ಆ್ಯಪ್ನಗರ

ಕಲುಷಿತ ನೀರಿನಿಂದ ಅತಿಸಾರ ರೋಗ

ಶುದ್ಧ ಕುಡಿವ ನೀರು ಲಭಿಸದೆ, ಕಲುಷಿತ ಕುಡಿವ ನೀರಿನ ಸಮಸ್ಯೆಯಿಂದ ವಿಶ್ವದಲ್ಲಿ ಅತಿ ಹೆಚ್ಚು ಮಂದಿ ಅತಿಸಾರ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ಪ್ರಧಾನ ಸಿವಿಲ್‌ ನ್ಯಾಯಾಧೀಶ ಸಮೀರ್‌ ಪಿ. ನಂದ್ಯಾಲ್‌ ಹೇಳಿದರು.

Vijaya Karnataka 19 Mar 2019, 5:00 am
ಚಿತ್ರದುರ್ಗ : ಶುದ್ಧ ಕುಡಿವ ನೀರು ಲಭಿಸದೆ, ಕಲುಷಿತ ಕುಡಿವ ನೀರಿನ ಸಮಸ್ಯೆಯಿಂದ ವಿಶ್ವದಲ್ಲಿ ಅತಿ ಹೆಚ್ಚು ಮಂದಿ ಅತಿಸಾರ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ಪ್ರಧಾನ ಸಿವಿಲ್‌ ನ್ಯಾಯಾಧೀಶ ಸಮೀರ್‌ ಪಿ. ನಂದ್ಯಾಲ್‌ ಹೇಳಿದರು.
Vijaya Karnataka Web diarrhea from contaminated water
ಕಲುಷಿತ ನೀರಿನಿಂದ ಅತಿಸಾರ ರೋಗ


ನಗರದ ಸರಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ವಿಶ್ವ ಜಲ ದಿನದ ನಿಮಿತ್ತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಜಿಲ್ಲಾ ವಿಜ್ಞಾನ ಕೇಂದ್ರ, ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯ, ರೋಟರಿ ಇನ್ನರವ್ಹೀಲ್‌, ಲಯನ್ಸ್‌ ಕ್ಲಬ್‌, ಸರಕಾರಿ ವಿಜ್ಞಾನ ಕಾಲೇಜು, ವಾಸವಿ ಮಹಿಳಾ ಸಂಘದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಜಲ ಸಂರಕ್ಷ ಣ ಜಾಗೃತಿ ಜಾಥಾ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಗತ್ತಿನಲ್ಲಿ ಕಲುಷಿತ ನೀರಿನ ಸಮಸ್ಯೆಯಿಂದ ಪ್ರತಿವರ್ಷ ಅತಿ ಹೆಚ್ಚು ಜನರು ಅದರಲ್ಲೂ ಪ್ರಮುಖವಾಗಿ ಐದು ವರ್ಷದೊಳಗಿನ ಮಕ್ಕಳು ಹೆಚ್ಚಿನದಾಗಿ ಅತಿಸಾರಕ್ಕೆ ಒಳಗಾಗುತ್ತಾರೆ. ಆದ್ದರಿಂದ ಎಲ್ಲರಿಗೂ ಪರಿಶುದ್ಧ ನೀರು ಸಿಗಬೇಕು ಎಂದರೆ ಪರಿಸರ ಸ್ವಚ್ಛ ಹಾಗೂ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಇದರಿಂದ ಶುದ್ಧ ನೀರು ಲಭಿಸುವುದರ ಜತೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಎನ್‌.ಬಿ.ವಿಶ್ವನಾಥ್‌ ಮಾತನಾಡಿ, ಕುಡಿವ ನೀರನ್ನು ಶುಚಿತ್ವವಾಗಿ ಇಟ್ಟುಕೊಳ್ಳಬೇಕು. ನಗರಗಳಲ್ಲಿ ಕೆಲಕಡೆ ಚರಂಡಿಯ ಪಕ್ಕದಲ್ಲಿಯೇ ಕುಡಿವ ನೀರಿನ ನಲ್ಲಿ ಅಳವಡಿಸುತ್ತಾರೆ, ಚರಂಡಿ ನೀರು ಹರಿವ ಕಡೆಯಲ್ಲಿ ನಲ್ಲಿಗಳು ಇರುವುದರಿಂದ ನೀರು ಕಲುಷಿತಗೊಂಡು, ಜನರಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಿಸಲು ಕಾರಣವಾಗುತ್ತದೆ. ಹಾಗಾಗಿ ಸಂಬಂಧಿಸಿದ ಇಲಾಖೆಯವರು ಸೇರಿದಂತೆ ನಾಗರಿಕರು ಕೂಡ ಎಚ್ಚರವಹಿಸಬೇಕು ಎಂದು ಹೇಳಿದರು.

ಬೇಸಿಗೆಯ ತೀವ್ರತೆ ಹೆಚ್ಚಿರುವುರಿಂದ ಜಿಲ್ಲಾದ್ಯಂತ ಕುಡಿವ ನೀರಿನ ಸಮಸ್ಯೆ ಉಂಟಾಗಲಿದೆ. ನೀರಿಗಾಗಿ ಎಲ್ಲೆಡೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಎಲ್ಲರೂ ನೀರನ್ನು ಮಿತವಾಗಿ ಬಳಸಬೇಕು ಎಂದರು.

ಸರಕಾರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಎಂ.ಬಸವರಾಜಪ್ಪ ಮಾತನಾಡಿ, ಮನುಷ್ಯನಿಗೆ ಮುಖ್ಯವಾಗಿ ವಾಯು, ಜಲ, ಆಹಾರ ಇಲ್ಲದಿದ್ದರೆ ಅವನ ಜೀವಕ್ಕೆ ಕುತ್ತು ಬರುತ್ತದೆ. ಎಲ್ಲಾ ಹಳ್ಳಿಗಳಲ್ಲೂ ನೀರಿನ ಅಭಾವ ಎದ್ದು ಕಾಣುತ್ತದೆ. ಆದ್ದರಿಂದ ಹಳ್ಳಿಗಳಲ್ಲಿ ಇರುವಂತ ಕುಡಿವ ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳುವಂತೆ ಶಿಕ್ಷಿತರು ಸಮಾಜಕ್ಕೆ ತಿಳಿಸಿಕೊಡಬೇಕು ಎಂದರು.

ಅಪರ ನ್ಯಾಯಾಧೀಶ ಶಂಕರಪ್ಪ ಮಾಲಶೆಟ್ಟಿ, ಈಶ್ವರಿ ವಿಶ್ವವಿದ್ಯಾಲಯ ಶಿವರಶ್ಮಿ ಅಕ್ಕ, ರೋಟರಿ ಇನ್ನರವ್ಹೀಲ್‌ ಅಧ್ಯಕ್ಷೆ ರೇಖಾ ಸಂತೋಷ್‌, ಕಾರ್ಯದರ್ಶಿ ಶೈಲಜ ಸತ್ಯನಾರಾಯಣ, ಸದಸ್ಯೆ ಅಸ್ಮಾ, ಸರಕಾರಿ ವಿಜ್ಞಾನ ಕಾಲೇಜು ರೆಡ್‌ಕ್ರಾಸ್‌ ಕಾರ್ಯಕ್ರಮ ಅಧಿಕಾರಿ ಡಾ.ರಮೇಶ್‌ ಐಯ್ಯನಹಳ್ಳಿ, ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಡಾ.ಎಚ್‌.ಕೆ.ಎಸ್‌. ಸ್ವಾಮಿ ಹಾಗೂ ಸರಕಾರಿ ಕಾಲೇಜಿನ ಪ್ರಶಿಕ್ಷ ಣಾರ್ಥಿಗಳು ಮತ್ತು ಇತರೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಜಾಗೃತಿ ಜಾಥಾ
ನಗರದ ನಾನಾ ಶಾಲೆಗಳ ವಿದ್ಯಾರ್ಥಿಗಳು ಸರಕಾರಿ ವಿಜ್ಞಾನ ಕಾಲೇಜಿನ ಆವರಣದಿಂದ ಸ್ಟೇಡಿಯಂ ರಸ್ತೆವರೆಗೆ ಜಲ ಜಾಗೃತಿ ಜಾಥಾ ನಡೆಸಿದರು.

ಕಾಡಿದ್ದರೆ ನೀರು, ನೀರಿದ್ದರೆ ಕಾಡು, ಹೊಂಡಗಳ ರಕ್ಷ ಣೆಯಾಗಲಿ, ಜಲ ಮೂಲಗಳಿಗೆ ತ್ಯಾಜ್ಯ ಸುರಿಯಬೇಡಿ ಸೇರಿದಂತೆ ನೀರಿನ ಜಾಗೃತಿ ಸಂದೇಶ ಇರುವ ನಾಮಫಲಕ ಹಿಡಿದು ಸಾಗುವ ಮೂಲಕ ಸಾರ್ವಜನಿಕರಲ್ಲಿ ನೀರಿನ ಮಿತಬಳಕೆ, ನೀರನ ಸಂರಕ್ಷ ಣೆ ಬಗ್ಗೆ ಜಾಗೃತಿ ಮೂಡಿಸಿದರು. ಒನಕೆ ಓಬವ್ವ ಸೇರಿದಂತೆ ಮತ್ತಿತರ ವೇಷಭೂಷಣದಲ್ಲಿ ಬಾಲಕಿಯರು ಗಮನ ಸೆಳೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ