ಆ್ಯಪ್ನಗರ

ಹಳೆಯ ವಸ್ತು ನೀಡಿದವರಿಗೆ ಸಸಿ ಗಿಫ್ಟ್‌!

ಹೊಳಲ್ಕೆರೆ ಪುರಸಭೆ ವತಿಯಿಂದ ಹೊಸತೊಂದು ಯೋಜನೆ ಆರಂಭವಾಗಿದೆ. ಹೊಳಲ್ಕೆರೆ ನಗರದ ನಿವಾಸಿಗಳು, ಎಲೆಕ್ಟ್ರಾನಿಕ್ ಸಾಮಗ್ರಿಗಳು, ಪ್ಲಾಸ್ಟಿಕ್ ಕೈ ಚೀಲಗಳು ಮುಂತಾದ ಉಪಯೋಗವಾಗದ ಹಳೆಯ ವಸ್ತುಗಳನ್ನು ಪುರಸಭೆಗೆ ನೀಡಬಹುದು. ಆ ವಸ್ತುಗಳಿಗೆ ಬದಲಾಗಿ ಪ್ರತಿ ವಸ್ತುವಿಗೂ ಒಂದು ಗಿಡವನ್ನು ನೀಡಲಾಗುತ್ತದೆ. ಈ ಯೋಜನೆಯು ಎರಡು ಉದ್ದೇಶಗಳನ್ನು ಹೊಂದಿದೆ. ಒಂದು - ಹಳೆಯ ತ್ಯಾಜ್ಯ ವಸ್ತುಗಳನ್ನು ರೀ- ಸೈಕಲಿಂಗ್ ಮಾಡುವುದು ಹಾಗೂ ಸಾರ್ವಜನಿಕರ ಮೂಲಕ ಸಸಿಗಳನ್ನು ನೆಡುವಂಥ ಕಾರ್ಯಕ್ರಮ ಜಾರಿಗೊಳಿಸುವುದು.

Edited byಚೇತನ್ ಓ.ಆರ್. | Vijaya Karnataka Web 21 May 2023, 9:08 am

ಹೈಲೈಟ್ಸ್‌:

  • ಹೊಳಲ್ಕೆರೆ ಪುರಸಭೆಯಿಂದ ವಿನೂತನ ಆಂದೋಲನ.
  • ಪಟ್ಟಣದಲ್ಲಿ ಆರ್‌ಆರ್‌ಆರ್‌ ಕೇಂದ್ರ ಸ್ಥಾಪನೆ.
  • ಜೂ. 5ರ ವರೆಗೆ ಕಾರ್ಯಕ್ರಮ ಆಯೋಜನೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Plants - Standard
(ಸಾಂದರ್ಭಿಕ ಚಿತ್ರ)
ಹೊಳಲ್ಕೆರೆ: ನಿಮ್ಮ ಮನೆಯಲ್ಲಿ ಹಳೆಯ ಟಿವಿ, ರೇಡಿಯೋ, ಎಲೆಕ್ಟ್ರಾನಿಕ್‌ ಸಾಮಗ್ರಿಗಳು, ಪ್ಲಾಸ್ಟಿಕ್‌ ಕೈಚೀಲಗಳು, ಹಳೆಯ ಬಟ್ಟೆಗಳು ಇತ್ಯಾದಿ ಇದ್ದಾವಾ? ಅವುಗಳನ್ನು ಏನ್‌ ಮಾಡಬೇಕು ಎಂಬ ಗೊಂದಲ ಉಂಟಾಗಿದಿಯಾ? ಹಾಗಾದರೆ ಚಿಂತಿಸದಿರಿ, ನೀವು ಅವುಗಳನ್ನು ನೀಡಿ ಸಸಿಗಳನ್ನು ಉಡುಗೊರೆ ಪಡೆಯಬಹುದು.
ಹೌದು.. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಹಾಗೂ ಜಿಲ್ಲಾಡಳಿತ ಚಿತ್ರದುರ್ಗರವರ ನಿರ್ದೇಶನದಂತೆ ಹೊಳಲ್ಕೆರೆ ಪುರಸಭೆ ವತಿಯಿಂದ ಪಟ್ಟಣದಲ್ಲಿಮೇ 20ರಿಂದ ಜೂ.5ರ ವರೆಗೆ ನನ್ನ ಲೈಪ್‌ ನನ್ನ ಸ್ವಚ್ಛ ನಗರ ಎಂಬ ವಿಶೇಷ? ಆಂದೋಲನ ಹಮ್ಮಿಕೊಳ್ಳಲಾಗಿದೆ.


ನಾಗರಿಕರಲ್ಲಿ ತ್ಯಾಜ್ಯ ವಸ್ತುಗಳ ಪುನರ್ಬಳಕೆ ಮತ್ತು ಕ್ರಮಬದ್ಧವಾದ ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದ್ದು, ಆರ್‌ಆರ್‌ಆರ್‌ (ರೆಡಿಯ್ಯೂಸ್‌ , ರೀ ಯೂಸ್‌, ರೀಸೈಕಲ್‌ ) ಎಂಬ ತ್ಯಾಜ್ಯ ನಿರ್ವಹಣೆ ಮೂರು ಅಂಶಗಳನ್ನು ಒಳಗೊಂಡಿರುತ್ತದೆ. ತ್ಯಾಜ್ಯವನ್ನು ಕಡಿಮೆಗೊಳಿಸುವುದು, ಮರುಬಳಕೆ ಮಾಡುವುದು, ಪುನರ್‌ಬಳಕೆ ಎಂಬ ಸಿದ್ಧಾಂತವನ್ನು ಹೊಂದಿದೆ. ನಮ್ಮ ದೈನಂದಿನ ಬದುಕಿನಲ್ಲಿಉತ್ಪತ್ತಿಯಾಗಿ ಪರಿಸರಕ್ಕೆ ಸೇರಿಕೊಳ್ಳುವ ತ್ಯಾಜ್ಯವಸ್ತುಗಳನ್ನು ಕಡಿಮೆಗೊಳಿಸುವುದು, ಮರುಬಳಕೆ ಮಾಡುವುದು ಮತ್ತು ಪುನರ್ಬಳಕೆ ಮಾಡುವುದರ ಬಗ್ಗೆ ಈ ಆಂದೋಲನ ಬೆಳಕು ಚೆಲ್ಲುತ್ತದೆ.

ಈ ನಿಟ್ಟಿನಲ್ಲಿ ಹೊಳಲ್ಕೆರೆ ಪಟ್ಟಣದ ಹಳೇ ಆಸ್ಪತ್ರೆ ರಸ್ತೆ, ಗಣಪತಿ ರಸ್ತೆಯಲ್ಲಿ ಆರ್‌.ಆರ್‌.ಆರ್‌. ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಆಟಿಕೆ ವಸ್ತುಗಳು, ಮರುಬಳಕೆ ಮಾಡಬಹುದಾದ ಹಳೆಯ ಬಟ್ಟೆಗಳು, ದಿನಪತ್ರಿಕೆ, ಮಾಸ ಪತ್ರಿಕೆ, ಹಳೆ ಪುಸ್ತಕಗಳು, ಪ್ಲಾಸ್ಟಿಕ್‌ ಚೀಲಗಳು, ಪ್ಲಾಸ್ಟಿಕ್‌ ಕೈಚೀಲಗಳು, ಎಲೆಕ್ಟ್ರಾನಿಕ್‌ ಸಾಮಗ್ರಿಗಳು ಒಳಗೊಂಡಂತೆ ವಿವಿಧ ಬಗೆಯ ಹಳೆಯ ವಸ್ತುಗಳನ್ನು ಈ ಆರ್‌.ಆರ್‌.ಆರ್‌. ಕೇಂದ್ರಗಳಲ್ಲಿಸ್ವೀಕರಿಸಲಾಗುತ್ತದೆ.

Chitradurga: ಭಾರತ್ ಜೋಡೋ ಯಾತ್ರೆ ಸಂಚರಿಸಿದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು
ಹಳೆಯ ವಸ್ತುಗಳನ್ನು ಸ್ವಯಂ ಪ್ರೇರಣೆಯಿಂದ ಆರ್‌.ಆರ್‌.ಆರ್‌ ಕೇಂದ್ರಗಳಲ್ಲಿನೀಡುವ ನಾಗರಿಕರನ್ನು ಪ್ರೋತ್ಸಾಹಿಸುವ ಸಲುವಾಗಿ ಪುಸ್ತಕ, ಪರಿಸರ ಸ್ನೇಹಿ ಪೆನ್‌, ಸಾವಯವ ಗೊಬ್ಬರ, ಬಟ್ಟೆಯ ಚೀಲ, ಹೂವಿನ ಗಿಡ, ಡಿಜಿಟಲ್‌ ಪ್ರಮಾಣ ಪತ್ರಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಈ ವಿಶೇಷ ಅಭಿಯಾನದಲ್ಲಿ ವಿದ್ಯಾರ್ಥಿಗಳು, ಯುವಕರು, ಜನ ಪ್ರತಿನಿಧಿಗಳು, ವರ್ತಕರು, ಮಹಿಳೆಯರು, ಮಕ್ಕಳು, ಸಂಘ ಸಂಸ್ಥೆಗಳು ಒಳಗೊಂಡಂತೆ ಎಲ್ಲನಾಗರಿಕರು ಸಹ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ತಮ್ಮ ಹಳೆಯ ನಿರುಪಯುಕ್ತ ವಸ್ತುಗಳನ್ನು ಈ ಆರ್‌.ಆರ್‌.ಆರ್‌ ಕೇಂದ್ರಗಳಲ್ಲಿ ನೀಡಿ ಪುರಸಭೆಯಿಂದ ನೀಡಲಾಗುವ ಉಡುಗೊರೆಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಪೋಲೀಸ್‌ ಇಲಾಖೆ, ಅರಣ್ಯ ಇಲಾಖೆ ಸಹಭಾಗಿತ್ವದೊಂದಿಗೆ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮದಲ್ಲಿಪಟ್ಟಣದ ಸಂಘ ಸಂಸ್ಥೆಗಳು, ಸಾರ್ವಜನಿಕರು, ಪುರಸಭೆ ಸಿಬ್ಬಂದಿ, ಪೌರಕಾರ್ಮಿಕರು ಭಾಗಿಯಾಗಿದ್ದರು.

ಮುಖ್ಯಾಧಿಕಾರಿಗಳ ಮಾತು

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆರ್‌ಆರ್‌ಆರ್‌ ಕೇಂದ್ರಕ್ಕೆ ಬಂದು ತಮ್ಮ ಮನೆಯಲ್ಲಿದ್ದ ಹಳೆಯ ವಸ್ತುಗಳನ್ನು ನೀಡುತ್ತಿದ್ದಾರೆ. ಅವರಿಗೆ ಪುರಸಭೆಯಿಂದ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಈ ಆಂದೋಲನ ಜೂ. 5ರ ಪರಿಸರ ದಿನಾಚರಣೆ ವರೆಗೂ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ನನ್ನ ಸ್ವಚ್ಛನಗರ ಆ್ಯಶ್‌ ಟ್ಯಾಗ್‌ ಬಳಸಿ ಈ ಆಂದೋಲನವನ್ನು ಸಾಮಾಜಿಕ ಜಾಲತಾಣಗಳಲ್ಲೂ ಬೆಂಬಲಿಸಬೇಕಿದೆ.

- ಎ.ವಾಸಿಂ, ಮುಖ್ಯಾಧಿಕಾರಿ, ಪುರಸಭೆ, ಹೊಳಲ್ಕೆರೆ
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ