ಆ್ಯಪ್ನಗರ

ಬಿಜೆಪಿ ಜಿಲ್ಲಾ ಘಟಕದಿಂದ ದೇಣಿಗೆ ಸಂಗ್ರಹ

ರಾಜ್ಯದ ನೆರೆ ಸಂತ್ರಸ್ತರ ನೆರವಿಗಾಗಿ ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಮಂಗಳವಾರ ನಗದು, ಚೆಕ್‌ ಹಾಗೂ ನಾನಾ ವಸ್ತುಗಳ ರೂಪದಲ್ಲಿ ದೇಣಿಗೆ ಸಂಗ್ರಹಿಸಲಾಯಿತು.

Vijaya Karnataka 14 Aug 2019, 5:00 am
ಚಿತ್ರದುರ್ಗ : ರಾಜ್ಯದ ನೆರೆ ಸಂತ್ರಸ್ತರ ನೆರವಿಗಾಗಿ ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಮಂಗಳವಾರ ನಗದು, ಚೆಕ್‌ ಹಾಗೂ ನಾನಾ ವಸ್ತುಗಳ ರೂಪದಲ್ಲಿ ದೇಣಿಗೆ ಸಂಗ್ರಹಿಸಲಾಯಿತು.
Vijaya Karnataka Web donations from bjp district unit
ಬಿಜೆಪಿ ಜಿಲ್ಲಾ ಘಟಕದಿಂದ ದೇಣಿಗೆ ಸಂಗ್ರಹ


ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ನಗರದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಿಂದ ದೇಣಿಗೆ ಸಂಗ್ರಹ ಪಾದಯಾತ್ರೆ ಆರಂಭಿಸಿ, ಗಾಂಧಿ ವೃತ್ತ, ಬಿ.ಡಿ. ರಸ್ತೆ, ಎಸ್‌ಬಿಎಂ ಸರ್ಕಲ್‌ವರೆಗೆ ಪಾದಯಾತ್ರೆ ನಡೆಸಿ ಅಂತಿಮಗೊಳಿಸಲಾಯಿತು.

ಸಂಘ, ಸಂಸ್ಥೆಗಳು, ವರ್ತಕರು, ವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರು ತಮ್ಮ ಶಕ್ತ್ಯಾನುಸಾರ ಚೆಕ್‌, ನಗದು ಹಣ ಸೇರಿದಂತೆ ನಾನಾ ರೀತಿಯ ವಸ್ತುಗಳನ್ನು ನೀಡಿದರು. ಅಂಧರು ಕೂಡ ನಗದು ಹಣ ನೀಡಿ ಮಾನವೀಯತೆ ಮೆರೆದರು.

ಬಿ.ಡಿ ರಸ್ತೆ ಹಾಗೂ ವಾಸವಿ ಮಹಲ್‌ನ ಪ್ರತಿ ಅಂಗಡಿಗೆ ತೆರಳಿ ದೇಣಿಗೆ ಸಂಗ್ರಹಿಸಲಾಯಿತು. ವರ್ತಕರು ಅಕ್ಕಿ, ಬೇಳೆ, ಎಣ್ಣೆ, ಬಟ್ಟೆ, ಚಪ್ಪಲಿ, ಶೂ, ಪ್ಲಾಸ್ಟಿಕ್‌ ಬಿಂದಿಗೆ, ಸೀರೆ ಸೇರಿದಂತೆ ಮತ್ತಿತರ ವಸ್ತುಗಳನ್ನು ಉದಾರವಾಗಿ ನೀಡಿದರು. ನಿಧಿ ಸಂಗ್ರಹ ಬಾಕ್ಸ್‌ಗಳನ್ನು ಹಿಡಿದುಕೊಂಡು ಪಾದಯಾತ್ರೆ ಸಾಗಿದವರಿಗೆ ಎದುರುಗೊಂಡ ಸಾರ್ವಜನಿಕರು ಐವತ್ತು, ನೂರು, ಇನ್ನೂರು, ಐನೂರು, ಸಾವಿರ ಹೀಗೆ ತಮ್ಮ ಶಕ್ತ್ಯಾನುಸಾರ ನಗದು ಹಣ ನೀಡಿದರು. ಪಾದಯಾತ್ರೆ ಜತೆಗೆ ಸಾಗಿದ ಎರಡು ಲಾರಿಗಳಲ್ಲಿ ವಸ್ತುಗಳನ್ನು ಸಂಗ್ರಹಿಸಲಾಯಿತು.

ನಾನಾ ಸಂಘ, ಸಂಸ್ಥೆಗಳು:

ಪಾದಯಾತ್ರೆ ಸಾಗುವ ಮೊದಲು ನಗರದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ನಾನಾ ಸಂಘ, ಸಂಸ್ಥೆಗಳವರು ಶಾಸಕರಿಗೆ ನೆರೆ ಸಂತ್ರಸ್ತರ ನೆರವಿಗಾಗಿ ಚೆಕ್‌ ರೂಪದಲ್ಲಿ ದೇಣಿಗೆ ಸಲ್ಲಿಸಿದರು.

ರೆಡ್ಡಿ ಜನ ಸಂಘದಿಂದ ಮೂರು ಲಕ್ಷ ದ ಚೆಕ್‌, ವೀರಶೈವ ಸಮಾಜದಿಂದ ಒಂದು ಲಕ್ಷ , ಎಪಿಎಂಸಿ ದಲ್ಲಾಲರ ಸಂಘದಿಂದ ಒಂದು ಲಕ್ಷ , ಆರ್ಯವೈಶ್ಯ ಸಂಘದಿಂದ 6.50 ಲಕ್ಷ ಮೊತ್ತದ ನಾನಾ ಸಾಮಾಗ್ರಿಗಳು, ನಗರಸಭೆ ಸದಸ್ಯರಿಂದ ಒಂದೂವರೆ ಲಕ್ಷ ಮೌಲ್ಯದ ನಾನಾ ವಸ್ತು, ವಿಶ್ವಕರ್ಮ ಸಮಾಜದಿಂದ ಔಷಧ, ಬಟ್ಟೆ, ದವಸ ದಾನ್ಯ, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ್‌ 10 ಸಾವಿರದ ಚೆಕ್‌, ರಾಜೇಂದ್ರ 10 ಸಾವಿರ, ಸೀಬಾರದ ವಿಶ್ವಮಾನವ ಸಾಂಸ್ಕೃತಿಕ ವಿದ್ಯಾಸಂಸ್ಥೆಯಿಂದ ಹತ್ತು ಸಾವಿರದ ಚೆಕ್‌ ಮತ್ತು ಒಂದು ಸಾವಿರ ಮಕ್ಕಳಿಗೆ ಬಟ್ಟೆ, ನಗರಸಭೆ ಸದಸ್ಯ ಟಿ.ರಮೇಶ್‌ ಐವತ್ತು ಸೀರೆಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಮರ್ಚೆಂಟ್ಸ್‌ ಬ್ಯಾಂಕ್‌ ಅಧ್ಯಕ್ಷ ಎಸ್‌.ಆರ್‌. ಲಕ್ಷ್ಮಿಕಾಂತರೆಡ್ಡಿ, ವೀರಶೈವ ಸಮಾಜದ ಅಧ್ಯಕ್ಷ ಎನ್‌.ಜಯಣ್ಣ, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಎಸ್‌.ಎನ್‌. ಕಾಶಿವಿಶ್ವನಾಥ ಶ್ರೇಷ್ಠಿ, ದಲ್ಲಾಲರ ಸಂಘದ ಕಾರ್ಯದರ್ಶಿ ಎಚ್‌.ಎಂ. ದ್ಯಾಮಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌.ನವೀನ್‌, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ಯಾಮಲ ಶಿವಪ್ರಕಾಶ್‌, ಸಹ ಪ್ರಭಾರಿ ಜಿ.ಎಂ. ಸುರೇಶ್‌, ಪ್ರಧಾನ ಕಾರ್ಯದರ್ಶಿಗಳಾದ ರತ್ನಮ್ಮ, ಮುರುಳಿ, ಮಲ್ಲಿಕಾರ್ಜುನ್‌, ಗ್ರಾಮಾಂತರ ಅಧ್ಯಕ್ಷ ಸುರೇಶ್‌ ಸಿದ್ದಾಪುರ, ವಕ್ತಾರ ನಾಗರಾಜ್‌ ಬೇದ್ರೆ, ನಗರಸಭೆ ಸದಸ್ಯರಾದ ವೆಂಕಟೇಶ್‌, ಟಿ.ರಮೇಶ್‌, ಎಚ್‌.ಶ್ರೀನಿವಾಸ್‌, ಜೆ.ಶಶಿಧರ್‌, ಮುಖಂಡರಾದ ಸಿದ್ದೇಶ್‌ ಯಾದವ್‌, ಬದ್ರಿನಾಥ್‌, ಕೆ.ತಿಪ್ಪೇಸ್ವಾಮಿ, ನವೀನ್‌, ರವಿಕುಮಾರ್‌, ಶಿವಣ್ಣಾಚಾರ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ