ಆ್ಯಪ್ನಗರ

ಗಾಳಿ ಮಳೆಗೆ ನೆಲಕ್ಕುರುಳಿದ ಅಡಕೆ ಮರ, ಗುಡಿಸಲು

ಹೋಬಳಿಯ ಹಲವೆಡೆ ಶುಕ್ರವಾರ ರಾತ್ರಿ ಬಿರುಗಾಳಿ, ಗುಡುಗು ಸಹಿತ ಮಳೆ ಸುರಿಯಿತು.

Vijaya Karnataka 26 May 2019, 5:00 am
ಐಮಂಗಲ : ಹೋಬಳಿಯ ಹಲವೆಡೆ ಶುಕ್ರವಾರ ರಾತ್ರಿ ಬಿರುಗಾಳಿ, ಗುಡುಗು ಸಹಿತ ಮಳೆ ಸುರಿಯಿತು.
Vijaya Karnataka Web huddle tree grounded in the air
ಗಾಳಿ ಮಳೆಗೆ ನೆಲಕ್ಕುರುಳಿದ ಅಡಕೆ ಮರ, ಗುಡಿಸಲು


ಸುರಗೊಂಡನಹಳ್ಳಿ, ತವಂದಿ ಹಾಗೂ ಮೇಟಿಕುರ್ಕೆ ಗ್ರಾಮದಲ್ಲಿ ಬೀಸಿದ ಬಿರುಗಾಳಿಗೆ ಜಮೀನಿನಲ್ಲಿ ಹಾಕಲಾಗಿದ್ದ ಅನೇಕ ಮರಗಳು ಧರೆಗುರುಳಿವೆ.

ತವಂದಿ ಗ್ರಾಮದಲ್ಲಿ ಚಿಕ್ಕಣ್ಣರಿಗೆ ಸೇರಿದ ತೋಟದಲ್ಲಿ 40 ಅಡಕೆ ಮರಗಳು, ಕರಿಯಣ್ಣರ 10, ನಿಂಗಮ್ಮರಿಗೆ ಸೇರಿದ ಬಾಳೆ ತೋಟದಲ್ಲಿ ಮುಕ್ಕಾಲು ಎಕರೆಯಲ್ಲಿದ್ದ ಬಾಳೆ ಗಿಡಗಳು, ಸೂರಗೊಂಡನಹಳ್ಳಿಯ ಹೊಟ್ಟೆಪ್ಪರ 20 ಅಡಕೆ ಮರ, ಶಿವರಾಮು ಅÜರ 10 ತೆಂಗಿನ ಮರ ಗಾಳಿ ಆರ್ಭಟಕ್ಕೆ ನೆಲಕಚ್ಚಿವೆ.

ಗಾಳಿ ಮಳೆಗೆ ಮರಗಳಷ್ಟೇ ಅಲ್ಲದೇ ತವಂದಿ ಗ್ರಾಮದ ಶೇಖರಪ್ಪ, ಯಲ್ಲಪ್ಪ, ಕರಿಯಪ್ಪ, ತಿಪ್ಪೇಸ್ವಾಮಿ, ಹನುಮಂತಪ್ಪ, ಭೀಮಾಭೋವಿ ಎಂಬವವರ ಮನೆ ಶೀಟುಗಳು ಹಾರಿ ಹೋಗಿವೆ. ಗುಡಿಸಲಲ್ಲಿ ಕಟ್ಟಿದ್ದ ಒಂದು ಕುರಿ ಮೃತಪಟ್ಟಿದೆ. ಒಂದು ಎಮ್ಮೆ ಗಾಯಗೊಂಡಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ತಾಪಂ ಇಒ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ