ಆ್ಯಪ್ನಗರ

ದುರ್ಗದಲ್ಲಿ ಸಂಭ್ರಮದ ಗುರುಪೂರ್ಣಿಮೆ

ಗುರುಪೂರ್ಣಿಮೆ ಪ್ರಯುಕ್ತ ನಗರದ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲಿ ಶುಕ್ರವಾರ ನಾನಾ ಧಾರ್ಮಿಕ ಕಾರ್ಯಗಳು, ವಿಶೇಷ ಅಲಂಕಾರದೊಂದಿಗೆ ಪೂಜಾ ವಿಧಿವಿಧಾನಗಳು ನೆರವೇರಿದವು.

Vijaya Karnataka 28 Jul 2018, 5:00 am
ಚಿತ್ರದುರ್ಗ : ಗುರುಪೂರ್ಣಿಮೆ ಪ್ರಯುಕ್ತ ನಗರದ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲಿ ಶುಕ್ರವಾರ ನಾನಾ ಧಾರ್ಮಿಕ ಕಾರ್ಯಗಳು, ವಿಶೇಷ ಅಲಂಕಾರದೊಂದಿಗೆ ಪೂಜಾ ವಿಧಿವಿಧಾನಗಳು ನೆರವೇರಿದವು.
Vijaya Karnataka Web good luck in the dungeon
ದುರ್ಗದಲ್ಲಿ ಸಂಭ್ರಮದ ಗುರುಪೂರ್ಣಿಮೆ


ಮೇಲುದುರ್ಗದ ಅಧಿದೇವತೆ ಶ್ರೀಏಕನಾಥೇಶ್ವರಿ, ಕೋಟೆ ರಸ್ತೆಯಲ್ಲಿನ ರಾಜ ಉತ್ಸವಾಂಭ ಉಚ್ಚಂಗಿ ಯಲ್ಲಮ್ಮ ದೇವಿ, ಹೊಳಲ್ಕೆರೆ ರಸ್ತೆಯಲ್ಲಿನ ಬರಗೇರಮ್ಮ, ನಗರ ಪೊಲೀಸ್‌ ಠಾಣೆ ಆವರಣದಲ್ಲಿನ ಕಣಿವೆ ಮಾರಮ್ಮ, ಸಂತೆ ಹೊಂಡದ ಸಮೀಪ ಇರುವ ಬನ್ನಿ ಮಹಾಕಾಳಿ, ಕಾಮನಬಾವಿ ಬಡಾವಣೆಯ ಕಾಳಿಕಾ ಮಠೇಶ್ವರಿ, ವಾಸವಿ ಮಹಲ್‌ ರಸ್ತೆಯಲ್ಲಿನ ಕನ್ನಿಕಾ ಪರಮೇಶ್ವರಿ, ಹೊಲಲ್ಕೆರೆ ರಸ್ತೆಯಲ್ಲಿನ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲಿ ಭಕ್ತರ ಕ್ಯೂ ಕಂಡುಬಂತು.

ಹೊಳಲ್ಕೆರೆ ಟೋಲ್‌ಗೇಟ್‌ ಬಳಿಯಿರುವ ಬರಗೇರಮ್ಮ ದೇವಿಗೆ ಸೇಬು, ನಿಂಬೆ, ಕನಕಾಂಬರಿ, ಪತ್ರೆ, ಮಲ್ಲಿಗೆಯಿಂದ ಸುಂದರವಾಗಿ ಅಲಂಕರಿಸಲಾಗಿದ್ದು, ಭಕ್ತರ ಕಣ್ಮನ ಸೆಳೆಯುವಂತಿತ್ತು. ನಗರದ ನಗರ ಪೊಲೀಸ್‌ ಠಾಣೆ ಆವರಣದ ಕಣಿವೆ ಮಾರಮ್ಮ ದೇವಿಗೆ ಸೇವಂತಿಗೆ, ಮಲ್ಲಿಗೆ, ಚೆಂಡು, ಗುಲಾಬಿ ಸೇರಿದಂತೆ ನಾನಾ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.

ಚಂದ್ರಗ್ರಹಣ, ಶ್ರಾವಣ ಶುಕ್ರವಾರದ ನಿಮಿತ್ತ ಭಕ್ತರು ಬೆಳಗ್ಗೆಯಿಂದಲೇ ನಾನಾ ದೇವಸ್ಥಾನಗಳಿಗೆ ತೆರಳಿ ಹೂವು ಹಣ್ಣು ಅರ್ಪಿಸುವ ಮೂಲಕ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ