ಆ್ಯಪ್ನಗರ

ಗೆಳೆಯನ ಮಗು ನೋಡಲು ಹೋಗಿ ಸಾವು

ಇಲ್ಲಿನ ಹಾಯ್ಕಲ್‌-ಬೆಳಘಟ್ಟ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಸೋಮವಾರ ರಾತ್ರಿ ಬೈಕ್‌ನಿಂದ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟು ಮತ್ತೊಬ್ಬ ಗಾಯಗೊಂಡಿದ್ದಾನೆ.

Vijaya Karnataka 20 Dec 2018, 9:16 pm
ಚಿತ್ರದುರ್ಗ : ಇಲ್ಲಿನ ಹಾಯ್ಕಲ್‌-ಬೆಳಘಟ್ಟ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಸೋಮವಾರ ರಾತ್ರಿ ಬೈಕ್‌ನಿಂದ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟು ಮತ್ತೊಬ್ಬ ಗಾಯಗೊಂಡಿದ್ದಾನೆ.
Vijaya Karnataka Web go see boys kid death
ಗೆಳೆಯನ ಮಗು ನೋಡಲು ಹೋಗಿ ಸಾವು


ಜಗಳೂರು ತಾಲೂಕಿನ ಕಾನನಕಟ್ಟೆಯ ನಿವಾಸಿ ಬೊಮ್ಮಯ್ಯ(26) ಮೃತ ಯುವಕ. ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ಮಾರಣ್ಣ ಗಾಯಗೊಂಡವರು. ತನ್ನ ಹೆಂಡತಿಗೆ ಗಂಡು ಮಗು ಹೆರಿಗೆಯಾಗಿದೆ ಎಂದು ನೋಡಲು ಮಾರಣ್ಣ ಕಾನನಕಟ್ಟೆಯಿಂದ ಪತ್ನಿ ತವರು ಮನೆ ಹಾಯ್ಕಲ್‌ಗೆ ಸ್ನೇಹಿತ ಬೊಮ್ಮಯ್ಯನ ಜತೆಗೆ ತೆರಳುತ್ತಿದ್ದರು. ಆಗ ಬೈಕ್‌ಗೆ ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ಕೆಳಗೆ ಬಿದ್ದು ಗಾಯಗೊಂಡರು. ತೀವ್ರ ಗಾಯಗೊಂಡ ಬೊಮ್ಮಯ್ಯನನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಯ ಎಸ್‌.ಎಸ್‌.ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಪುನಃ ಅಂಬುಲೈನ್ಸ್‌ನಲ್ಲಿ ಬೆಂಗಳೂರಿನ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು ದಾರಿ ಮಧ್ಯೆ ಮೃತಪಟ್ಟಿದ್ದಾನೆಂದು ತಿಳಿಸಿದ್ದಾರೆ. ತುರುವನೂರು ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ