ಆ್ಯಪ್ನಗರ

ಅಸ್ವಸ್ಥ ವಿದ್ಯಾರ್ಥಿನಿಯರ ಆರೋಗ್ಯ ಚೇತರಿಕೆ

ನಗರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 18 ವಿದ್ಯಾರ್ಥಿನಿಯರು ಊಟದ ನಂತರ ಬುಧವಾರ ರಾತ್ರಿ ಅಸ್ವಸ್ಥಗೊಂಡಿದ್ದರು. ಈ ಬಾಲಕಿಯರಿಗೆ ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಗುರುವಾರ ಗುಣಮುಖರಾಗಿ ಪಾಲಕರ ಜತೆಗೆ ತಮ್ಮ ಮನೆಗಳಿಗೆ ತೆರಳಿದರು.

Vijaya Karnataka 7 Dec 2018, 4:00 pm
ಚಳ್ಳಕೆರೆ : ನಗರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 18 ವಿದ್ಯಾರ್ಥಿನಿಯರು ಊಟದ ನಂತರ ಬುಧವಾರ ರಾತ್ರಿ ಅಸ್ವಸ್ಥಗೊಂಡಿದ್ದರು. ಈ ಬಾಲಕಿಯರಿಗೆ ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಗುರುವಾರ ಗುಣಮುಖರಾಗಿ ಪಾಲಕರ ಜತೆಗೆ ತಮ್ಮ ಮನೆಗಳಿಗೆ ತೆರಳಿದರು.
Vijaya Karnataka Web healthcare recovery of sick girls
ಅಸ್ವಸ್ಥ ವಿದ್ಯಾರ್ಥಿನಿಯರ ಆರೋಗ್ಯ ಚೇತರಿಕೆ


ಹಾಸ್ಟೆಲ್‌ನಲ್ಲಿ ಸುಮಾರು 240 ಬಾಲಕಿಯರಿದ್ದು, ಬುಧವಾರ ಸಂಜೆ ಮಾಡಿದ್ದ ಮಿರ್ಚಿ ತಿಂದು ಹೊಟ್ಟೆ ಉರಿಯಿಂದ ಬಳಲಿದ್ದರು. ಬಾಲಕಿಯರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಮಿರ್ಚಿ ತಿಂದ ಬಳಿಕ ರಾತ್ರಿ ಅನ್ನ, ಸಾಂಬಾರ್‌ ಊಟ ಸೇವಿಸಿದ್ದರು. ಬಳಿಕ ಈ ಬಾಲಕಿಯರು ಅಸ್ವಸ್ಥರಾಗಿದ್ದರು. ಸಂಸದ ಬಿ.ಎನ್‌.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದರು. ಗುರುವಾರ ಜಿಲ್ಲಾ ಕಲ್ಯಾಣಾಧಿಕಾರಿ ಜೆ.ರಾಜು, ತಾಲೂಕು ಅಧಿಕಾರಿ ಮಾಲತಿ ಹಾಸ್ಟೆಲ್‌ಗೆ ಭೇಟಿ ನೀಡಿ ಎಲ್ಲ ಮಕ್ಕಳ ಆರೋಗ್ಯ ವಿಚಾರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ