ಆ್ಯಪ್ನಗರ

ಎಸ್ಟಿ ಮೀಸಲು ಹೆಚ್ಚಳಕ್ಕಾಗಿ ಪಾದಯಾತ್ರೆ

ಮೀಸಲಾತಿ ಹೆಚ್ಚಳಕ್ಕಾಗಿ ರಾಜ್ಯ ವಾಲ್ಮೀಕಿ ನಾಯಕ ಸಮುದಾಯದಿಂದ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಿಂದ ಬೆಂಗಳೂರುವರೆಗೆ ಆಯೋಜಿಸಿರುವ ಬೃಹತ್‌ ಪಾದಯಾತ್ರೆ ಬುಧವಾರ ಚಿತ್ರದುರ್ಗಕ್ಕೆ ಆಗಮಿಸಿತು.

Vijaya Karnataka 13 Jun 2019, 5:00 am
ಚಿತ್ರದುರ್ಗ : ಮೀಸಲಾತಿ ಹೆಚ್ಚಳಕ್ಕಾಗಿ ರಾಜ್ಯ ವಾಲ್ಮೀಕಿ ನಾಯಕ ಸಮುದಾಯದಿಂದ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುಧಿರುಧಿಪೀಧಿಠಧಿದಿಂದ ಬೆಂಗಳೂರು ವಧಿರೆಗೆ ಆಯೋಜಿಸಿರುವ ಬೃಹತ್‌ ಪಾದಯಾತ್ರೆ ಬುಧವಾರ ಚಿತ್ರದುರ್ಗಕ್ಕೆ ಆಗಮಿಸಿತು.
Vijaya Karnataka Web hike for st reserves
ಎಸ್ಟಿ ಮೀಸಲು ಹೆಚ್ಚಳಕ್ಕಾಗಿ ಪಾದಯಾತ್ರೆ


ವಾಲ್ಮೀಕಿ ಗುಧಿರುಪೀಧಿಠದ ಪೀಠಾಧ್ಯಕ್ಷ ಶ್ರೀ ಪ್ರಸನ್ನಾನಂದ ವಾಲ್ಮೀಕಿ ಸ್ವಾಮೀಜಿ ನೇತೃತ್ವದಲ್ಲಿ ಧಿಕೈಗೊಂಡಿರುವ ಪಾದಯಾತ್ರೆ ತಾಲೂಕಿನ ಸಿರಿಗೆರೆ ಬಳಿಗೆ ಆಗಮಿಸಿದಾಗ ಕೇಂದ್ರದ ಮಾಜಿ ಸಚಿವ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಕೆಲ ಸಮಯ ಪಾದಯಾತ್ರೆಗೆ ಸಾಥ್‌ ನೀಡಿದರು. ಅಲ್ಲದೆ ಸಿರಿಗೆರೆ ಸರ್ಕಲ್‌ ಬಳಿ ಕೆಲ ಕಾಲ ನಡೆದ ರಸ್ತೆ ತಡೆಯಲ್ಲೂ ಸಿದ್ದೇಶ್ವರ ಹಾಗೂ ಜಗಳೂರು ಶಾಸಕ ರಾಮಚಂದ್ರ ಮತ್ತಿತರರು ಪಾಲ್ಗೊಂಡಿದ್ದರು.

ಸೀಬಾರದ ಸಮೀಪ ಆಗಮಿಸುತ್ತಿದಂತೆ ಮಾಜಿ ಸಚಿವ ಎಚ್‌.ಆಂಜನೇಯ ಶ್ರೀಗಳಿಗೆ ಧಿಪುಷ್ಪಮಾಲೆ ಹಾಕುವ ಮೂಲಕ ಸ್ವಾಗತಿಸಿದರು. ಅಲ್ಲದೆ ಅವರು ಕೂಡ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಪಾದಯಾತ್ರೆಯನ್ನು ಆತ್ಮೀಯವಾಗಿ ಬರ ಮಾಡಿಕೊಂಡು ಕೆಲ ಕಾಲ ಹೆಜ್ಜೆ ಹಾಕಿದರು. ಬಳಿಕ ಪಾದಯಾತ್ರೆಯು ಮುರುಘಾ ಮಠದವರೆಗೂ ಸಾಗಿ ಅಲ್ಲೇ ವಾಸ್ತವ್ಯ ಹೂಡಿದೆ. ಜೂ.13ರ ಬೆಳಗ್ಗೆ 10ಕ್ಕೆ ಮುರುಘಾಮಠದಿಂದ ಆರಂಭವಾಗಲಿದೆ.

ಪರಿಶಿಷ್ಟ ಪಂಗಡದ (ಎಸ್‌ಟಿ) ಜನಸಂಖ್ಯೆಗೆ ಅನುಗುಣವಾಗಿ ಶೈಕ್ಷ ಣಿಕ ಮತ್ತು ಆರ್ಥಿಕ ಮೀಸಲಾತಿ ಶೇ.3 ರಿಂದ ಶೇಕಡ 7.5ರಷ್ಟು ಹೆಚ್ಚಿಸುವ ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರಿಗಳ ಮತ್ತು ಪಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಕುರಿತು ಮತ್ತು ನಾನಾ ಬೇಡಿಕೆಗಳ ಈಡೇರಿಸಲು ಸರಕಾರಕ್ಕೆ ಒತ್ತಾಯಿಸಿ ಪಾದಯಾತ್ರೆ ನಡೆಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ