ಆ್ಯಪ್ನಗರ

Dasara News - ಕೋಟೆನಾಡಿನಲ್ಲಿ ಅದ್ದೂರಿಯಾಗಿ ನಡೆದ ದಸರಾ ಅಂಬಿನೋತ್ಸವ

ಚಿತ್ರದುರ್ಗ ನಗರ ವ್ಯಾಪ್ತಿಯ ವೆಂಕಟರಮಣ ಸ್ವಾಮಿಯ ದೇಗುಲದಲ್ಲಿ, ಹಿರಿಯೂರಿನ ಆಂಜನೇಯ ಸ್ವಾಮಿ ದೇಗುಲದಲ್ಲಿ, ಚಿತ್ರದುರ್ಗ-ಹೊಳಲ್ಕೆರೆ ರಸ್ತೆಯಲ್ಲಿರುವ ಚಿತ್ರಹಳ್ಳಿಯ ಚಿತ್ರಲಿಂಗೇಶ್ವರ ಸ್ವಾಮಿಯ ದೇಗುಲದಲ್ಲಿ ವಿಜೃಂಭಣೆಯಿಂದ ಈ ಬಾರಿಯ ದಸರಾ ನೆರವೇರಿತು. ಹಿರಿಯೂರು ನಗರದ ಸಂತೆ ಮೈದಾನ ಬಳಿಯಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಳಿಯ ಬನ್ನಿ ಮಂಟಪದ ಹತ್ತಿರ ಬುಧವಾರ ಸಂಜೆ ನಗರದ ಪ್ರಮುಖ ದೇವತೆಗಳ ಸಮ್ಮುಖದಲ್ಲಿ ತಹಸೀಲ್ದಾರ್ ಪ್ರಶಾಂತ್ ಕೆ ಪಾಟೀಲ್ ಅವರು ಸಾಂಪ್ರದಾಯಿಕ ವೇಷ ಧರಿಸಿ ಬಿಲ್ಲಿನ ಬಾಣ ಹೂಡಿ ಬಿಡುವ ಮೂಲಕ ದಸರಾ ಅಂಬಿನೋತ್ಸವಕ್ಕೆ ಚಾಲನೆ ನೀಡಿದರು.

Edited byಚೇತನ್ ಓ.ಆರ್. | Vijaya Karnataka Web 6 Oct 2022, 12:05 am
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ವಿವಿಧ ದೇವರುಗಳ ದಸರಾ ಅಂಬಿನೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು. ಚಿತ್ರದುರ್ಗ ನಗರ ವ್ಯಾಪ್ತಿಯ ವೆಂಕಟರಮಣ ಸ್ವಾಮಿಯ ದೇಗುಲದಲ್ಲಿ, ಹಿರಿಯೂರಿನ ಆಂಜನೇಯ ಸ್ವಾಮಿ ದೇಗುಲದಲ್ಲಿ, ಚಿತ್ರದುರ್ಗ-ಹೊಳಲ್ಕೆರೆ ರಸ್ತೆಯಲ್ಲಿರುವ ಚಿತ್ರಹಳ್ಳಿಯ ಚಿತ್ರಲಿಂಗೇಶ್ವರ ಸ್ವಾಮಿಯ ದೇಗುಲದಲ್ಲಿ ವಿಜೃಂಭಣೆಯಿಂದ ಈ ಬಾರಿಯ ದಸರಾ ನೆರವೇರಿತು.
Vijaya Karnataka Web Flower decoration for Dasara in Chitradurga
ಚಿತ್ರದುರ್ಗದ ವೆಂಕಟರಮಣ ದೇವಸ್ಥಾನದಲ್ಲಿ ದಸರಾ ಪ್ರಯುಕ್ತ ಹೂವಿನಲಂಕಾರ.



ಚಿತ್ರದುರ್ಗದ ವೆಂಕಟರಮಣ ಸ್ವಾಮಿಯ ಅಂಬಿನೋತ್ಸವ:

ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿರುವ ಪ್ರಸನ್ನ ವೆಂಕಟರಮಣಸ್ವಾಮಿ‌ಯ ಅಂಬಿನೋತ್ಸವ ಬುಧವಾರ ಸಂಜೆ ಬಹಳ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಂಬನ್ನು ಕತ್ತರಿಸುವ ಮೂಲಕ ತಹಶೀಲ್ದಾರ್ ಸತ್ಯನಾರಾಯಣ ಅವರು ಚಾಲನೆ ನೀಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಅಂಬಿನೋತ್ಸವ ಸಡಗರ ಸಂಭ್ರಮದಿಂದ ನಡೆಯಿತು.

Murugha Mutt | ಚಿತ್ರದುರ್ಗ: ಮುರುಘಾ ಮಠದಲ್ಲಿ ಮೂರು ದಿನ 'ಶರಣ ಸಂಸ್ಕೃತಿ ಉತ್ಸವ', ಸರಳವಾಗಿ ಆಚರಿಸಲು ತೀರ್ಮಾನ
ಹಿರಿಯೂರಿನ ಆಂಜನೇಯ ಸ್ವಾಮಿ ದೇವಾಲಯದಲ್ಲಿ
ಹಿರಿಯೂರು ನಗರದ ಸಂತೆ ಮೈದಾನ ಬಳಿಯಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಳಿಯ ಬನ್ನಿ ಮಂಟಪದ ಹತ್ತಿರ ಬುಧವಾರ ಸಂಜೆ ನಗರದ ಪ್ರಮುಖ ದೇವತೆಗಳ ಸಮ್ಮುಖದಲ್ಲಿ ತಹಸೀಲ್ದಾರ್ ಪ್ರಶಾಂತ್ ಕೆ ಪಾಟೀಲ್ ಅವರು ಸಾಂಪ್ರದಾಯಿಕ ವೇಷ ಧರಿಸಿ ಬಿಲ್ಲಿನ ಬಾಣ ಹೂಡಿ ಬಿಡುವ ಮೂಲಕ ದಸರಾ ಅಂಬಿನೋತ್ಸವಕ್ಕೆ ಚಾಲನೆ ನೀಡಿದರು.

ಬನ್ನಿ ಮಂಟಪದ ಆವರಣಕ್ಕೆ ನಗರದ ಪ್ರಮುಖ ದೇವರುಗಳಾದ ಶ್ರೀ ತೇರುಮಲ್ಲೇಶ್ವರ ಸ್ವಾಮಿ, ಮೈಲಾರಲಿಂಗೇಶ್ವರ ಸ್ವಾಮಿ, ರಾಜಾ ದುರ್ಗಾಪರಮೇಶ್ವರಿ ದೇವಿ, ರೇವಣ ಸಿದ್ದೇಶ್ವರಸ್ವಾಮಿ, ಬನಶಂಕರಿ ದೇವಿ, ಹೊಸೂರಮ್ಮ, ಲಕ್ಷ್ಮೀನರಸಿಂಹಸ್ವಾಮಿ, ಕಾಳಿಕಾಂಬ, ವೀರಭದ್ರ ಸ್ವಾಮಿ ಹಾಗೂ ಪೌದಿಯಮ್ಮ ದೇವತೆ ಸೇರಿ 11 ದೇವರುಗಳು ವಿವಿಧ ವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣೆ ಮೂಲಕ ಬಂದು ಸೇರಿದವು. ನಂತರ ದೇವರಿಗೆ ಪೂಜೆ ಸಲ್ಲಿಸಿ ಅಲಂಕೃತ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆಯಲ್ಲಿ ತಂದಿದ್ದ ಬಿಲ್ಲು ಬಾಣಗಳನ್ನು ತಹಸೀಲ್ದಾರ್ ಬನ್ನಿ ಮರದಿಂದ ನಗರದ ದೇವತೆಗಳನ್ನು ಕೂರಿಸಿದ ಸ್ಥಳದವರೆಗೆ ಅಂಬು ಹೊಡೆಯುತ್ತ ಅಂಬಿನೋತ್ಸವ ನೇರವೇರಿತು.

ನಂತರ ಬನ್ನಿ ಮರದ ಕೆಳಗೆ ಇರುವ ಶ್ರೀ ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಹಾಗೂ ಮಹಮಂಗಳಾರತಿ ಸಲ್ಲಿಸಲಾಯಿತು. ಪೂಜೆ ಆದನಂತರ ಸೇರಿದ್ದ ಭಕ್ತಾಧಿಗಳು ಬನ್ನಿ ಮರದಿಂದ ಬನ್ನಿ ಪತ್ರೆಗಳನ್ನು ಕಿತ್ತು ಪರಸ್ಪರ ಹಂಚುವ ಮೂಲಕ ಪ್ರೀತಿ ಸ್ನೇಹ ವಿನಿಮಯ ಮಾಡಿಕೊಳ್ಳುವ ಮೂಲಕ ದಸರಾ ಶುಭಾಶಯಗಳನ್ನು ಕೋರಿದರು.

Dasara 2022: ಮೈಸೂರು ದಸರಾದ ಬಗ್ಗೆ ನಿಮಗೆಷ್ಟು ಗೊತ್ತು..? ಈ ರಹಸ್ಯಗಳು ಗೊತ್ತೇ..?
ಚಿತ್ರಲಿಂಗೇಶ್ವರನ ಅಂಬಿನೋತ್ಸವ

ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಬುಡಕಟ್ಟು ಕಾಡುಗೊಲ್ಲ ಸಮುದಾಯ ಆರಾಧ್ಯ ದೈವ ಚಿತ್ರಲಿಂಗೇಶ್ವರ ಅಂಬಿನೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಬಣ್ಣದ ಪಲ್ಲಕ್ಕಿಯಲ್ಲಿ ಶೃಂಗಾರ ಮಾಡಿದ ದೇವರನ್ನು ಕೂರಿಸಿ, ಬನ್ನಿ ಮರದ ಹತ್ತಿರ ಕೊಂಡೊಯ್ದು, ಬನ್ನಿ ಮರಕ್ಕೆ ಬಾಳೆ ಕಂದು ಕಟ್ಟಿ ಪೂಜೆ ಸಲ್ಲಿಸಿ ದೇವರ ಪೂಜಾರಿಯು ಬಿಲ್ಲು ಬಾಣ ಹೊಡೆಯುವ ಮೂಲಕ ಅಂಬಿನೋತ್ಸವ ಜರುಗಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.

ಕಳೆದ ಸೆ. 26 ರಿಂದ ನಡೆದ ನವರಾತ್ರಿಯಲ್ಲಿ 9 ದಿನಗಳು ಕೂಡ ಸ್ವಾಮಿಗೆ ವಿವಿಧ ಬಗೆಯ ಅಲಂಕಾರಗಳೊಂದಿಗೆ ಪೂಜೆ ಪುನಸ್ಕಾರಗಳು ನಡೆದವು. ಇನ್ನು ದೇವಸ್ಥಾನಕ್ಕೆ ವಿದ್ಯುತ್ ದೀಪದ ಅಲಂಕಾರ ಮಾಡಲಾಗಿತ್ತು. ಇದರಲ್ಲಿ 4 ಮತ್ತು 5 ರಂದು ವಿಶೇಷ ದೀಪಾಲಂಕಾರ ಹಾಗೂ ಹೂವಿನ ಅಲಂಕಾರ ಭಕ್ತರ ಗಮನ ಸೆಳೆಯಿತು. ಇಂದು ಕಂಕಣ ವಿಸರ್ಜನೆಯ ಮೂಲಕ ನವರಾತ್ರಿಯ ಪೂಜೆಗೆ ತೆರೆ ಬೀಳಲಿದೆ. ಈ ಅಂಬಿನೋತ್ಸವವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ‌ ಭಕ್ತರು ಭಾಗವಹಿಸಿದ್ದರು.

ಇನ್ನು ಉಳಿದಂತೆ ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ ತಾಲ್ಲೂಕಿನಲ್ಲೂ ಸಹ ವಿಜಯದಶಮಿ ಹಬ್ಬದ ಅಂಬಿನೋತ್ಸವ ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ