ಆ್ಯಪ್ನಗರ

ಮೊಮ್ಮಗನಿಗೆ ಆಸ್ತಿ ಬರೆಯುತ್ತೇನೆ ಎಂದ ತಂದೆ; ಅಣ್ಣನ ಮಗನ ಕೊಲೆ ಮಾಡಿಬಿಟ್ಟ ತಮ್ಮ!

ಕೊಲೆ ಮಾಡಿದ ಬಳಿಕ ಬೆಂಗಳೂರು ಸೇರಿದ್ದ ಆರೋಪಿ ಚಿರಂಜೀವಿಯನ್ನು ನಾಯಕನಹಟ್ಟಿ ಪೊಲೀಸರು ಬಂಧಿಸಿದ್ದಾರೆ. ನಾಯಕನಹಟ್ಟಿ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ

Vijaya Karnataka Web 6 Mar 2020, 10:13 pm
ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಮೀಪದ ಬೋಸೆದೇವರಹಟ್ಟಿಯಲ್ಲಿ ಆಸ್ತಿಗಾಗಿ ಸ್ವಂತ ಚಿಕ್ಕಪ್ಪನೇ ಅಣ್ಣನ ಮಗನನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಜಿ. ರಾಧಿಕಾ ತಿಳಿಸಿದರು.
Vijaya Karnataka Web ಪೊಲೀಸ್‌
ಪೊಲೀಸ್‌


ನಗರದ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೋಸೆದೇವರಹಟ್ಟಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ ಗೋವಿಂದ ಅಜಿತ್‌ (8) ಕೊಲೆಯಾದ ಬಾಲಕ. ಬಾಲಕನ ಚಿಕ್ಕಪ್ಪ ಚಿರಂಜೀವಿ (25) ಕೊಲೆ ಮಾಡಿದ ವ್ಯಕ್ತಿ. ಕೊಲೆ ಮಾಡಿದ ಬಳಿಕ ಬೆಂಗಳೂರು ಸೇರಿದ್ದ ಆರೋಪಿ ಚಿರಂಜೀವಿಯನ್ನು ನಾಯಕನಹಟ್ಟಿ ಪೊಲೀಸರು ಬಂಧಿಸಿದ್ದಾರೆ. ನಾಯಕನಹಟ್ಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದರು.

ವಿವರ:

ಬೋಸೆದೇವರಹಟ್ಟಿಯ ಜಗಲು ಪಾಪಯ್ಯ ಅವರ ಮೂವರು ಮಕ್ಕಳಲ್ಲಿ ರಂಗಪ್ಪ ಹಾಗೂ ಮತ್ತೊಬ್ಬರಿಗೆ ಮದುವೆಯಾಗಿತ್ತು. ಕೊನೆಯ ಮಗ ಚಿರಂಜೀವಿಗೆ ಇನ್ನೂ ಮದುವೆ ಆಗಿಲ್ಲ. ಕೊಲೆಯಾದ ಬಾಲಕ ರಂಗಪ್ಪನ ಮಗ. ಇವರ ಸುಮಾರು 9 ಎಕರೆ ಆಸ್ತಿಗಾಗಿ ಪದೇಪದೆ ಜಗಳ ಸಂಭವಿಸುತ್ತಿತ್ತು. ಈಚೆಗೆ ಅದು ವಿಪರೀತಕ್ಕೂ ಹೋಗಿತ್ತು. ಈ ನಡುವೆ ಜಗಲು ಪಾಪಯ್ಯ ಹೆಸರಿನಲ್ಲಿದ್ದ ಎಲ್ಲ ಆಸ್ತಿಯನ್ನು ಮೊಮ್ಮಗ ಗೋವಿಂದ ಅಜಿತನ ಹೆಸರಿಗೆ ಬರೆಯುವುದಾಗಿ ಹೇಳುತ್ತಿದ್ದರು.

ಇದರಿಂದ ಕೋಪಗೊಂಡಿದ್ದ ಚಿರಂಜೀವಿ, ಎಲ್ಲಾ ಆಸ್ತಿ ತನಗೆ ಸೇರಬೇಕೆಂದು ಕಳೆದ ಮಾ.4 ರಂದು ಬಾಲಕ ಗೋವಿಂದನನ್ನು ಪಾರಿವಾಳ ತೋರಿಸುವುದಾಗಿ ಕರೆದೊಯ್ದು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದ. ನಂತರ ಗೊಬ್ಬರದ ಚೀಲದಲ್ಲಿಕಟ್ಟಿ ಹಳ್ಳದಲ್ಲಿ ಎಸೆದಿದ್ದ ಎಂದು ಎಸ್ಪಿ ರಾಧಿಕಾ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ