ಆ್ಯಪ್ನಗರ

ಚಳ್ಳಕೆರೆ ಮಾದರಿ ಪರಿಹಾರಕ್ಕೆ ರೈತರ ಆಗ್ರಹ

ರಾಷ್ಟ್ರೀಯ ಹೆದ್ದಾರಿ 150ಎ ವಿಸ್ತರಣೆಗೆ ಭೂಮಿ ಕಳೆದುಕೊಳ್ಳುತ್ತಿರುವ ಈ ಭಾಗದ ರೈತರಿಗೆ ಕಾನೂನಿನ ಚೌಕ್ಕಟ್ಟಿನಲ್ಲಿಸೂಕ್ತ ಪರಿಹಾರ ಒದಗಿಸುವಂತೆ ಖುದ್ದಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವೆ.

Vijaya Karnataka 1 Nov 2019, 5:00 am
ಹಿರಿಯೂರು: ರಾಷ್ಟ್ರೀಯ ಹೆದ್ದಾರಿ 150ಎ ವಿಸ್ತರಣೆಗೆ ಭೂಮಿ ಕಳೆದುಕೊಳ್ಳುತ್ತಿರುವ ಈ ಭಾಗದ ರೈತರಿಗೆ ಕಾನೂನಿನ ಚೌಕ್ಕಟ್ಟಿನಲ್ಲಿಸೂಕ್ತ ಪರಿಹಾರ ಒದಗಿಸುವಂತೆ ಖುದ್ದಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವೆ.
Vijaya Karnataka Web farmers demand for chillakare model solution
ಚಳ್ಳಕೆರೆ ಮಾದರಿ ಪರಿಹಾರಕ್ಕೆ ರೈತರ ಆಗ್ರಹ

ರೈತರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಶಾಸಕಿ ಕೆ.ಪೂರ್ಣಿಮಾ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿಗುರುವಾರ ನಡೆದ ಅಧಿಕಾರಿಗಳು ಹಾಗೂ ರೈತರ ಜಂಟಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ್ಯಾಯ ಕೊಡಿಸುವವರಾರ‍ಯರು?: ಯರಬಳ್ಳಿ ಗ್ರಾಮದ ರೈತ ಜ್ಞಾನಪ್ರಕಾಶ್‌ ಮಾತನಾಡಿ, ಆರಂಭದಲ್ಲಿಭೂಮಿ ವಶಪಡಿಸಿಕೊಳ್ಳುವ ಕುರಿತು ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಅಲ್ಲಿಂದ ಇಲ್ಲಿಯವರೆಗೂ ರೈತರ ಜತೆಗೆ ಒಂದು ಸಭೆ ನಡೆಸಿಲ್ಲ. ಸೂಕ್ತ ಪರಿಹಾರಕ್ಕೆ ಸೂಚಿಸದೇ ರಾತ್ರೋರಾತ್ರಿ ನೋಟಿಸ್‌ ನೀಡಿದ್ದಾರೆ. ಕೆಲವರ ಹತ್ತಿರ ನೋಟಿಸ್‌ ಕೊಟ್ಟು ದಾಖಲೆಗಳನ್ನು ಪಡೆದಿದ್ದಾರೆ. ಆದರೂ ಪರಿಹಾರ ನೀಡುವಲ್ಲಿತಾರತಮ್ಯ ಮಾಡುತ್ತಿದ್ದಾರೆ. ಹೀಗಾದರೆ ನಮಗೆ ನ್ಯಾಯ ಕೊಡಿಸುವವರಾರ‍ಯರು? ಎಂದರು.
ಸಭೆ ನಡೆಸಿಲ್ಲ: ಇನ್ನೂ ಕೆಲ ರೈತರು ಮಾತನಾಡಿ, ಅಧಿಕಾರಿಗಳು ಇಲ್ಲಿಯವರೆಗೂ ಸಭೆ ನಡೆಸಿಲ್ಲ. ಆದರೆ ಏಕಾಏಕಿ ರಾತ್ರೋರಾತ್ರಿ ಹಳ್ಳಿಯ ಬಸ್‌ ಸ್ಟಾತ್ರ್ಯಂಡ್‌ಗಳಿಗೆ ಬಂದು ಯಾರಿಗೆ ಬೇಕೋ ಅವರಿಗೆ ನೋಟಿಸ್‌ ನೀಡಿದ್ದಾರೆ. ಒಬ್ಬರ ಮನೆಗೂ ಬಂದು ಸೌಜನ್ಯದಿಂದ ನೋಟಿಸ್‌ ನೀಡಿಲ್ಲ. ಕೆಲ ಜಮೀನುಗಳಲ್ಲಿಕಲ್ಲುಗಳು ಹಾಕಿ ಮಾರ್ಕ್ ಮಾಡಿದ್ದಾರೆ. ರೈತರಿಗೆ ತಿಳಿವಳಿಕೆ ನೋಟಿಸ್‌ ನೀಡಿಲ್ಲ. ಇವರು ಕೊಡುವ ಪರಿಹಾರಕ್ಕೆ ಒಂದು ಎಕರೆ ಜಮೀನು ಕೂಡ ಬರುವುದಿಲ್ಲ. ಯರಬಳ್ಳಿ ಹಾಗೂ ಗೊಲ್ಲಹಳ್ಳಿಗಳಲ್ಲಿಜಮೀನು ಜತೆಗೆ ಸಾಕಷ್ಟು ಮನೆಗಳು ಕೂಡ ಹೋಗುತ್ತೇವೆ. ಹೀಗಾದರೆ ನಾವು ಬೀದಿಗೆ ಬರಬೇಕಾದ ಪರಿಸ್ಥಿತಿಯಿದೆ. ಆದ್ದರಿಂದ ಚಳ್ಳಕೆರೆ ತಾಲೂಕಿನ ಮಾದರಿಯಲ್ಲಿಪರಿಹಾರ ನೀಡಬೇಕು ಎಂದರು.
ವಿಶೇಷ ಭೂಸ್ವಾಧೀನಾಧಿಕಾರಿ ಅಜಯ್‌ ಮಾತನಾಡಿ, 'ರೈತರ ಸಮಸ್ಯೆಗಳನ್ನು ಆಲಿಸಿರುವೆ. ಚಳ್ಳಕೆರೆಯಲ್ಲಿನಿಗದಿಪಡಿಸಿದ ರೀತಿಯಲ್ಲೇ ನಿಮಗೂ ಪರಿಹಾರ ನಿಗದಿಪಡಿಸುವಂತೆ ಜಿಲ್ಲಾಧಿಕಾರಿಗೆ ಹಾಗೂ ಮೇಲಿನ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇನೆ. ಜತೆಗೆ ಹೆಚ್ಚಿನ ಪರಿಹಾರ ಕೊಡಿಸಲು ಶ್ರಮಿಸುವೆ' ಎಂದು ಭರವಸೆ ನೀಡಿದರು. ಸಭೆಯಲ್ಲಿಎಸಿ ಪ್ರಸನ್ನ, ತಹಸೀಲ್ದಾರ್‌ ಸತ್ಯನಾರಾಯಣ, ರೈತ ಮುಖಂಡರಾದ ರಮೇಶ್‌, ಟಿ.ಮಲ್ಲೇಶಪ್ಪ, ರಾಜಮಲ್ಲೇಶ್‌ ಹಾಗೂ ನಾನಾ ಗ್ರಾಮಗಳ ರೈತರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ