ಆ್ಯಪ್ನಗರ

ತಾಪಮಾನ ಹೆಚ್ಚಳದಿಂದ ಅಪಾಯದೆಡೆಗೆ

ಇಂದು ಜಗತಿನಲ್ಲಿ ತಾಪಮಾನದ ಹೆಚ್ಚಳದಿಂದ ಉಷ್ಣತೆಗೆ ಒಳಗಾಗಿ ಅಪಾಯದ ಕಡೆಗೆವಾಲುತ್ತಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Vijaya Karnataka 7 Feb 2019, 5:00 am
ಚಿತ್ರದುರ್ಗ : ಇಂದು ಜಗತಿನಲ್ಲಿ ತಾಪಮಾನದ ಹೆಚ್ಚಳದಿಂದ ಉಷ್ಣತೆಗೆ ಒಳಗಾಗಿ ಅಪಾಯದ ಕಡೆಗೆವಾಲುತ್ತಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
Vijaya Karnataka Web increased temperature increases
ತಾಪಮಾನ ಹೆಚ್ಚಳದಿಂದ ಅಪಾಯದೆಡೆಗೆ


ನಗರದ ಮುರುಘಾಮಠ ಅನುಭವ ಮಂಟಪದಲ್ಲಿ ಬುಧವಾರ ಬಸವಕೇಂದ್ರ ಶ್ರೀ ಮುರುಘಾಮಠ, ಎಸ್‌ಜೆಎಂ ಆಂಗ್ಲಮಾಧ್ಯಮ ಶಾಲೆ ಆಶ್ರಯದಲ್ಲಿ ಆಯೋಜಿಸಿದ ಶರಣಸಂಗಮ ಮತ್ತು ಪೆರಿಯಾರ್‌ ಚಿಂತನೆ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಕೃತಿ ಎಂದರೆ ಪಂಚಭೂತಗಳು. ಮಾನವ ಭೂಮಿ ಹಾಳು ಮಾಡುತ್ತಿದ್ದಾನೆ. ಅಂತರ್ಜಲಕ್ಕೆ ಕೈಹಾಕುತ್ತಿದ್ದಾನೆ. ಮಕ್ಕಳ ಸಂತಾನದ ಜತೆಗೆ ವೃಕ್ಷ ಸಂತಾನವೂ ಬೇಕು. ಗಿಡ ಮರಗಳು ಇಲ್ಲದೇ ಹೋದರೆ ಮಾನವ ತುಂಬ ಕಷ್ಟ ಎದುರಿಸಬೇಕಾಗುತ್ತದೆ ಎಂದರು.

ಅಭಿವದ್ಧಿ ಹೆಸರಿನಲ್ಲಿ ನಗರಗಳ ವಿಸ್ತರಣೆ ಆಗುತ್ತಿದೆ. ಇಂದು ಸ್ವಲ್ಪ ಪ್ರಮಾಣದ ಅರಣ್ಯ ಸಂಪತ್ತು ಇದೆ. ವಾತಾವರಣದಲ್ಲಿ ಅತಿಯಾದ ಕಾರ್ಬನ್‌ ಡೈಆಕ್ಸೈಡ್‌ನಿಂದಾಗಿ ತಾಪಮಾನ ದಿನೇದಿನೇ ಹೆಚ್ಚಾಗುತ್ತಿದೆ. ಇದು ಅಪಾಯಕಾರಿ ಲಕ್ಷ ಣವಾಗಿದ್ದು ನಾವು ಪ್ರಕೃತಿ ಪ್ರೀತಿಯನ್ನು ತಾಳಬೇಕಿದೆ. ನಮಗೆ ಜಲಸಂಪತ್ತು, ವನಸಂಪತ್ತು ಬೇಕು. ಹೊರರಾಷ್ಟ್ರಗಳು ಪ್ರಕೃತಿ ಬಗ್ಗೆ ವಿಶೇಷ ಕಾಳಜಿ ತೋರಿಸುತ್ತಿವೆ. ಹಾಗೆಯೇ ಸ್ವಚ್ಛತೆ ಮತ್ತು ಪರಿಸರ ಕಾಪಾಡುವ ಜವಾಬ್ದಾರಿ ನಮ್ಮದಾಗಿದೆ. ಪೆರಿಯಾರ್‌ ಪ್ರಕಾರ ಮೊದಲು ಮಾನವ, ಆನಂತರ ದೇವರು. ಮಾನವ ದೇವರನ್ನು ಸೃಷ್ಟಿ ಮಾಡಿದ ಎಂದು ಹೇಳಿದ್ದಾರೆ. ಬಸವಣ್ಣನವರು ಕೂಡ ದೇವರಿಗಿಂತ ಕಾಯಕವೇ ಮುಖ್ಯವೆಂದಿದ್ದಾರೆ ಎಂದರು.

ಪೆರಿಯಾರ್‌ ಚಿಂತನೆ ಕೃತಿ ಲೇಖಕ ಡಾ.ಸಿ.ಚಂದ್ರಪ್ಪ, ನಿವೃತ ಪ್ರಾಚಾರ್ಯ ಪ್ರೊ. ಎಚ್‌. ಲಿಂಗಪ್ಪ, ಎಸ್‌ಜೆಎಂ ವಿದ್ಯಾಪೀಠದ ಕಾರ‍್ಯನಿರ್ವಹಣಾ ನಿರ್ದೇಶಕ ಡಾ. ಜಿ.ಎನ್‌.ಮಲ್ಲಿಕಾರ್ಜುನಪ್ಪ, ಎಸ್‌ಜೆಎಂ ಆಂಗ್ಲಮಾಧ್ಯಮ ಶಾಲೆ ಮುಖ್ಯ ಶಿಕ್ಷ ಕಿ ಪರಂಜ್ಯೋತಿ, ಪ್ರೊ.ಶಿವಲಿಂಗಪ್ಪ, ಡಾ. ಮಂಜಣ್ಣ, ಪ್ರೊ. ಪರಮೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ