ಆ್ಯಪ್ನಗರ

ಕುಡಿವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮವಹಿಸಿ

'ಮುಂಬರುವ ಬೇಸಿಗೆಯಲ್ಲಿ ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಸರಕಾರದಿಂದ ಎಷ್ಟು ಕೋಟಿ ಹಣವನ್ನಾದರು ನಾನು ತರುತ್ತೇನೆ. ಎಲ್ಲೂ ಕುಡಿವ ನೀರಿನ ಸಮಸ್ಯೆ ತಲೆದೋರದಂತೆ ನಿಗಾ ವಹಿಸಬೇಕು ಎಂದು ಶಾಸಕ ಎಂ. ಚಂದ್ರಪ್ಪ ಪಿಡಿಒಗಳಿಗೆ ಸೂಚಿಸಿದರು.

Vijaya Karnataka 16 Dec 2018, 5:00 am
ಹೊಳಲ್ಕೆರೆ : 'ಮುಂಬರುವ ಬೇಸಿಗೆಯಲ್ಲಿ ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಸರಕಾರದಿಂದ ಎಷ್ಟು ಕೋಟಿ ಹಣವನ್ನಾದರು ನಾನು ತರುತ್ತೇನೆ. ಎಲ್ಲೂ ಕುಡಿವ ನೀರಿನ ಸಮಸ್ಯೆ ತಲೆದೋರದಂತೆ ನಿಗಾ ವಹಿಸಬೇಕು ಎಂದು ಶಾಸಕ ಎಂ. ಚಂದ್ರಪ್ಪ ಪಿಡಿಒಗಳಿಗೆ ಸೂಚಿಸಿದರು.
Vijaya Karnataka Web drink water problem
ಕುಡಿವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮವಹಿಸಿ


ಸ್ಥಳೀಯ ತಾಪಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಪಂ ಪಿಡಿಒಗಳ ಸಭೆಯನ್ನುದ್ದೇಶಿಸಿ ಮಾತನಾಡಿ, ಈಗಾಗಲೇ ಬೇಸಿಗೆ ಸಮೀಪಿಸಿದಂತೆ ಹಲವಾರು ಗ್ರಾಪಂ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಕುಡಿವ ನೀರು ಪೂರೈಕೆ ಮಾಡುವ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕುಸಿದಿದೆ. ನೀರು ಭೂಮಿಯ ಆಳಕ್ಕೆ ಹೋಗಿರುವುದರಿಂದ ಈಗಿರುವ ಕೊಳವೆ ಬಾವಿಗಳಿಗೆ ಹೆಚ್ಚುವರಿ ಪೈಪ್‌ಗಳನ್ನು ಅಳವಡಿಸಿ ಕುಡಿವ ನೀರನ್ನು ಪೂರೈಕೆ ಮಾಡುವಂತೆ ಪಿಡಿಒಗಳಿಗೆ ಶಾಸಕರು ತಿಳಿಸಬೇಕು. ಈ ಕರ್ತವ್ಯದಲ್ಲಿ ಲೋಪವೆಸಗಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮತೆಗೆದುಕೊಳ್ಳುವೆ. ಜತೆಗೆ ಅಂತಹವರನ್ನು ಸೇವೆಯಿಂದ ಅಮಾನತು ಮಾಡಲಾಗುವುದು ಎಂದರು.

ಸೂಳೆಕೆರೆ ನೀರು

ಇಡೀ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಸೂಳೆಕೆರೆಯಿಂದ ನೀರು ಪೂರೈಕೆ ಮಾಡಲಾಗುವುದು. ಎರಡು ಕಡೆ ಪೈಪ್‌ಲೈನ್‌ ಅಳವಡಿಸಿದ್ದು, ಸುಮಾರು 12 ಸಾವಿರ ದಶಲಕ್ಷ ಲೀಟರ್‌ ನೀರನ್ನು ಕುಡಿವ ನೀರಿಗಾಗಿ ಬಳಸಿಕೊಳ್ಳಲಾಗುವುದು. ಯಾವುದೇ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಿದರೆ ತಕ್ಷ ಣವೇ ಟಾಸ್ಕ್‌ ಫೋರ್ಸ್‌ ಸಮಿತಿಗೆ ತಿಳಿಸಬೇಕು ಎಂದರು.

ಪ್ರತಿ ಗ್ರಾಪಂ ಪಿಡಿಒಗಳು 24 ಗಂಟೆ ತಮ್ಮ ಸ್ವಸ್ಥಾನದಲ್ಲಿ ಹಾಜರಿರಬೇಕು. ಎರಡನೇ ಹಂತದಲ್ಲಿ ಸೂಳೆಕೆರೆಯಿಂದ 165 ಕೋಟಿ ರೂ. ವೆಚ್ಚದಲ್ಲಿ ಚನ್ನಗಿರಿ ತಾಲೂಕಿಗೆ ಸೇರಿದ 70 ಹಳ್ಳಿ ಮತ್ತು ಹೊಳಲ್ಕೆರೆ ತಾಲೂಕಿನ 16 ಹಳ್ಳಿಗಳಿಗೆ ಕುಡಿವ ನೀರಿನ ಯೋಜನೆ ಈಗಾಗಲೇ ಅಸ್ತಿತ್ವಕ್ಕೆ ಬಂದಿದೆ. ಆದ್ದರಿಂದ ಈ ಭಾಗದಲ್ಲಿ ಬರುವ ಎಲ್ಲ ಹಳ್ಳಿಗಳಿಗೆ ಕುಡಿವ ನೀರನ್ನು ಪೂರೈಸಬೇಕು ಎಂದರು.

ಓವರ್‌ಹೆಡ್‌ ಟ್ಯಾಂಕ್‌

ಚನ್ನಗಿರಿ ಮೂಲಕ ಬರುವ ನೀರಿನ ಸರಬರಾಜನ್ನು ದುಮ್ಮಿ, ಕಾಲ್ಕೆರೆ, ದೊಗ್ಗನಾಳ್‌, ತುಪ್ಪದಹಳ್ಳಿ ಮುಂತಾದ ಕಡೆಗೆ ಹರಿಸಲು ದುಮ್ಮಿ ಗುಡ್ಡದ ಮೇಲೆ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಿ ಆ ಮೂಲಕ ಆ ಭಾಗದ ಎಲ್ಲ ಹಳ್ಳಿಗಳಿಗೆ ಕುಡಿವ ನೀರನ್ನು ಪೂರೈಕೆ ಮಾಡಲಾಗುವುದು. ಅದೇ ಪೈಪ್‌ನಿಂದ ಕುಡಿನೀರಕಟ್ಟೆ ಕೆರೆಯ ಪಕ್ಕದಲ್ಲಿರುವ ಗುಡ್ಡದ ಮೇಲೆ 5 ಲಕ್ಷ ಲೀಟರ್‌ ಸಾಮರ್ಥ್ಯ‌ದ ಕುಡಿವ ನೀರಿನ ಟ್ಯಾಂಕ್‌ಅನ್ನು ನಿರ್ಮಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಟ್ಯಾಂಕರ್‌ಗಳ ಮೂಲಕ ಕುಡಿವ ನೀರನ್ನು ಯಾವ ಗ್ರಾಮಗಳಿಗೂ ಸರಬರಾಜು ಮಾಡಕೂಡದು. ಎಷ್ಟೇ ಕಷ್ಟವಾದರೂ ನೀರು ಎಲ್ಲಿ ಲಭ್ಯ ಎಂಬ ಬಗ್ಗೆ ಮಾಹಿತಿ ಪಡೆದು ಅಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ ನೀರನ್ನು ಸರಬರಾಜು ಮಾಡಬೇಕು. ಇದಕ್ಕೆ ಬೇಕಾದ ವಿದ್ಯುತ್‌ ಸಂಪರ್ಕವನ್ನು ಬೆಸ್ಕಾಂ ಇಲಾಖೆ ತಕ್ಷ ಣವೇ ಕಲ್ಪಿಸಬೇಕು ಎಂದು ಸಭೆಯಲ್ಲಿದ್ದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ಶಾಸಕರು ತಾಕೀತು ಮಾಡಿದರು.

ತಾಪಂ ಅಧ್ಯಕ್ಷೆ ಸುಜಾತಾ ಧನಂಜಯ್‌ ನಾಯ್ಕ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್‌, ತಾಪಂ ಸದಸ್ಯ ಆಡನೂರು ಶಿವಕುಮಾರ್‌, ಇಒ ಮಹಾಂತೇಶ್‌, ತಹಸೀಲ್ದಾರ್‌ ವೈ.ತಿಪ್ಪೇಸ್ವಾಮಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ