ಆ್ಯಪ್ನಗರ

ಆಕಸ್ಮಿಕ ಬೆಂಕಿ: ರೈತ ನೋಡನೋಡುತ್ತಿದ್ದಂತೆ ಬಾಳೆ ಗಿಡಗಳು ಅಗ್ನಿಗಾಹುತಿ

ಪಕ್ಕದ ಜಮೀನು ಮಾಲೀಕನ ನಿರ್ಲಕ್ಷದಿಂದ ನೋಡ ನೋಡುತ್ತಿದ್ದಂತೆಯೇ ಬೆಂಕಿಯ ರೌದ್ರಾವತಾರಕ್ಕೆ ಒಂದೇ ಒಂದು ಗಂಟೆಯಲ್ಲಿ ಬಹುತೇಕ ಬಾಳೆ ತೋಟ ನಾಶವಾಗಿದೆ. ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗಳು ರೈತನ ಜಮೀನಿಗೆ ಧಾವಿಸಿ ಬೆಂಕಿ ಹರಿಸುವ ಪ್ರಯತ್ನ ಮಾಡಿದ್ದಾರೆ.

Vijaya Karnataka Web 19 Feb 2022, 6:21 pm
ಚಿತ್ರದುರ್ಗ: ರೈತನು ಬೆವರು ಸುರಿಸಿ, ವರ್ಷವೀಡಿ ಪರಿಶ್ರಮ ಪಟ್ಟು ದುಡಿದ ನಂತರ ಬಂದ ಬೆಳೆ ಕೈಗೆ ಬಂದಾಗ ಆಕಸ್ಮಿಕವಾಗಿ ಅದು ನಾಶವಾದರೆ ಅವರ ಪರಿಸ್ಥಿತಿ ಹೇಗಿರಬೇಡ. ಹೀಗೆ ರೈತ ಬೆವರಿನಿಂದ ಬೆಳೆದಿದ್ದ ಬಾಳೆಗಿಡಗಳು ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾಗಿವೆ.
Vijaya Karnataka Web ಬಾಳೆಗಿಡ
ಬಾಳೆಗಿಡ


ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬೀರೆನಹಳ್ಳಿಯ ಎವಿ ಕೊಟ್ಟಿಗೆ ಗ್ರಾಮದ ವೀರಣ್ಣ ಎಂಬುವವರು ಜಮೀನಿನಲ್ಲಿ ಈ ಘಟನೆ ನಡೆದಿದೆ.

ವಿಜೃಂಭಣೆಯಿಂದ ಜರುಗಿದ ಹಿರಿಯೂರಿನ ತೇರು ಮಲ್ಲಪ್ಪನ ರಥೋತ್ಸವ! 12 ಲಕ್ಷ ರೂಪಾಯಿಗೆ ಮುಕ್ತಿ ಬಾವುಟ ಹರಾಜು

ವೀರಣ್ಣ ತಮ್ಮ 6 ಎಕರೆ ಜಮೀನಿನಲ್ಲಿ 3 ಸಾವಿರ ಬಾಳೆ ಗಿಡಗಳನ್ನು ಬೆಳೆಸಿದ್ದರು. ಫಸಲು ಚೆನ್ನಾಗಿ ಮೂಡಿ ಬಂದಿತ್ತು. ಬಾಳೆ ಗಿಡಕ್ಕೆ ಉತ್ತಮ ಗುಣಮಟ್ಟದ ಗೊಬ್ಬರ, ಔಷದಿ ಹಾಕಿದ್ದರಿಂದ ಬಾಳೆ ಫಸಲು ನಿರೀಕ್ಷೆ ಮೀರಿ ಬೆಳೆದು ನಿಂತಿತ್ತು. ಮೊದಲ ಅವಧಿಯಲ್ಲಿ 5 ಲಕ್ಷ ರೂಪಾಯಿ ಆದಾಯ ಕಂಡಿದ್ದೇವು. ಆದರೆ ಎರಡನೇ ಅವಧಿಗೆ ಬಾಳೆ ಗಿಡಗಳು ಗೊನೆ ಹೊಡೆದು ಕಟಾವಿಗೆ ಕೆಲವು ತಿಂಗಳು ಬಾಕಿ ಇತ್ತು.

ಆದರೆ ಪಕ್ಕದ ಜಮೀನು ಮಾಲೀಕನ ನಿರ್ಲಕ್ಷದಿಂದ ನೋಡ ನೋಡುತ್ತಿದ್ದಂತೆಯೇ ಬೆಂಕಿಯ ರೌದ್ರಾವತಾರಕ್ಕೆ ಒಂದೇ ಒಂದು ಗಂಟೆಯಲ್ಲಿ ಬಹುತೇಕ ಬಾಳೆ ತೋಟ ನಾಶವಾಗಿದೆ. ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗಳು ರೈತನ ಜಮೀನಿಗೆ ಧಾವಿಸಿ ಬೆಂಕಿ ಹರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಬೆಂಕಿ ದಟ್ಟವಾಗಿ ಕಾಣಿಸಿಕೊಂಡಿದ್ದರಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು. ಕೊನೆಗೆ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದೆ. ಆದರೆ ಬಾಳೆ ಗಿಡಗಳು ನಾಶವಾಗವೆ.

ಕಂಗಾಲಾದ ರೈತ

ಬೆಂಕಿಯ ಕೆನ್ನಾಲೆಗೆ 3 ಸಾವಿರ ಬಾಳೆ ಗಿಡದಲ್ಲಿ 2500 ಬಾಳೆ ಗಿಡಗಳು ಬೆಂಕಿಯಲ್ಲಿ ಬೆಂದಿವೆ. ಉತ್ತಮ ಗೊಬ್ಬರ ಹಾಕಿ, ಔಷದಿ ಸಿಂಪಡಿಸಿ ಮನೆಯ ಮಕ್ಕಳಂತೆ ಕಾಪಾಡಿಕೊಂಡು ಬಂದಿದ್ದರು.

ಇಷ್ಟು ದೊಡ್ಡ ಮಟ್ಟದಲ್ಲಿ ಬಾಳೆ ಬೆಳೆಯಲು ಲಕ್ಷಾಂತರ ರೂಪಾಯಿ ಹಣ ಬಂಡವಾಳ ಹಾಕಿ ಆದಾಯದ ದಾರಿ ಕಾಣಲಾಗುತ್ತಿತ್ತು. ಇದೀಗ ಪಕ್ಕದ ಜಮೀನಿನ ಮಾಲೀಕರಿಂದ ನಮ್ಮ ಬಾಳೆ ತೋಟ ನಾಶವಾಗಿದೆ.

ನಮ್ಮದು ಆರು ಎಕರೆ ಜಮೀನು ಇದೆ. ಇದರಲ್ಲಿ ನಾಲ್ಕು ಎಕರೆಯಲ್ಲಿ 3 ಸಾವಿರ ಬಾಳೆ ಬೆಳೆಯಲಾಗಿದೆ. ಫಸಲು ನಿರೀಕ್ಷೆ ಮೀರಿ ಬೆಳೆದು ನಿಂತಿತ್ತು. ಬಾಳೆ ತೋಟದಿಂದ ಯಶಸ್ಸು ಕಾಣಲು ಮುಂದಾಗಿದ್ದೇವು. ಶುಕ್ರವಾರ ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ನಮ್ಮ ಹೊಲದಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿತ್ತು. ಜಮೀನು ಹತ್ತಿರ ಬಂದು ನೋಡಿದರೆ ಬೆಂಕಿ ಇಡಿ ತೋಟಕ್ಕೆ ಆವರಿಸಿಕೊಂಡಿತ್ತು. ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿಗೆ ತಿಳಿಸಿದಾಗ ಅವರು ಬಂದು ಬೆಂಕಿ ನಂದಿಸುವ ಕೆಲಸ ಮಾಡಿದರು. ಬಾಳೆ ಗಿಡಗಳ ಜೊತೆಗೆ ಡ್ರಿಪ್, ಪೈಪ್ ಎಲ್ಲವೂ ಸುಟ್ಟು ಭಸ್ಮವಾಗಿವೆ. ಇದರಿಂದ ನಮಗೆ ಲಕ್ಷಾಂತರ ರೂಪಾಯಿ ಹಣ ನಷ್ಟ ಉಂಟಾಗಿದೆ. ಪಕ್ಕದ ಜಮೀನಿನ ಮಾಲೀಕನು ಹೊಲದಲ್ಲಿ ಗಿಡಗಳನ್ನು ಬೆಂಕಿ ಇಟ್ಟಿದ್ದನ . ಆ ಬೆಂಕಿ ನಮ್ಮ ತೋಟಕ್ಕೆ ಆವರಿಸಿದೆ. ಆತನ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತನ ಮಗ ನರಸಿಂಹಗೌಡ ತಿಳಿಸಿದ್ದಾರೆ.

ಚಿತ್ರದುರ್ಗದ ಐತಿಹಾಸಿಕ ದಕ್ಷಿಣ ಕಾಶಿ ಶ್ರೀ ತೇರು ಮಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಂಪನ್ನ

ಇಂಜಿನಿಯರ್ ಬಸವರಾಜ್ ಅವರು ಮುಂಜಾಗ್ರತಾ ಕ್ರಮವಾಗಿ ಕ್ರಮ ಕೈಗೊಳ್ಳದೇ ಬೆಂಕಿ ಹಚ್ಚಿದ್ದರು. ಆ ಬೆಂಕಿ ಇಡೀ ನಮ್ಮ ಮಾವನ ಬಾಳೆ ತೋಟಕ್ಕೆ ತಗುಲಿ ಸುಮಾರು 2500 ಬಾಳೆ ಗಿಡಗಳು ಸುಟ್ಟು ಕರಕಲಾಗಿವೆ. ಪಕ್ಕದ ಜಮೀನು ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕು. ದೂರವಾಣಿ ಮೂಲಕ ಅವರಿಗೆ ಸಂಪರ್ಕಿಸಿ, ಘಟನೆ ಬಗ್ಗೆ ತಿಳಿಸಿದರೂ ಸೌಜನ್ಯಕ್ಕಾದರೂ ನಮಗೆ ಸ್ಪಂದಿಸಿಲ್ಲ. ಬಂದು ನೋಡಿಲ್ಲ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅವರಿಂದ ನಮಗೆ ಪರಿಹಾರವನ್ನು ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಆತನ ವಿರುದ್ಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಮಾಜಿ ಗ್ರಾಪಂ ಅಧ್ಯಕ್ಷ ತಿಮ್ಮರಾಯಪ್ಪ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ