುಣಿಗಲ್‌ನ ಜಿ.ಕೆ.ನಾಗಣ್ಣ ಬೇಸರ ವ್ಯಕ್ತಪಡಿಸಿದರು.

Vijaya Karnataka 4 Nov 2019, 5:00 am
ಚಿತ್ರದುರ್ಗ: ನಮ್ಮ ಸಮುದಾಯದ ಕೆಲ ಮುಂಚೂಣಿ ನಾಯಕರು ಭಿನ್ನ ಹಾದಿಯಲ್ಲಿರುವ ಕಾರಣ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹೋರಾಟಗಳಿಗೆ ಸ್ಪಷ್ಟ ನಿಲುವು ತಾಳಲು ಸಾಧ್ಯವಾಗುತ್ತಿಲ್ಲಎಂದು ಗೊಲ್ಲಸಮುದಾಯದ ಯುವ ಮುಖಂಡ ಕುಣಿಗಲ್‌ನ ಜಿ.ಕೆ.ನಾಗಣ್ಣ ಬೇಸರ ವ್ಯಕ್ತಪಡಿಸಿದರು.
Vijaya Karnataka Web dialogue on the current status of wildlife
ಕಾಡುಗೊಲ್ಲರ ಪ್ರಸ್ತುತ ಸ್ಥಿತಿಗತಿ ಕುರಿತ ಸಂವಾದ

ನಗರದ ಪತ್ರಕರ್ತರ ಭವನದಲ್ಲಿಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಆಯೋಜಿಸಿದ್ದ ಕಾಡುಗೊಲ್ಲರ ಪ್ರಸ್ತುತ ಸ್ಥಿತಿಗತಿಯ ಕುರಿತ ಸಂವಾದ ಕಾರ್ಯಕ್ರಮದಲ್ಲಿಮಾತನಾಡಿ, ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿಸಕ್ರಿಯರಾಗಿರುವ ಕೆಲ ನಾಯಕರು ಒಂದೊಂದು ರೀತಿಯ ಐಡೆಂಟಿಟಿ ತೋರಿಸಿಕೊಂಡಿದ್ದಾರೆ. ಹಾಗಾ ಗಿ ನಮ್ಮ ಸಮುದಾಯದ ಸಾಂಸ್ಕೃ ತಿಕ ರಾಜಕೀಯ ದಲ್ಲಿದೊಡ್ಡ ಒಡಕು ಮೂಡಿದೆ ಎಂದರು. ನಮ್ಮ ನಾಯಕರಲ್ಲೇ ಒಂದು ಸ್ಪಷ್ಟತೆ ಸಿಗುತ್ತಿಲ್ಲಎಂದ ಮೇಲೆ ಯುವ ಜನರಲ್ಲಿಸ್ಪಷ್ಟತೆ ಸಿಗಲು ಹೇಗೆ ಸಾಧ್ಯ ? ನಮ್ಮ ಸಮುದಾಯದ ಅಸ್ಮಿತೆ ವಿರೋಧಿಗಳನ್ನು ನಾವು ಮೊದಲು ಹುಡುಕಿಕೊಳ್ಳಬೇಕಾಗಿದೆ. ನಮ್ಮ ಬುಡಕಟ್ಟಿನ ಸಾಂಸ್ಕೃತಿಕ ಅಸ್ಮಿತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿನಾವೆಲ್ಲರೂ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ನಮ್ಮ ಸಮುದಾಯದಲ್ಲಿನಾಯಕರಿಲ್ಲ, ಹೋರಾಟಗಾರರಿಲ್ಲಎಂಬ ಕಾರಣಕ್ಕೆ ಅಧಿಕಾರಿಗಳೇ ಶಾಮೀಲಾಗಿ ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವಲ್ಲಿಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಸಾಮಾಜಿಕ ಪ್ರಜ್ಞೆ ಇರುವ ನಾಯಕ ಬೇಕಾಗಿದೆ ಎಂದು ತಿಳಿಸಿದರು. ನಮ್ಮದು ಹಿಂದುಳಿದ ವರ್ಗಗಳಲ್ಲೇ ಅತ್ಯಂತ ಕಟ್ಟಕಡೆಯ ಸಮುದಾಯ ಎಂಬುದಾಗಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವರದಿಯಿಂದ ಗೊತ್ತಾಗಿದೆ. ಅಲ್ಲದೇ ಅತೀ ಕಡಿಮೆ ನೌಕರರು ಇರುವ ಸಮುದಾಯ ಇದಾಗಿದೆ. ಹಾಗಾಗಿ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಯ ಕಡೆ ಗಮನಹರಿಸಬೇಕಿದೆ ಎಂದರು. ನಮ್ಮ ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ಮುಖ್ಯವಾಗಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ಆಗಬೇಕು. ವಿಶೇಷ ಪ್ಯಾಕೇಜ್‌ ಘೋಷಣೆ ಆಗಬೇಕು. ವರ್ಗಾವಣೆ ಪತ್ರದಲ್ಲಿಕಾಡುಗೊಲ್ಲಇಲ್ಲದಿದ್ದರೆ ಸ್ವಯಂ ಘೋಷಣೆ ಪಡೆದು ಕಾಡುಗೊಲ್ಲಪ್ರಮಾಣ ಪತ್ರ ವಿತರಿಸಬೇಕು. ಎಸ್‌ಟಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.  ಐಐ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ