ರವಿ ಉಗ್ರಾಣ
ಚಿತ್ರದುರ್ಗ: ವಿಕ್ಟೋರಿಯಾ ರಾಣಿ ಚಿತ್ರವಿರುವ ಅರ್ಧ ಕೆಜಿ ನಕಲಿ ಬಂಗಾರದ ನಾಣ್ಯಗಳನ್ನು ದಾವಣಗೆರೆ ಪಾಸಿಂಗ್ ಇರುವ ಸ್ವಿಫ್ಟ್ ಕಾರಿನಲ್ಲಿ ಬಂದ ಮೂವರು ಆರೋಪಿಗಳು ಖಾಸಗಿ ವ್ಯಕ್ತಿಯೊಬ್ಬರಿಗೆ ನೀಡುವಾಗ, ಚಿತ್ರದುರ್ಗ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಮಾಚ್ಚಹಳ್ಳಿ ಕೊರಚರಹಳ್ಳಿ ವಾಸಿ ಕೆ. ಸುರೇಶ್ (25), ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಚೆಲ್ಲಾಪುರ ಗ್ರಾಮದ ಲಾರಿ ಚಾಲಕ ಕೇಶವಮೂರ್ತಿ (30), ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ವಡೇರಹಳ್ಳಿ ಕೊರಚರಹಟ್ಟಿ ಗ್ರಾಮದ ಶೇಖರಪ್ಪ (48) ಬಂಧಿತ ಆರೋಪಿಗಳು.
ಗುಪ್ತ ಮಾಹಿತಿ ಸಂಗ್ರಹಿಸಿದ ಪೊಲೀಸರು ಶನಿವಾರ ಬೆಳಗ್ಗೆ ಚಿತ್ರದುರ್ಗ ನಗರದ ಪಿಳ್ಳೆಕೆರನಹಳ್ಳಿ ಬಳಿಯ ಬಾಪೂಜಿ ಕಾಲೇಜು ಹಿಂಭಾಗದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಡೀಲ್ ಕುದುರಿದ್ದು ಹೇಗೆ?: ಖಾಸಗಿ ವ್ಯಕ್ತಿ ಮತ್ತು ಆರೋಪಿಗಳ ನಡುವೆ ಮೊಬೈಲ್ ಮೂಲಕ ಪರಿಚಯವಾಗಿದ್ದು, ಜಮೀನಿನಲ್ಲಿ ಹೊಲ ಉಳುಮೆ ಸಮಯದಲ್ಲಿ ಸುಮಾರು ಎರಡು ಕೆಜಿ ಬಂಗಾರದ ನಾಣ್ಯಗಳು ಸಿಕ್ಕಿದೆ. ಇದರ ಮೌಲ್ಯ 14 ಲಕ್ಷವಿದ್ದು, ನಿಮಗೆ ಕಡಿಮೆ ದರದಲ್ಲಿ ಕೊಡುತ್ತೇವೆಂದು ಪದೇ, ಪದೇ ಪೋನ್ ಮಾಡಿದ್ದಾರೆ.
ಆಗ ಖಾಸಗಿ ವ್ಯಕ್ತಿ ನನ್ನ ಬಳಿ ಅಷ್ಟೊಂದು ಹಣವಿಲ್ಲ, ನಮಗೆ ಬಂಗಾರ ಬೇಡ ಎಂದಿದ್ದಾರೆ. ಈ ಸಂದರ್ಭದಲ್ಲಿ ಖಾಸಗಿ ವ್ಯಕ್ತಿ ಮನವೊಲಿಸಿದ ಆರೋಪಿಗಳು ನಿಮಗೆ ನಂಬಿಕೆ ಬಾರದೆ ಹೋದರೆ ಒಂದು ಬಂಗಾರದ ನಾಣ್ಯ ನಿಮಗೆ ಕೊಡುತ್ತೇವೆ ಎಂದು ಹೇಳಿ ಮೊದಲು ಚಿತ್ರದುರ್ಗದಲ್ಲಿ ಭೇಟಿ ಮಾಡಿದ್ದಾರೆ. ಬಳಿಕ ಖಾಸಗಿ ವ್ಯಕ್ತಿಗೆ ಸಾವಿರದಿಂದ ಒಂದೂ ಸಾವಿರ ರೂ. ಮೌಲ್ಯದ 500 ಮಿಲೀ ವಿಕ್ಟೋರಿಯಾ ರಾಣಿ ಚಿತ್ರವಿರುವ ಬಂಗಾರದ ನಾಣ್ಯವನ್ನು ಆರೋಪಿಗಳು ಕೊಡುತ್ತಾರೆ.
ಅದನ್ನು ಚೆಕ್ ಮಾಡಿಸಿದಾಗ ಇದು ಒರಿಜಿನಲ್ ಬಂಗಾರ ನಾಣ್ಯ ಎಂದು ಗೊತ್ತಾಗುತ್ತದೆ. ಆ ಬಳಿಕ ಆರೋಪಿಗಳನ್ನು ಭೇಟಿ ಮಾಡಿದ ಖಾಸಗಿ ವ್ಯಕ್ತಿ, ಅರ್ಧ ಕೆಜಿ ಬಂಗಾರದ ನಾಣ್ಯ ಕೊಡಿ ಎಂದು ಹೇಳುತ್ತಾನೆ. ಅಲ್ಲಿಗೆ ಏಳೂವರೆ ಲಕ್ಷ ರೂ. ಗೆ ಡೀಲ್ ಕುದುರುತ್ತದೆ.
ಅಷ್ಟೊತ್ತಿಗಾಗಲೇ ಈ ಕುರಿತಾದ ಮಾಹಿತಿ ಎಸ್ಪಿ ರಾಧಿಕಾ ಅವರಿಗೆ ಹೋಗುತ್ತದೆ. ಮಾಹಿತಿಯನ್ನಾಧರಿಸಿದ ಎಸ್ಪಿ ರಾಧಿಕಾ ಮತ್ತವರ ತಂಡ, ಆರೋಪಿಗಳನ್ನು ಪತ್ತೆ ಮಾಡಿದ್ದು, ಇದೀಗ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಉಳಿದ ಆರೋಪಿತರು ಹಾಗೂ ನಕಲಿ ನಾಣ್ಯಗಳನ್ನು ತಯಾರು ಮಾಡುತ್ತಿದ್ದ ಆರೋಪಿತರ ಬಗ್ಗೆ ತನಿಖೆ ಮುಂದುವರೆದಿದೆ.
ವಿಕ್ಟೋರಿಯಾ ರಾಣಿ ಚಿತ್ರದ ನಾಣ್ಯ: ಬ್ರಿಟಿಷ್ ರಾಣಿ ವಿಕ್ಟೋರಿಯಾ 1819 ರಿಂದ 1901ರ ತನಕ ಬ್ರಿಟನ್ ಆಳ್ವಿಕೆ ಮಾಡಿದ್ದು, ಆ ಕಾಲದಲ್ಲಿ ಅಪಾರ ಸಂಪತ್ತು ಇತ್ತು. ಆದ್ದರಿಂದ ಇದು ಹಳೆ ಕಾಲದ ನಾಣ್ಯಗಳು ಎಂದು ಬಿಂಬಿಸಲು ಆರೋಪಿಗಳು ವಿಕ್ಟೋರಿಯಾ ರಾಣಿ ಚಿತ್ರವಿರುವ ನಾಣ್ಯವನ್ನು ಬಳಕೆ ಮಾಡಿರುತ್ತಾರೆ.
ಚಿತ್ರದುರ್ಗ: ವಿಕ್ಟೋರಿಯಾ ರಾಣಿ ಚಿತ್ರವಿರುವ ಅರ್ಧ ಕೆಜಿ ನಕಲಿ ಬಂಗಾರದ ನಾಣ್ಯಗಳನ್ನು ದಾವಣಗೆರೆ ಪಾಸಿಂಗ್ ಇರುವ ಸ್ವಿಫ್ಟ್ ಕಾರಿನಲ್ಲಿ ಬಂದ ಮೂವರು ಆರೋಪಿಗಳು ಖಾಸಗಿ ವ್ಯಕ್ತಿಯೊಬ್ಬರಿಗೆ ನೀಡುವಾಗ, ಚಿತ್ರದುರ್ಗ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಗುಪ್ತ ಮಾಹಿತಿ ಸಂಗ್ರಹಿಸಿದ ಪೊಲೀಸರು ಶನಿವಾರ ಬೆಳಗ್ಗೆ ಚಿತ್ರದುರ್ಗ ನಗರದ ಪಿಳ್ಳೆಕೆರನಹಳ್ಳಿ ಬಳಿಯ ಬಾಪೂಜಿ ಕಾಲೇಜು ಹಿಂಭಾಗದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಡೀಲ್ ಕುದುರಿದ್ದು ಹೇಗೆ?: ಖಾಸಗಿ ವ್ಯಕ್ತಿ ಮತ್ತು ಆರೋಪಿಗಳ ನಡುವೆ ಮೊಬೈಲ್ ಮೂಲಕ ಪರಿಚಯವಾಗಿದ್ದು, ಜಮೀನಿನಲ್ಲಿ ಹೊಲ ಉಳುಮೆ ಸಮಯದಲ್ಲಿ ಸುಮಾರು ಎರಡು ಕೆಜಿ ಬಂಗಾರದ ನಾಣ್ಯಗಳು ಸಿಕ್ಕಿದೆ. ಇದರ ಮೌಲ್ಯ 14 ಲಕ್ಷವಿದ್ದು, ನಿಮಗೆ ಕಡಿಮೆ ದರದಲ್ಲಿ ಕೊಡುತ್ತೇವೆಂದು ಪದೇ, ಪದೇ ಪೋನ್ ಮಾಡಿದ್ದಾರೆ.
ಆಗ ಖಾಸಗಿ ವ್ಯಕ್ತಿ ನನ್ನ ಬಳಿ ಅಷ್ಟೊಂದು ಹಣವಿಲ್ಲ, ನಮಗೆ ಬಂಗಾರ ಬೇಡ ಎಂದಿದ್ದಾರೆ. ಈ ಸಂದರ್ಭದಲ್ಲಿ ಖಾಸಗಿ ವ್ಯಕ್ತಿ ಮನವೊಲಿಸಿದ ಆರೋಪಿಗಳು ನಿಮಗೆ ನಂಬಿಕೆ ಬಾರದೆ ಹೋದರೆ ಒಂದು ಬಂಗಾರದ ನಾಣ್ಯ ನಿಮಗೆ ಕೊಡುತ್ತೇವೆ ಎಂದು ಹೇಳಿ ಮೊದಲು ಚಿತ್ರದುರ್ಗದಲ್ಲಿ ಭೇಟಿ ಮಾಡಿದ್ದಾರೆ. ಬಳಿಕ ಖಾಸಗಿ ವ್ಯಕ್ತಿಗೆ ಸಾವಿರದಿಂದ ಒಂದೂ ಸಾವಿರ ರೂ. ಮೌಲ್ಯದ 500 ಮಿಲೀ ವಿಕ್ಟೋರಿಯಾ ರಾಣಿ ಚಿತ್ರವಿರುವ ಬಂಗಾರದ ನಾಣ್ಯವನ್ನು ಆರೋಪಿಗಳು ಕೊಡುತ್ತಾರೆ.
ಅದನ್ನು ಚೆಕ್ ಮಾಡಿಸಿದಾಗ ಇದು ಒರಿಜಿನಲ್ ಬಂಗಾರ ನಾಣ್ಯ ಎಂದು ಗೊತ್ತಾಗುತ್ತದೆ. ಆ ಬಳಿಕ ಆರೋಪಿಗಳನ್ನು ಭೇಟಿ ಮಾಡಿದ ಖಾಸಗಿ ವ್ಯಕ್ತಿ, ಅರ್ಧ ಕೆಜಿ ಬಂಗಾರದ ನಾಣ್ಯ ಕೊಡಿ ಎಂದು ಹೇಳುತ್ತಾನೆ. ಅಲ್ಲಿಗೆ ಏಳೂವರೆ ಲಕ್ಷ ರೂ. ಗೆ ಡೀಲ್ ಕುದುರುತ್ತದೆ.
ಅಷ್ಟೊತ್ತಿಗಾಗಲೇ ಈ ಕುರಿತಾದ ಮಾಹಿತಿ ಎಸ್ಪಿ ರಾಧಿಕಾ ಅವರಿಗೆ ಹೋಗುತ್ತದೆ. ಮಾಹಿತಿಯನ್ನಾಧರಿಸಿದ ಎಸ್ಪಿ ರಾಧಿಕಾ ಮತ್ತವರ ತಂಡ, ಆರೋಪಿಗಳನ್ನು ಪತ್ತೆ ಮಾಡಿದ್ದು, ಇದೀಗ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಉಳಿದ ಆರೋಪಿತರು ಹಾಗೂ ನಕಲಿ ನಾಣ್ಯಗಳನ್ನು ತಯಾರು ಮಾಡುತ್ತಿದ್ದ ಆರೋಪಿತರ ಬಗ್ಗೆ ತನಿಖೆ ಮುಂದುವರೆದಿದೆ.
ವಿಕ್ಟೋರಿಯಾ ರಾಣಿ ಚಿತ್ರದ ನಾಣ್ಯ: ಬ್ರಿಟಿಷ್ ರಾಣಿ ವಿಕ್ಟೋರಿಯಾ 1819 ರಿಂದ 1901ರ ತನಕ ಬ್ರಿಟನ್ ಆಳ್ವಿಕೆ ಮಾಡಿದ್ದು, ಆ ಕಾಲದಲ್ಲಿ ಅಪಾರ ಸಂಪತ್ತು ಇತ್ತು. ಆದ್ದರಿಂದ ಇದು ಹಳೆ ಕಾಲದ ನಾಣ್ಯಗಳು ಎಂದು ಬಿಂಬಿಸಲು ಆರೋಪಿಗಳು ವಿಕ್ಟೋರಿಯಾ ರಾಣಿ ಚಿತ್ರವಿರುವ ನಾಣ್ಯವನ್ನು ಬಳಕೆ ಮಾಡಿರುತ್ತಾರೆ.