ಆ್ಯಪ್ನಗರ

ಅಧಿಕಾರ ಪ್ರೀತಿಸುವ ಸಮಾಜದಲ್ಲಿದ್ದೇವೆ: ನ್ಯಾ. ಸಂತೋಷ್‌ ಹೆಗ್ಡೆ

ತಪ್ಪು ಮಾಡಿ ಜೈಲಿಗೆ ಹೋದವರು ಜಾಮೀನು ಮೇಲೆ ಹೊರ ಬಂದರೆ, ಹಾರ, ತುರಾಯಿ ಹಾಕಿ ಸ್ವಾಗತಿಸುವ, ಅಧಿಕಾರ, ಶ್ರೀಮಂತಿಕೆಯನ್ನು ಪ್ರೀತಿಸುವಂತಹ ಸಮಾಜದಲ್ಲಿ ನಾವೆಲ್ಲ ಇದ್ದೇವೆ. ಇದರಿಂದ ಭ್ರಷ್ಟಾಚಾರ ನಿಗ್ರಹ ಹೇಗೆ ಸಾಧ್ಯ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ವಿಷಾದಿಸಿದರು.

Vijaya Karnataka 18 Jan 2019, 6:45 pm
ಚಿತ್ರದುರ್ಗ: ತಪ್ಪು ಮಾಡಿ ಜೈಲಿಗೆ ಹೋದವರು ಜಾಮೀನು ಮೇಲೆ ಹೊರ ಬಂದರೆ, ಹಾರ, ತುರಾಯಿ ಹಾಕಿ ಸ್ವಾಗತಿಸುವ, ಅಧಿಕಾರ, ಶ್ರೀಮಂತಿಕೆಯನ್ನು ಪ್ರೀತಿಸುವಂತಹ ಸಮಾಜದಲ್ಲಿ ನಾವೆಲ್ಲ ಇದ್ದೇವೆ. ಇದರಿಂದ ಭ್ರಷ್ಟಾಚಾರ ನಿಗ್ರಹ ಹೇಗೆ ಸಾಧ್ಯ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ವಿಷಾದಿಸಿದರು.
Vijaya Karnataka Web in a society that loves power justice santosh hegde
ಅಧಿಕಾರ ಪ್ರೀತಿಸುವ ಸಮಾಜದಲ್ಲಿದ್ದೇವೆ: ನ್ಯಾ. ಸಂತೋಷ್‌ ಹೆಗ್ಡೆ


ತಾಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದಲ್ಲಿ ಗುರುವಾರ ನಡೆದ ಶ್ರೀ ರಾಘವೇಂದ್ರ ಗುರೂಜಿ 23ನೇ ಹಾಗೂ ಸೂರುದಾಸ್‌ ಜೀ ಅವರ 21ನೇ ಪುಣ್ಯಾರಾಧನೆ ಹಾಗೂ ತಿರುಕನೂರಿನಲ್ಲಿ ರಂಗದಾಸೋಹ ಕಾರ್ಯಕ್ರಮದಲ್ಲಿ 'ತಿರುಕಶ್ರೀ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

'ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ನನಗೆ ಅರಿವಿರಲಿಲ್ಲ, ದೊಡ್ಡ ಹುದ್ದೆಯಲ್ಲಿದ್ದ ನಾನು ಎಲ್ಲವೂ ಸರಿ ಇದೆ ಎಂದು ಭಾವಿಸಿದ್ದೆ. ಆದರೆ ಲೋಕಾಯುಕ್ತ ಹುದ್ದೆಯನ್ನು ಅಲಂಕರಿಸಿದ ನಂತರವೇ ನನಗೆ ತಿಳಿದಿದ್ದು, ಭ್ರಷ್ಟಾಚಾರ ಎಂಬುದು ನಮ್ಮ ಸಮಾಜದಲ್ಲಿ ತಾಂಡವಾಡುತ್ತಿದೆ ಎಂಬುದು' ಎಂದರು.

ನಮ್ಮ ಹಿರಿಯರು ಕಾಪಾಡಿಕೊಂಡು ಬಂದಿದ್ದ ಮೌಲ್ಯಗಳು ಕುಸಿದಿವೆ. ಬದಲಾವಣೆ ಯುವಕರು, ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ. ಈವರೆಗೆ 1045 ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಯುವಕರು, ವಿದ್ಯಾರ್ಥಿಗಳಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡುತಿದ್ದೇನೆ. ಪ್ರತಿಯೊಬ್ಬ ಮಾನವನು ಕೂಡ ತೃಪ್ತಿ ಹಾಗೂ ಮಾನವೀಯತೆ ಎಂಬ ಎರಡು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ದುರಾಸೆಗೆ ಮದ್ದಿಲ್ಲ, ಹಗರಣಗಳನ್ನು ಮಟ್ಟ ಹಾಕದಿದ್ದಲ್ಲಿ ಸಮಾಜ ಅವನತಿ ಹೊಂದಲಿದೆ ಎಂದರು.

ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಮಾನವನ ಬದುಕು ಭರವಸೆಯ ದಿಕ್ಕಿನಿಂದ ದುರಾಸೆಯ ದಿಕ್ಕಿನೆಡೆ ವಾಲುತಿದ್ದು, ದುರಾಸೆಯಲ್ಲಿ ಸಾಗುತಿರುವವರ ಸಂಖ್ಯೆ ಲಕ್ಷ ಲಕ್ಷ ವಾಗುತಿದ್ದರೆ, ಭರವಸೆಯಲ್ಲಿ ಸಾಗುವವರ ಸಂಖ್ಯೆ ಅತ್ಯಂತ ವಿರಳವಾಗುತ್ತಿದೆ. ಮಲ್ಲಾಡಿಹಳ್ಳಿ ಸ್ವಾಮೀಜಿಗಳಿಬ್ಬರು ಭರವಸೆಯ ಬದುಕಿನಲ್ಲಿ ಸಾಗಿದವರಾಗಿದ್ದಾರೆ ಎಂದರು. ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಬಿಲ್ಲಪ್ಪ ಮಾತನಾಡಿದರು. ಅನಾಥಸೇವಾಶ್ರಮದ ವಿಶೇಷಾಧಿಕಾರಿ ಟಿ.ಎಚ್‌. ಕೃಷ್ಣಮೂರ್ತಿ, ಶಿಕ್ಷ ಣ ತಜ್ಞ ಕೆ.ಈ.ರಾಧಾಕೃಷ್ಣ, ಮುರುಘಾ ಮಠದ ಜಿ.ಎನ್‌.ಮಲ್ಲಿಕಾರ್ಜುನ್‌, ಅನಾಥ ಸೇವಾಶ್ರಮದ ವಿಶ್ವಸ್ಥರಾದ ಚಿತ್ರಶೇಖರ್‌, ಪ್ರೊ.ಟಿ.ಕೆ.ಕೃಷ್ಣಮೂರ್ತಿ, ಕೆ.ಎಂ.ತಿಮ್ಮರಾಜು ಇತರರಿದ್ದರು.

ಬಾಕ್ಸ್‌/

ಮೊದಲ ತಿರುಕಶ್ರೀ ಪ್ರಶಸ್ತಿ ಪ್ರದಾನ:


ಇದೇ ಮೊದಲ ಬಾರಿ ತಿರುಕಶ್ರೀ ಪ್ರಶಸ್ತಿ ನೀಡಲಾಗುತ್ತಿದೆ. ಮೊತ್ತ ಮೊದಲನೆಯವರಾಗಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್‌ ಹೆಗ್ಡೆ ಅವರಿಗೆ ಪ್ರದಾನ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ