ಆ್ಯಪ್ನಗರ

ಪಾಲವ್ವನಹಳ್ಳಿಯಲ್ಲಿಮತ್ತೆ ದೇವರಕೋಣ ಭೀತಿ!

ಹಿರಿಯೂರು ತಾಲೂಕಿನ ಪಾಲವ್ವನಹಳ್ಳಿ ಗ್ರಾಮದಲಿ ಜನ ದೇವರ ಕೋಣದ ಭೀತಿಯಿಂದ ಮತ್ತೆ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಅಂಗೈಯಲ್ಲಿಜೀವ ಹಿಡಿದುಕೊಂಡು ಓಡಾಡುವ ಸ್ಥಿತಿ ಎದುರಾಗಿದೆ.

Vijaya Karnataka 7 Nov 2019, 5:00 am
ಐಮಂಗಲ: ಹಿರಿಯೂರು ತಾಲೂಕಿನ ಪಾಲವ್ವನಹಳ್ಳಿ ಗ್ರಾಮದಲಿ ಜನ ದೇವರ ಕೋಣದ ಭೀತಿಯಿಂದ ಮತ್ತೆ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಅಂಗೈಯಲ್ಲಿಜೀವ ಹಿಡಿದುಕೊಂಡು ಓಡಾಡುವ ಸ್ಥಿತಿ ಎದುರಾಗಿದೆ.
Vijaya Karnataka Web fear of god in palawanvalli
ಪಾಲವ್ವನಹಳ್ಳಿಯಲ್ಲಿಮತ್ತೆ ದೇವರಕೋಣ ಭೀತಿ!


ಕಳೆದ ಒಂದು ವಾರದಿಂದ ಪಾಲವ್ವನಹಳ್ಳಿಯಲ್ಲಿದೇವರ ಕೋಣದ ಹಾವಳಿ ಮತ್ತೆ ಆರಂಭವಾಗಿದೆ. ಕಳೆದ ತಿಂಗಳು ದೇವರ ಕೋಣದ ಉಪಟಳದಿಂದ ಈ ಗ್ರಾಮದ ಜನ ಕಂಗಾಲಾಗಿದ್ದರು. ಬಳಿಕ ಕೋಣವನ್ನು ಸೆರೆ ಹಿಡಿದು ಗೋಶಾಲೆಗೆ ಬಿಡಲಾಗಿತ್ತು. ಆದರೆ, ಈಗ ಮತ್ತೆ ಇನ್ನೊಂದು ದೇವರ ಕೋಣದ ಕಾಟ ಶುರುವಾಗಿದೆ.

ಇಬ್ಬರಿಗೆ ಗಾಯ:

ಪಾಲವ್ವನಹಳ್ಳಿ ಗ್ರಾಮದ ಕಣುಮಕ್ಕ (50) ಎಂಬ ಮಹಿಳೆಗೆ ಮಂಗಳವಾರ ಕೋಣ ಗಾಯಗೊಳಿಸಿದೆ. ಜಿಲ್ಲಾಸ್ಪತ್ರೆಯಲ್ಲಿಚಿಕಿತ್ಸೆಗೆ ದಾಖಲಿಸಲಾಗಿದೆ. ಮಹಿಳೆಯ ರಕ್ಷಣೆಗೆ ಧಾವಿಸಿದ ಪರಮೇಶಿ ಎಂಬವರಿಗೂ ಹಾಯಲು ಮುಂದಾಗಿದೆ. ತಪ್ಪಿಸಿಕೊಳ್ಳುವ ಭರದಲ್ಲಿನೆಲಕ್ಕೆ ಬಿದ್ದು ಗಾಯಗೊಂಡಿದ್ದಾರೆ.

ಯಾವ ಕೋಣ?

ಈ ಹೊಸ ಕೋಣ ಎಲ್ಲಿಂದ ಬಂತು. ಯಾವ ದೇವರಿಗೆ ಬಿಟ್ಟಿರುವುದು ಎಂಬುದು ತಿಳಿದಿಲ್ಲ. ಆದರೆ, ರಸ್ತೆಯಲ್ಲಿಓಡಾಡುವ ಜನರನ್ನು ಅಟ್ಟಾಡಿಸುತ್ತಿರುವ ಕೋಣದ ಕಾಟಕ್ಕೆ ಜನ ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರೆ.

ಈ ಗ್ರಾಮದಲ್ಲಿಹೆಚ್ಚಿನದಾಗಿ ಕೃಷಿ ಅವಲಂಬಿಸಿರುವ ಕುಟುಂಬಗಳೆ ಇದ್ದು ಪ್ರತಿ ದಿನ ಕೆಲಸಕ್ಕೆಂದು ಜಮೀನುಗಳಿಗೆ ಹೋಗಬೇಕಿದೆ. ಆದರೆ, ಕೋಣದ ಭಯದಿಂದ ಜೀವ ಕೈಯಲ್ಲಿಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿದೆ. ಬೈಕ್‌ ಸವಾರರು ಹಾಗೂ ಟ್ರ್ಯಾಕ್ಟರ್‌ಗಳು ಕಂಡರೆ, ಬೆನ್ನುಹತ್ತುತ್ತಿದೆ. ಈ ಊರಿನಲ್ಲಿಒಬ್ಬಂಟಿಯಾಗಿ ಓಡಾಡದಂಥ ಸ್ಥಿತಿ ಇದೆ. ಕೋಣ ಬೆನ್ನುಹತ್ತುತ್ತಿರುವುದರಿಂದ ಜನ ಕೂಡ ಕಂಗಾಲಾಗಿದ್ದಾರೆ.

ಕೊಟ್‌...1

ಪಾಲವ್ವನಹಳ್ಳಿಯಲ್ಲಿನಿತ್ಯ ದೇವರ ಕೋಣದ ಉಪಟಳ ಶುರುವಾಗಿದೆ. ಈ ಹಿಂದೆ ದೇವರ ಕೋಣವನ್ನು ಸೆರೆ ಹಿಡಿದು ಗೋಶಾಲೆಗೆ ಬಿಡಲಾಗಿತ್ತು. ಈಗ ಇನ್ನೊಂದು ಕೋಣ ಗ್ರಾಮಕ್ಕೆ ಬಂದಿದ್ದು, ಜನರ ಮೇಲೆ ದಾಳಿ ಮಾಡುತ್ತಿದೆ. ಇದರಿಂದ ಜನ ಮನೆಯಿಂದ ಹೊರ ಬರಲು ಹೆದರುವಂತಾಗಿದೆ.

ರಾಮಚಂದ್ರ, ವೇದಮೂರ್ತಿ, ಪಾಲವ್ವನಹಳ್ಳಿ ನಿವಾಸಿಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ