ಚಿತ್ರದುರ್ಗ : ಪೌರಾಡಳಿತ ನಿರ್ದೇಶನಾಲಯದ ಸೂಚನೆಯಂತೆ ಐದು ಅಡಿಗಳಿಗಿಂತ ಹೆಚ್ಚು ಎತ್ತರದ ಹಾಗೂ ಪರಿಸರಕ್ಕೆ ಮಾರಕವಾಗಬಹುದಾದ ಪಿಒಪಿಯಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಕೂರಿಸಲು ಅನುಮತಿ ನೀಡುವಂತಿಲ್ಲಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಆಯೋಜಿಸಿದ್ದ ಗೌರಿ ಗಣೇಶ ಹಬ್ಬ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೌರಾಡಳಿತ ನಿರ್ದೇಶನಾಲಯ ಸೂಚನೆಯನ್ನು ಜಿಲ್ಲೆಯ ಎಲ್ಲಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿಗಾವಹಿಸಿ, ಪಾಲಿಸಬೇಕು. ಯಾವುದೇ ಕಾರಣಕ್ಕೂ ಪಿಒಪಿ(ಪ್ಲಾಸ್ಟರ್ ಆಫ್ ಪ್ಯಾರೀಸ್)ನಿಂದ ತಯಾರಿಸಿದ ಗಣಪತಿ ಹಾಗೂ ರಾಸಾಯನಿಕ ವಿಷಕಾರಿ ಅಂಶಗಳುಳ್ಳ ಬಣ್ಣವನ್ನು ಉಪಯೋಗಿಸಿ ತಯಾರಿಸಿದ ಗಣೇಶ ಮೂರ್ತಿಗಳನ್ನು ಬಳಸುವಂತಿಲ್ಲಎಂದರು.
ವಿಸರ್ಜನೆಯಾಗದೆ ಇರುವಂತ ಪಿಒಪಿ ಮೂರ್ತಿಗಳು ಕಂಡು ಬಂದಲ್ಲಿ, ಅವುಗಳನ್ನು ವಶಪಡಿಸಿಕೊಂಡು ಧಾರ್ಮಿಕ ವಿಧಿವಿಧಾನಗಳಿಗೆ ಭಂಗವಾಗದಂತೆ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
ವೆಚ್ಚ ಭರಿಸಬೇಕು:
ಸಾರ್ವಜನಿಕವಾಗಿ ಸ್ಥಾಪಿಸಲಾಗುವ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿಉಂಟಾಗುವ ಕಸದ ವಿಲೇವಾರಿ ಜವಾಬ್ದಾರಿಯನ್ನು ಸಂಬಂಧಪಟ್ಟ ಆಯೋಜಕರೇ ಕೈಗೊಳ್ಳಬೇಕು. ವಿಲೇ ಮಾಡದಿದ್ದಲ್ಲಿನಗರಸಭೆಯಿಂದಲೇ ವಿಲೇವಾರಿಗೊಳಿಸಿ, ಅದರ ವೆಚ್ಚವನ್ನು ಸಂಬಂಧಿಸಿದ ಆಯೋಜಕರಿಂದಲೇ ವಸೂಲಿ ಮಾಡುವಂತೆ ತಾಕೀತು ಮಾಡಿದರು.
ಡಿಜೆ ಬಳಕೆಗೆ ನಿಷೇಧ:
ಸುಪ್ರಿಂಕೋರ್ಟ್ ಆದೇಶದಂತೆ ಶಬ್ದ ಮಾಲಿನ್ಯ ಮಾಡುವ ಹಾಗೂ ಹೆಚ್ಚು ಶಬ್ದ ಹೊರಸೂಸುವ ಧ್ವನಿವರ್ಧಕ, ಸ್ಪೀಕರ್ ಹಾಗೂ ಡಿಜೆ ಬಳಕೆಗೆ ನಿಷೇಧವಿದ್ದು, ಜಿಲ್ಲೆಯಲ್ಲಿಯೂ ಇದರ ಪಾಲನೆ ಆಗಬೇಕು ಎಂದರು.
ನಿಯಮಾನುಸಾರ 75 ಡೆಸಿಬಲ್ಗಿಂತ ಹೆಚ್ಚಿನ ಶಬ್ದ ಹೊರ ಸೂಸುವ ಡಿಜೆ ಬಳಕೆಗೆ ಅವಕಾಶವಿಲ್ಲ. ಪರಿಸರ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ನಿಯಮ ಪಾಲನೆ ಕುರಿತು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಡಿಸಿ ಸೂಚಿಸಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್ ಮಾತನಾಡಿ, ಇಲಾಖೆಯ ಸೂಚನೆಯಂತೆ ವಾರ್ಡ್ ಮಟ್ಟದಲ್ಲಿಪೊಲೀಸರ ಸಹಯೋಗದೊಂದಿಗೆ ಸಮಿತಿ ರಚಿಸಿ, ಗಣೇಶ ಮೂರ್ತಿಗಳ ಸೂಕ್ತ ವಿಲೇವಾರಿಗೆ ಕ್ರಮಕೈಗೊಳ್ಳಬೇಕು. ಹಬ್ಬದ ಮುಂಚಿತವಾಗಿ ಶಾಲಾ-ಕಾಲೇಜ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿಈ ಕುರಿತು ಜಾಗೃತಿ, ಅರಿವು ಮೂಡಿಸಬೇಕು' ಎಂದರು.
ಸಭೆಯಲ್ಲಿಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ ಸೇರಿದಂತೆ ನಾನಾ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.
**
ಕ್ರಮಕ್ಕೆ ಮನವಿ
ಸಭೆಯಲ್ಲಿಭಾಗವಹಿಸಿದ್ದ ಗಣೇಶ ಮೂರ್ತಿ ತಯಾರಕ, ಕಲಾವಿದರು ಮಾತನಾಡಿ, ಹೊರ ರಾಜ್ಯಗಳಿಂದ ಗಣೇಶ ಮೂರ್ತಿ ತಯಾರಿಸುವವರು ಜಿಲ್ಲೆಗೆ ಆಗಮಿಸಿ, ಪಿಒಪಿ ಹಾಗೂ ರಾಸಾಯನಿಕ ಬಣ್ಣ ಬಳಸಿ ಮೂರ್ತಿ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಇಂತವರ ಬಗ್ಗೆ ನಿಗಾವಹಿಸಿ, ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಆಯೋಜಿಸಿದ್ದ ಗೌರಿ ಗಣೇಶ ಹಬ್ಬ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೌರಾಡಳಿತ ನಿರ್ದೇಶನಾಲಯ ಸೂಚನೆಯನ್ನು ಜಿಲ್ಲೆಯ ಎಲ್ಲಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿಗಾವಹಿಸಿ, ಪಾಲಿಸಬೇಕು. ಯಾವುದೇ ಕಾರಣಕ್ಕೂ ಪಿಒಪಿ(ಪ್ಲಾಸ್ಟರ್ ಆಫ್ ಪ್ಯಾರೀಸ್)ನಿಂದ ತಯಾರಿಸಿದ ಗಣಪತಿ ಹಾಗೂ ರಾಸಾಯನಿಕ ವಿಷಕಾರಿ ಅಂಶಗಳುಳ್ಳ ಬಣ್ಣವನ್ನು ಉಪಯೋಗಿಸಿ ತಯಾರಿಸಿದ ಗಣೇಶ ಮೂರ್ತಿಗಳನ್ನು ಬಳಸುವಂತಿಲ್ಲಎಂದರು.
ವಿಸರ್ಜನೆಯಾಗದೆ ಇರುವಂತ ಪಿಒಪಿ ಮೂರ್ತಿಗಳು ಕಂಡು ಬಂದಲ್ಲಿ, ಅವುಗಳನ್ನು ವಶಪಡಿಸಿಕೊಂಡು ಧಾರ್ಮಿಕ ವಿಧಿವಿಧಾನಗಳಿಗೆ ಭಂಗವಾಗದಂತೆ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
ವೆಚ್ಚ ಭರಿಸಬೇಕು:
ಸಾರ್ವಜನಿಕವಾಗಿ ಸ್ಥಾಪಿಸಲಾಗುವ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿಉಂಟಾಗುವ ಕಸದ ವಿಲೇವಾರಿ ಜವಾಬ್ದಾರಿಯನ್ನು ಸಂಬಂಧಪಟ್ಟ ಆಯೋಜಕರೇ ಕೈಗೊಳ್ಳಬೇಕು. ವಿಲೇ ಮಾಡದಿದ್ದಲ್ಲಿನಗರಸಭೆಯಿಂದಲೇ ವಿಲೇವಾರಿಗೊಳಿಸಿ, ಅದರ ವೆಚ್ಚವನ್ನು ಸಂಬಂಧಿಸಿದ ಆಯೋಜಕರಿಂದಲೇ ವಸೂಲಿ ಮಾಡುವಂತೆ ತಾಕೀತು ಮಾಡಿದರು.
ಡಿಜೆ ಬಳಕೆಗೆ ನಿಷೇಧ:
ಸುಪ್ರಿಂಕೋರ್ಟ್ ಆದೇಶದಂತೆ ಶಬ್ದ ಮಾಲಿನ್ಯ ಮಾಡುವ ಹಾಗೂ ಹೆಚ್ಚು ಶಬ್ದ ಹೊರಸೂಸುವ ಧ್ವನಿವರ್ಧಕ, ಸ್ಪೀಕರ್ ಹಾಗೂ ಡಿಜೆ ಬಳಕೆಗೆ ನಿಷೇಧವಿದ್ದು, ಜಿಲ್ಲೆಯಲ್ಲಿಯೂ ಇದರ ಪಾಲನೆ ಆಗಬೇಕು ಎಂದರು.
ನಿಯಮಾನುಸಾರ 75 ಡೆಸಿಬಲ್ಗಿಂತ ಹೆಚ್ಚಿನ ಶಬ್ದ ಹೊರ ಸೂಸುವ ಡಿಜೆ ಬಳಕೆಗೆ ಅವಕಾಶವಿಲ್ಲ. ಪರಿಸರ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ನಿಯಮ ಪಾಲನೆ ಕುರಿತು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಡಿಸಿ ಸೂಚಿಸಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್ ಮಾತನಾಡಿ, ಇಲಾಖೆಯ ಸೂಚನೆಯಂತೆ ವಾರ್ಡ್ ಮಟ್ಟದಲ್ಲಿಪೊಲೀಸರ ಸಹಯೋಗದೊಂದಿಗೆ ಸಮಿತಿ ರಚಿಸಿ, ಗಣೇಶ ಮೂರ್ತಿಗಳ ಸೂಕ್ತ ವಿಲೇವಾರಿಗೆ ಕ್ರಮಕೈಗೊಳ್ಳಬೇಕು. ಹಬ್ಬದ ಮುಂಚಿತವಾಗಿ ಶಾಲಾ-ಕಾಲೇಜ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿಈ ಕುರಿತು ಜಾಗೃತಿ, ಅರಿವು ಮೂಡಿಸಬೇಕು' ಎಂದರು.
ಸಭೆಯಲ್ಲಿಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ ಸೇರಿದಂತೆ ನಾನಾ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.
**
ಕ್ರಮಕ್ಕೆ ಮನವಿ
ಸಭೆಯಲ್ಲಿಭಾಗವಹಿಸಿದ್ದ ಗಣೇಶ ಮೂರ್ತಿ ತಯಾರಕ, ಕಲಾವಿದರು ಮಾತನಾಡಿ, ಹೊರ ರಾಜ್ಯಗಳಿಂದ ಗಣೇಶ ಮೂರ್ತಿ ತಯಾರಿಸುವವರು ಜಿಲ್ಲೆಗೆ ಆಗಮಿಸಿ, ಪಿಒಪಿ ಹಾಗೂ ರಾಸಾಯನಿಕ ಬಣ್ಣ ಬಳಸಿ ಮೂರ್ತಿ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಇಂತವರ ಬಗ್ಗೆ ನಿಗಾವಹಿಸಿ, ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.