ಆ್ಯಪ್ನಗರ

ಭಾರತೀಯರೆ ಹೃದ್ರೋಗಕ್ಕೆ ಹೆಚ್ಚು ಬಲಿ

ಹೃದ್ರೋಗಕ್ಕೆ ಬಲಿ ಆಗುವವರಲ್ಲಿ ಭಾರತೀಯರೆ ಅತಿ ಹೆಚ್ಚಾಗಿದ್ದು, ಇದು ನಿಜಕ್ಕೂ ಆತಂಕಕಾರಿ ಸಂಗತಿ ಎಂದು ಪ್ರಕೃತಿ ಮತ್ತು ಯೋಗ ವೈದ್ಯ ಡಾ. ವೆಂಕಟರಮಣ ಹೆಗಡೆ ತೀವ್ರ ಕಳವಳ ವ್ಯಕ್ತಪಡಿಸಿರು.

Vijaya Karnataka 20 Dec 2018, 5:00 am
ಚಿತ್ರದುರ್ಗ : ಹೃದ್ರೋಗಕ್ಕೆ ಬಲಿ ಆಗುವವರಲ್ಲಿ ಭಾರತೀಯರೆ ಅತಿ ಹೆಚ್ಚಾಗಿದ್ದು, ಇದು ನಿಜಕ್ಕೂ ಆತಂಕಕಾರಿ ಸಂಗತಿ ಎಂದು ಪ್ರಕೃತಿ ಮತ್ತು ಯೋಗ ವೈದ್ಯ ಡಾ. ವೆಂಕಟರಮಣ ಹೆಗಡೆ ತೀವ್ರ ಕಳವಳ ವ್ಯಕ್ತಪಡಿಸಿರು.
Vijaya Karnataka Web indians suffer from heart disease
ಭಾರತೀಯರೆ ಹೃದ್ರೋಗಕ್ಕೆ ಹೆಚ್ಚು ಬಲಿ


ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬದಲಾದ ಆಹಾರ ಹಾಗೂ ಜೀವನ ಕ್ರಮದಿಂದ ಆರೋಗ್ಯದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 10ರಷ್ಟು ಜನ ಪ್ರತಿ ವರ್ಷ ಮರಣ ಹೊಂದುತ್ತಾರೆ. ಇವರಲ್ಲಿ ಶೇಕಡ 50ರಷ್ಟು ಮಂದಿ ಹೃದ್ರೋಗ ಹಾಗೂ ಲಕ್ವದಿಂದ ಸಾವನ್ನಪ್ಪುತ್ತಿರುವುದು ಆತಂಕದ ವಿಷಯ ಎಂದರು.

ಇಂದಿನ ದಿನಗಳಲ್ಲಿ ಮಧುಮೇಹ ಜನರಲ್ಲಿ ಹೆಚ್ಚಾಗುತ್ತಿದೆ. ನಿತ್ಯ ಸೇವಿಸುವ ಆಹಾರದಲ್ಲಿ ಅತಿಹೆಚ್ಚು ಸಕ್ಕರೆ ಅಂಶ ದೇಹ ಸೇರುತ್ತಿದೆ. ಕರಿದ ಎಣ್ಣೆಯನ್ನು ಪುನಃ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ನಿಯಮಿತ ಆಹಾರ. ಯೋಗ, ವ್ಯಾಯಾಮದಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯವಿದೆ ಎಂದು ಹೇಳಿದರು.

ವೈದ್ಯ ಡಾ.ಪ್ರವೀಣ್‌ ಮಾತನಾಡಿ, ಜಗತ್ತಿನಲ್ಲೇ ಅತಿ ಕಡಿಮೆ ಕೊಬ್ಬಿನಾಂಶ ಹೊಂದಿದವರು ಎಂದರೆ ಭಾರತೀಯರು. ಆದರೂ, ಹೃದ್ರೋಗ ಕಾಯಿಲೆಯಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಹೊಟ್ಟೆಯಲ್ಲಿ ಬೆಳೆಯುವ ಬೊಜ್ಜು ಹೃದ್ರೋಗಕ್ಕೆ ಕಾರಣವಾಗುತ್ತಿದೆ. ಬೊಜ್ಜು ಬೆಳೆಯದಂತೆ ಎಚ್ಚರವಹಿಸಿದರೆ ಆರೋಗ್ಯಕರ ಜೀವನ ಸಾಗಿಸಬಹುದು ಎಂದು ಸಲಹೆ ನೀಡಿದರು.

ಇದೇ ವೇಳೆ ಪ್ರಕೃತಿ ಮತ್ತು ಯೋಗ ವೈದ್ಯ ಡಾ.ವೆಂಕಟರಮಣ ಹೆಗಡೆ ಬಾಳೆಕಾಯಿಂದ ತಯಾರಿಸಿದ ಚಿಫ್ಸ್‌ನ್ನು ಬೆಂಕಿಯಲ್ಲಿ ಸುಡುವ ಮೂಲಕ ಅಗತ್ಯಕ್ಕೂ ಹೆಚ್ಚಿನ ಕೊಬ್ಬಿನಾಂಶ ಹೊಂದಿರುವ ಬಗೆಯನ್ನು ಪ್ರಕೃತಿ ಮತ್ತು ಪ್ರಾತ್ಯಕ್ಷಿಕೆ ತೋರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ