ಆ್ಯಪ್ನಗರ

ಅದ್ಧೂರಿ ಶ್ರೀಕರಿಸಿದ್ಧೇಶ್ವರ ಉತ್ಸವ

ತಾಲೂಕಿನ ರಾಮಗಿರಿ ಗ್ರಾಮದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀಕರಿಸಿದ್ದೇಶ್ವರಸ್ವಾಮಿ ರಥೋತ್ಸವ ನೆನಪಿಗಾಗಿ ಮಂಗಳವಾರ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರೀಕರಿಸಿದ್ಧೇಶ್ವರ ಉತ್ಸವ ಅದ್ಧೂರಿಯಾಗಿ ಜರುಗಿತು.

Vijaya Karnataka 20 Mar 2019, 5:00 am
ಹೊಳಲ್ಕೆರೆ : ತಾಲೂಕಿನ ರಾಮಗಿರಿ ಗ್ರಾಮದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀಕರಿಸಿದ್ದೇಶ್ವರಸ್ವಾಮಿ ರಥೋತ್ಸವ ನೆನಪಿಗಾಗಿ ಮಂಗಳವಾರ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರೀಕರಿಸಿದ್ಧೇಶ್ವರ ಉತ್ಸವ ಅದ್ಧೂರಿಯಾಗಿ ಜರುಗಿತು.
Vijaya Karnataka Web hugely sriridheeswarar festival
ಅದ್ಧೂರಿ ಶ್ರೀಕರಿಸಿದ್ಧೇಶ್ವರ ಉತ್ಸವ


ಸ್ವಾಮಿಗೆ ಸೋಮವಾರದಿಂಲೇ ನಿರಂತರವಾಗಿ ವಿಶೇಷ ಪೂಜೆ, ರುದ್ರಾಭಿಷೇಕ, ಗಂಗಾಪೂಜೆ ಸೇರಿದಂತೆ ಅನೇಕ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ಗ್ರಾಮಸ್ಥರು ಸೇರಿದಂತೆ ಸುತ್ತಲಿನ ಗ್ರಾಮದ ಭಕ್ತರು ಕೂಡ ಸ್ವಾಮಿಯ ದಾಸೋಹ ಕಾರ್ಯಕ್ರಮಕ್ಕೆ ಮೀಸಲು ಅರ್ಪಿಸಿ ಭಕ್ತಿ ಸಮರ್ಪಿಸಿದರು.

ಭಕ್ತರ ಮೊರೆ: ಈ ಹಿಂದೆ ಶ್ರೀಸ್ವಾಮಿಯ ರಥೋತ್ಸವ ಅದ್ದೂರಿಯಾಗಿ ನಡೆಯುತ್ತಿತ್ತು, ಆದರೆ ಗ್ರಾಮದಲ್ಲಿ ಕೆಲ ಸಮಸ್ಯೆಗಳಿಂದ ಕಳೆದ ತೊಂಬತ್ತು ವರ್ಷಗಳಿಂದ ರಥೋತ್ಸವ ನಡೆಯುವುದು ನಿಂತು ಹೋಗಿದೆ. ಈಗಾಗಲೇ ಹಿಂದೆ ನಡೆಯುತ್ತಿದ್ದ ರಥವು ನೈಪತ್ಯದ ಹಾದಿ ಸೇರಿದೆ. ಹಾಗಾಗಿ ಗ್ರಾಮಸ್ಥರು ಹಲವು ಬಾರಿ ನೂತನ ರಥ ನಿರ್ಮಾಣಕ್ಕೆ ಸ್ವಾಮಿ ಅನುಮತಿ ಕೋರಿದ್ದರು. ಆದರೆ ಸ್ವಾಮಿ ಅಪ್ಪಣೆ ನೀಡದ ಹಿನ್ನೆಲೆಯಲ್ಲಿ ಈ ಬಾರಿ ರಥೋತ್ಸವ ನಡೆಯುವ ದಿನದಂದು ಕರಿಸಿದ್ದೇಶ್ವರೋತ್ಸವ ನೆರವೇರಿಸಲು ಸ್ವಾಮಿ ಅಪ್ಪಣೆ ಕೋರಿದ್ದರು. ಅದಕ್ಕೆ ಸ್ವಾಮಿಯ ಅನುಮತಿ ದೊರೆತ ಹಿನ್ನೆಲೆಯಲ್ಲಿ ಇಂದು ಉತ್ಸವ ನೆರವೇರಿಸಲಾಯಿತು.

ಭಕ್ತರು ಸ್ವಾಮಿ ನೂತನ ರಥ ನಿರ್ಮಾಣಕ್ಕೆ ಅನುವು ಮಾಡಿಕೊಡುವಂತೆ ಮೊರೆ ಇಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಸ್ವಾಮಿ ಅಪ್ಪಣೆ ದೊರೆಯುವುದು ಎಂಬ ನಂಬಿಕೆಯಿಂದ ಇಂದು ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಹುಳಿಸೊಪ್ಪು, ರಾಗಿ ಮುದ್ದೆ ದಾಸೋಹ:

ಸ್ವಾಮಿಗೆ ಹುಳಿಸೊಪ್ಪು, ರಾಗಿ ಮುದ್ದೆ ಎಂದರೆ ಅಚ್ಚು ಮೆಚ್ಚು. ಸ್ವಾಮಿಯ ಇಷ್ಟಾರ್ಥದಂತೆ ಬೆಟ್ಟದ ಮೇಲೆ ಭಕ್ತರಿಂದ ಮೀಸಲು ಪಡೆದು, ತಾವರೇಕೆರೆಯಿಂದ ಕೆಸವಿನ ದಂಟು ತಂದು ಅದರಿಂದ ತಯಾರಿಸಿದ ಸಾಂಬಾರು ಹಾಗೂ ರಾಗಿ ಮುದ್ದೆಯ ದಾಸೋಹ ನೆರವೇರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ