ಆ್ಯಪ್ನಗರ

ಜಾನಪದ ಸಾಹಿತ್ಯದ ತಾಯಿಬೇರು

ಜಾನಪದ ಗ್ರಂಥಸ್ಥ ಸಾಹಿತ್ಯದ ತಾಯಿಬೇರು ಎಂದು ಶಿಕ್ಷ ಕ ತಿಮ್ಮಪ್ಪ ತಿಳಿಸಿದರು.

Vijaya Karnataka 25 Feb 2019, 5:00 am
ಹಿರಿಯೂರು: ಜಾನಪದ ಗ್ರಂಥಸ್ಥ ಸಾಹಿತ್ಯದ ತಾಯಿಬೇರು ಎಂದು ಶಿಕ್ಷ ಕ ತಿಮ್ಮಪ್ಪ ತಿಳಿಸಿದರು.
Vijaya Karnataka Web have a mother of folk literature
ಜಾನಪದ ಸಾಹಿತ್ಯದ ತಾಯಿಬೇರು


ತಾಲೂಕಿನ ಗೌಡನಹಳ್ಳಿಯಲ್ಲಿ ವೆಂಕಟಮ್ಮ ಲಕ್ಷ್ಮೀ ನರಸಪ್ಪ ಗಿರಿಜನ ಎಜುಕೇಷನಲ್‌ ಮತ್ತು ರೂರಲ್‌ ಡೆವಲಪ್‌ ಮೆಂಟ್‌ ಟ್ರಸ್ಟ್‌ ಭಾನುವಾರ ಏರ್ಪಡಿಸಿದ್ದ 'ಜನಪದ ಕಾವ್ಯದ ಮಹತ್ವ' ಎಂಬ ವಿಷಯ ಕುರಿತು ಮಾತನಾಡಿದರು.

'ಬೆಳಗಾನ ನಾ ಎದ್ದು ಯಾರಾರ‍ಯರ ನೆನೆಯಾಲಿ, ಎಳ್ಳು ಜೀರಿಗೆ ಬೆಳೆಯೋಳ ಭೂಮ್ತಾಯ, ಎದ್ದೊಂದು ಗಳಿಗೇ ನೆನದೇನ' ಎಂಬ ಜನಪದ ಕಾವ್ಯ ನೆಲಸಂಸ್ಕೃತಿಯ ಸುಪ್ರಭಾತದಂತಿದೆ. 'ತೊಟ್ಟೀಲ ಹೊತ್ಕೊಂಡು, ತೌರ್‌ ಬಣ್ಣ ಉಟ್ಕೊಂಡು ...' ಎಂದು ಹೆಣ್ಣು ಮಗಳೊಬ್ಬಳು ಹಾಡುವ ಇನ್ನೊಂದು ಹಾಡು ತವರಿನ ಮಹತ್ವ ಸಾರುತ್ತದೆ. ಹೀಗೆ ಸರಳವೂ, ಅರ್ಥವಂತಿಕೆಯಿಂದ ಕೂಡಿರುವ ಅಸಂಖ್ಯಾತ ಜಾನಪದ ಗೀತೆಗಳಲ್ಲಿ ಬದುಕಿನ ಸಾರ ಅಡಗಿದೆ ಎಂದರು.

ಟ್ರಸ್ಟ್‌ ಅಧ್ಯಕ್ಷ ಪುಟ್ಟರಾಜು, ಬಸವರಾಜು, ಚಿಕ್ಕನರಸಪ್ಪ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ