ಆ್ಯಪ್ನಗರ

ಕಡೇ ಶ್ರಾವಣ: ಕುಂಭಾಭಿಷೇಕ ಇಂದು

ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಅಂತಿಮ ದಿನವಾದ ಭಾನುವಾರ ಕುಂಭಾಭಿಷೇಕ ಸೇರಿದಂತೆ ನಾನಾ ಪೂಜಾ ಕಾರ್ಯಗಳು ಜರುಗಲಿವೆ.

Vijaya Karnataka 9 Sep 2018, 5:00 am
ನಾಯಕನಹಟ್ಟ: ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಅಂತಿಮ ದಿನವಾದ ಭಾನುವಾರ ಕುಂಭಾಭಿಷೇಕ ಸೇರಿದಂತೆ ನಾನಾ ಪೂಜಾ ಕಾರ್ಯಗಳು ಜರುಗಲಿವೆ.
Vijaya Karnataka Web finally shravan kumbhabhisheka today
ಕಡೇ ಶ್ರಾವಣ: ಕುಂಭಾಭಿಷೇಕ ಇಂದು


ಪೂಜಾ ಕಾರ್ಯಗಳ ವಿಶೇಷ ದಿನವಾದ ಭಾನುವಾರ ಐದು ಸಾವಿರಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಆಗಮಿಸುವ ನಿರೀಕ್ಷೆ ಇದೆ. ಇದಕ್ಕಾಗಿ ದೇವಾಲಯದಲ್ಲಿ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಶ್ರಾವಣ ಮಾಸದ ಮುಕ್ತಾಯದ ದಿನ ಹಾಗೂ ಅಮವಾಸ್ಯೆಯ ದಿನ ಎರಡೂ ಒಂದೇ ದಿನವಾಗಿರುವುದರಿಂದ ಹೆಚ್ಚಿನ ಭಕ್ತರು ದೇವಾಲಯಕ್ಕೆ ಆಗಮಿಸುವ ನಿರೀಕ್ಷೆಯಿದೆ.

ಲಾಡು ವಿಶೇಷ: ಇಲ್ಲಿನ ದೇವಾಲಯಕ್ಕೆ ಆಗಮಿಸುವ ಎಲ್ಲ ಭಕ್ತರಿಗೂ ಇಡೀ ವರ್ಷ ಮಧ್ಯಾಹ್ನ ಹಾಗೂ ರಾತ್ರಿ ದಾಸೋಹದ ವ್ಯವಸ್ಥೆ ಇದೆ. ಶ್ರಾವಣ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯು ಭಕ್ತರು ಆಗಮಿಸುವುದರಿಂದ ಹೆಚ್ಚಿನ ಪ್ರಮಾಣದ ಹಾಗೂ ವಿಶೇಷ ವ್ಯವಸ್ಥೆ ಒದಗಿಸಲಾಗಿದೆ. ಪ್ರತಿ ನಿತ್ಯ ಸಾವಿರಾರು ಭಕ್ತರು ದಾಸೋಹದ ಸವಿಯುತ್ತಿದ್ದಾರೆ. ಅಂತಿಮ ದಿನವಾದ ಭಾನುವಾರ ತಿರುಪತಿ ಲಾಡು ರುಚಿಯಂತೆ ಇರುವ ಲಾಡುವನ್ನು ತಯಾರಿಸಿರುವುದು ವಿಶೇಷವಾಗಿದೆ. ಶನಿವಾರ ಲಾಡುಗಳನ್ನು ಸಿದ್ಧಗೊಳಿಸಲಾಗಿದೆ. ಇದರ ಜತೆಗೆ ಪಲ್ಯ, ಪಾಯಸ, ಅನ್ನ, ಸಾಂಬಾರ್‌, ಮಜ್ಜಿಗೆ ದಾಸೋಹದ ಮೆನುವಿನಲ್ಲಿದೆ. ಚಳ್ಳಕೆರೆಯ ಬಿಟಿ ಮತ್ತು ಕಂಪನಿ ಮತ್ತು ದಾವಣಗೆರೆಯ ತಿಪ್ಪೇಸ್ವಾಮಿ ಪ್ರಾವಿಜನ್‌ ಸ್ಟೋರ್ಸ್‌ ದಾಸೋಹದ ವ್ಯವಸ್ಥೆ ಒದಗಿಸಿದ್ದಾರೆ.

ಶ್ರಾವಣ ಮಾಸದ ಮುಕ್ತಾಯದ ಅಂಗವಾಗಿ ಭಾನುವಾರ ಕುಂಭಾಭಿಷೇಕ ಮಹೋತ್ಸವ ಜರುಗಲಿದೆ. ಬೆಳಗ್ಗೆ ಹತ್ತು ಗಂಟೆಗೆ ಹೊರಮಠದಿಂದ ಒಳಮಠದ ವರೆಗೆ ಕುಂಭಗಳ ಮೆರವಣಿಗೆ ಜರುಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ