ಆ್ಯಪ್ನಗರ

ಬಿಸಿಯೂಟ ಅಕ್ಕಿ ವಶ

ತಾಲೂಕಿನ ಕೋನಾಪುರ ಗ್ರಾಮದ ಸಣ್ಣಮಾರಣ್ಣ ಎಂಬವರಿಗೆ ಸೇರಿದ ಜಮೀನಿನ ಪಾಲಿಹೌಸ್‌ ಗೋದಾಮಿನಲ್ಲಿಅಕ್ರಮವಾಗಿ ಶೇಖರಿಸಿಟ್ಟಿದ್ದ ಬಿಸಿಯೂಟದ ಸುಮಾರು 55 ಟನ್‌ ಅಕ್ಕಿಯನ್ನು ಸೋಮವಾರ ರಾಂಪುರ ಪೊಲೀಸರು ವಶಪಡಿಸಿಕೊಂಡಿದ್ದು, ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Vijaya Karnataka 19 Nov 2019, 9:12 pm
ಮೊಳಕಾಲ್ಮುರು: ತಾಲೂಕಿನ ಕೋನಾಪುರ ಗ್ರಾಮದ ಸಣ್ಣಮಾರಣ್ಣ ಎಂಬವರಿಗೆ ಸೇರಿದ ಜಮೀನಿನ ಪಾಲಿಹೌಸ್‌ ಗೋದಾಮಿನಲ್ಲಿಅಕ್ರಮವಾಗಿ ಶೇಖರಿಸಿಟ್ಟಿದ್ದ ಬಿಸಿಯೂಟದ ಸುಮಾರು 55 ಟನ್‌ ಅಕ್ಕಿಯನ್ನು ಸೋಮವಾರ ರಾಂಪುರ ಪೊಲೀಸರು ವಶಪಡಿಸಿಕೊಂಡಿದ್ದು, ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Vijaya Karnataka Web hot yuta rice seized
ಬಿಸಿಯೂಟ ಅಕ್ಕಿ ವಶ

ಖಚಿತ ಮಾಹಿತಿ ಮೇರೆಗೆ ರಾಂಪುರ ಪಿಎಸ್‌ಐ ಗುಡ್ಡಪ್ಪ ದಾಳಿ ನಡೆಸಿ ಈ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಪ್ರತಿ ಚೀಲದ ಮೇಲೂ ಅಕ್ಷರ ದಾಸೋಹ ಯೋಜನೆ ಕರ್ನಾಟಕ ಸರಕಾರ ಎಂದು ಬರೆಯಲಾಗಿದೆ. 'ಚಿತ್ರದುರ್ಗ ಜಿಲ್ಲೆಗೆ ಈ ಚೀಲದ ಅಕ್ಕಿ ಸರಬರಾಜಾಗುವುದಿಲ್ಲ. ಇದು ಅನ್ಯ ಜಿಲ್ಲೆಗೆ ಸೇರಿದ್ದ ಅಕ್ಕಿ ಇರಬಹುದು' ಎಂದು ತಾಲೂಕು ಆಹಾರಶಾಖೆ ಶಿರಸ್ತೇದಾರ ಉದಯಕುಮಾರ್‌ ಸ್ಪಷ್ಟಪಡಿಸಿದರು. ಈ ಸಂಬಂಧ ಡಿ.ಚಿದಾನಂದಪ್ಪ, ಸಣ್ಣ ಮಾರಣ್ಣ, ಬೊಮ್ಮದೇವರಹಳ್ಳಿ ಈರಣ್ಣ ಹಾಗೂ ಹಿರೇಹಾಳ್‌ ಸಮೀಪದ ಜಾಜರ್‌ಕಲ್‌ನ ರಾಜಣ್ಣ, ರಾಮಾಂಜಿನಿ ಸೇರಿದಂತೆ ಒಟ್ಟು ಐವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ