ಆ್ಯಪ್ನಗರ

ಪಾಕ್‌ ಆಕ್ರಮಿತ ಕಾಶ್ಮೀರ ಹಿಂಪಡೆಯಲು ಭಾರತ ಸನ್ನದ್ಧ: ಅರವಿಂದ ಲಿಂಬಾವಳಿ

ವಿಶ್ವಸಂಸ್ಥೆ ಒಪ್ಪಂದದ ಪ್ರಕಾರ ನೆಹರು ಜಮ್ಮು-ಕಾಶ್ಮೀರವನ್ನು ವಶಕ್ಕೆ ತೆಗೆದುಕೊಳ್ಳಲು ಆಗಲಿಲ್ಲ. ಇದಕ್ಕೆ ಅವರಲ್ಲಿದ್ದ ನಿರಾಸಕ್ತಿ, ಶೇಖ್‌ ಅಬ್ದುಲ್ಲಾಜತೆ ಇದ್ದ ನಿಕಟ ಸಂಬಂಧ ಕಾರಣ ಇರಬಹುದು. ವಲ್ಲಬಾಯಿ ಪಟೇಲ್‌, ಅಂಬೇಡ್ಕರ್‌ರನ್ನು ದೂರವಿಟ್ಟು, 306(ಎ) ವಿಧಿಯನ್ನು ಸಂವಿಧಾನದಲ್ಲಿಸೇರಿಸಿ ಜಮ್ಮು-ಕಾಶ್ಮೀರಕ್ಕೆ ಕಾಂಗ್ರೆಸ್‌ ವಿಶೇಷ ಸ್ಥಾನಮಾನ ನೀಡುತ್ತಾ ಬಂದಿತು ಎಂದರು.

Vijaya Karnataka 30 Sep 2019, 3:10 pm
ಚಿತ್ರದುರ್ಗ: ಪಾಕ್‌ ಆಕ್ರಮಿತ ಕಾಶ್ಮೀರ ಪ್ರದೇಶವನ್ನು ಹಿಂದಕ್ಕೆ ಪಡೆಯಲು ಭಾರತ ಸನ್ನದ್ಧವಾಗಿದೆ. ಜಮ್ಮು-ಕಾಶ್ಮೀರದಲ್ಲಿ370ನೇ ವಿಧಿ ರದ್ದುಪಡಿಸುವ ಮೂಲಕ ಭಾರತ ಇಂಚು ಭೂಮಿ ಸಹಾ ಬಿಟ್ಟು ಕೊಡುವುದಿಲ್ಲಎನ್ನುವ ಎಚ್ಚರಿಕೆ ಸಂದೇಶ ಪಾಕಿಸ್ತಾನಕ್ಕೆ ನೀಡಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.
Vijaya Karnataka Web Limbavali


ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಬಿಜೆಪಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ಅಭಿಯಾನ, ಒಂದು ರಾಷ್ಟ್ರ ಒಂದು ಸಂವಿಧಾನ, ವಿಧಿ 370 ರದ್ದತಿ, ಐತಿಹಾಸಿಕ ತಪ್ಪಿನ ತಿದ್ದುಪಡಿ ಜನಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.

ಪಾಕ್‌ ಆಕ್ರಮಿತ ಕಾಶ್ಮೀರ' ಎಂಬ ಸಮಸ್ಯೆ ಸೃಷ್ಟಿಯಾಗಲು ಅಂದು ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರು ಅವರೇ ನೇರ ಕಾರಣ

ವಿಶ್ವಸಂಸ್ಥೆ ಒಪ್ಪಂದದ ಪ್ರಕಾರ ನೆಹರು ಜಮ್ಮು-ಕಾಶ್ಮೀರವನ್ನು ವಶಕ್ಕೆ ತೆಗೆದುಕೊಳ್ಳಲು ಆಗಲಿಲ್ಲ. ಇದಕ್ಕೆ ಅವರಲ್ಲಿದ್ದ ನಿರಾಸಕ್ತಿ, ಶೇಖ್‌ ಅಬ್ದುಲ್ಲಾಜತೆ ಇದ್ದ ನಿಕಟ ಸಂಬಂಧ ಕಾರಣ ಇರಬಹುದು. ವಲ್ಲಬಾಯಿ ಪಟೇಲ್‌, ಅಂಬೇಡ್ಕರ್‌ರನ್ನು ದೂರವಿಟ್ಟು, 306(ಎ) ವಿಧಿಯನ್ನು ಸಂವಿಧಾನದಲ್ಲಿಸೇರಿಸಿ ಜಮ್ಮು-ಕಾಶ್ಮೀರಕ್ಕೆ ಕಾಂಗ್ರೆಸ್‌ ವಿಶೇಷ ಸ್ಥಾನಮಾನ ನೀಡುತ್ತಾ ಬಂದಿತು ಎಂದರು.

'ದೋ ನಿಷಾನ್‌, ದೋ ಪ್ರಧಾನ್‌, ದೋ ವಿಧಾನ್‌ ನಹಿ ಚಲೇಗಾ ಎನ್ನುವ ಹೋರಾಟವನ್ನು ಜನಸಂಘ ಹಿಂದಿನಿಂದಲೂ ನಡೆಸಿದ ಫಲವಾಗಿ ಇಂದು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಧಿ 370ನ್ನು ರದ್ದುಪಡಿಸಲು ಸಾಧ್ಯವಾಯಿತು. ದೇಶದ ಜನರ ಭಾವನೆ ಆಶೋತ್ತರಗಳಿಗೆ ತಕ್ಕಂತೆ ಪ್ರಧಾನಿ ಮೋದಿ ನಡೆದುಕೊಂಡಿದ್ದಾರೆ' ಎಂದು ಶ್ಲಾಘಿಘಿಸಿದರು.

ಜಮ್ಮು-ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವೆಂದು ಪರಿಗಣಿಸಿ ವಿಧಿ 370ನ್ನು ರದ್ದುಪಡಿಸಲಾಗಿದೆ. ನಮ್ಮ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಾಗಲೂ ಹೋರಾಡಿ ವಶಕ್ಕೆ ಪಡೆಯಬೇಕಾಯಿತು. ಇದು ಭಾರತದ ಆಂತರಿಕ ವಿಚಾರ. ಅಂತಾರಾಷ್ಟ್ರೀಯ ವಿಚಾರವಲ್ಲಎಂದು ವಿಶ್ವಸಂಸ್ಥೆಯಲ್ಲಿಪ್ರಧಾನಿ ಮೋದಿ ನಿಲುವನ್ನು ಜಾಗತಿಕವಾಗಿ ಹಲವು ದೇಶಗಳು ಬೆಂಬಲಿಸಿವೆ ಎಂದರು.

ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, 'ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಧಿ 370 ನ್ನು ಪ್ರಧಾನಿ ಮೋದಿ ರದ್ದುಪಡಿಸಿರುವುದನ್ನು ದೇಶದ ಜನ ಸ್ವಾಗತಿಸಿದ್ದಾರೆ. ನಮ್ಮ ದೇಶದ ಸಂಪತ್ತನ್ನು ಇಲ್ಲಿಯವರೆಗೂ ಜಮ್ಮು-ಕಾಶ್ಮೀರದವರು ಕೊಳ್ಳೆ ಹೊಡೆಯುತ್ತಿದ್ದುದಕ್ಕೆ ಈಗ ಕಡಿವಾಣ ಹಾಕಲಾಗಿದೆ. ದಲಿತರು, ಹಿಂದುಳಿದವರಿಗೆ ಮೀಸಲಾತಿ, ಮಹಿಳೆಯರಿಗೆ ರಕ್ಷಣೆ ಸಿಗಲಿದೆ ಎಂದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಷಾ ಐತಿಹಾಸಿಕ ತೀರ್ಪು ತೆಗೆದುಕೊಂಡಿರುವ ಬಗ್ಗೆ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. 370ನೇ ವಿಧಿ ರದ್ದುಪಡಿಸಿರುವುದರಿಂದ ಆ ಭಾಗದ ಜನರಿಗೆ ಆಗಿರುವ ಅನ್ಯಾಯ ಸರಿಪಡಿಸಿದಂತಾಗುತ್ತದೆ ಎಂದರು.

ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್‌, ಜಿಲ್ಲಾಪ್ರಧಾನ ಕಾರ್ಯದರ್ಶಿ ಮುರಳಿ, ಒಂದು ದೇಶ ಒಂದು ಸಂವಿಧಾನ ಅಭಿಯಾನ ಸಂಚಾಲಕರಾದ ರಾಜೇಶ್‌ ಬುರುಡೆಕಟ್ಟೆ, ದಗ್ಗೆಶಿವಪ್ರಕಾಶ್‌, ವಕ್ತಾರ ನಾಗರಾಜ್‌ಬೇದ್ರೆ, ಜಿತೇಂದ್ರ, ಸುರೇಶ್‌ಸಿದ್ದಾಪುರ, ನರೇಂದ್ರ, ಎಂ.ಎ.ಸೇತೂರಾಂ, ಮೋಹನ್‌, ಸಂಪತ್‌, ಶ್ಯಾಮಲ ಶಿವಪ್ರಕಾಶ್‌ ಮತ್ತಿತರರು ಭಾಗವಹಿಸಿದ್ದರು.

ಹೋರಾಟಕ್ಕೆ ಜಯ

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌.ನವೀನ್‌ ಮಾತನಾಡಿ, 'ಕಳೆದ ಎಪ್ಪತ್ತು ವರ್ಷಗಳಿಂದಲೂ 370 ವಿಧಿ ರದ್ದಿಗಾಗಿ ನಡೆಸುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಇದೊಂದು ಐತಿಹಾಸಿಕ ನಿರ್ಣಯ. ಭಾರತದ ಪ್ರತಿಯೊಬ್ಬ ಪ್ರಜೆಯೂ ಮೋದಿಯನ್ನು ಗೌರವಿಸುತ್ತಿದ್ದಾರೆ. ಜಾಗತಿಕವಾಗಿಯೂ ಪ್ರಶಂಸೆ ವ್ಯಕ್ತವಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ