ಆ್ಯಪ್ನಗರ

ಕನಕದಾಸರು ಒಂದು ಜಾತಿಗೆ ಸೀಮಿತ ಅಲ್ಲ

ಕನಕದಾಸರು ಒಂದು ಜಾತಿಗೆ ಸೀಮಿತವಲ್ಲ. ಅವರ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಮೇಲುಕೀಳನ್ನು ತೊರೆದು ಸರ್ವರಲ್ಲಿ ಆಧ್ಯಾತ್ಮಿಕ ಭಾವನಾತ್ಮಕ ನೆಮ್ಮದಿಗೆ ತಳಪಾಯ ಹಾಕಿದ ಮಾನವತಾವಾದಿ. ಅವರ ಹಾದಿಯಲ್ಲಿ ನಾವೆಲ್ಲ ನಡೆಯಬೇಕಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

Vijaya Karnataka 17 Dec 2018, 5:00 am
ಚಳ್ಳಕೆರೆ : ಕನಕದಾಸರು ಒಂದು ಜಾತಿಗೆ ಸೀಮಿತವಲ್ಲ. ಅವರ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಮೇಲುಕೀಳನ್ನು ತೊರೆದು ಸರ್ವರಲ್ಲಿ ಆಧ್ಯಾತ್ಮಿಕ ಭಾವನಾತ್ಮಕ ನೆಮ್ಮದಿಗೆ ತಳಪಾಯ ಹಾಕಿದ ಮಾನವತಾವಾದಿ. ಅವರ ಹಾದಿಯಲ್ಲಿ ನಾವೆಲ್ಲ ನಡೆಯಬೇಕಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
Vijaya Karnataka Web kanakadasu is not limited to one species
ಕನಕದಾಸರು ಒಂದು ಜಾತಿಗೆ ಸೀಮಿತ ಅಲ್ಲ


ನಗರದ ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘದ ವಿದ್ಯಾರ್ಥಿನಿಲಯದ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಕುರುಬ ಸಮಾಜದಿಂದ ಭಾನುವಾರ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನಕದಾಸರು ದೇವಾಲಯ ನಿರ್ಮಾಣ ಕಾಲದಲ್ಲಿ ಭೂಮಿಯಲ್ಲಿ ಸಿಕ್ಕಿದ ನಿಧಿಯನ್ನು ಸಮಾಜೋದ್ದಾರ ಕಾರ್ಯಗಳಿಗೆ ಜೀವನ ಮುಡಿಪಿಟ್ಟು ಸಾಮಾಜಿಕ, ಭಾವನಾತ್ಮಕ ಅಸೃಶ್ಯತೆ ತೊಲಗಿಸುವ ನಿಟ್ಟಿನಲ್ಲಿ ಕುಲ ಕುಲವೆಂದು ಹೊಡೆದಾಡದಿರಿ, ನಿನ್ನ ಕುಲದ ನೆಲೆಯನ್ನಾದರೂ ಬಲ್ಲಿರ, ಗಂಗೆಯ ಕುಲ ಯಾವುದು, ಭೂಮಿಯ ಕುಲಯಾವುದಯ್ಯ ಎಂದು ಜನ ಸಾಮಾನ್ಯರಲ್ಲಿ ಜಾತಿ ಧರ್ಮಗಳ ಮೇಲುಕೀಳು ಭಾವನೆ ತೊಲಗಿಸಲು ಜೀವನ ತ್ಯಾಗ ಮಾಡಿದ ಕನಕದಾಸರಾಗಿದ್ದರು ಎಂದರು.

ಉಪನ್ಯಾಸ ನೀಡಿದ ಪ್ರೊ. ಎಂ.ಶಿವಲಿಂಗಪ್ಪ, ಕನಕದಾಸರು ಜಾತಿ ಮತಗಳ ಮೀರಿ ಸಾಮಾಜಿಕ ಮೌಢ್ಯತೆ, ಶæೖಕ್ಷ ಣಿಕ ಪ್ರಗತಿ ಆರ್ಥಿಕವಾಗಿ ಬೌಧಿಕವಾಗಿ ಹಿಂದುಳಿದವರು ಮುನ್ನೆಲೆಗೆ ಬರಬೇಕೆಂದು ಸಮಾಜದ ಏಳಿಗೆಗೆ ದುಡಿದು ಮಡಿದವರು ಕನಸುಗಳು ಅನನ್ಯ ಕುರುಬ ಸಮಾಜದಲ್ಲಿ ದಾಸರು ಜನಿಸಿದ್ದರು. ಅವರು ಯಾವತ್ತು ಸಮಾಜಕ್ಕೆ ಗಂಟು ಬಿದ್ದವರಲ್ಲ ಕನಕದಾಸ ಎಂದರೆ ಆಧ್ಯಾತ್ಮಿಕ ಚಿಂತನೆ ಸಾರುವ ಸಾರೋಟಿ ಎಂದೆ ಕೀರ್ತಿ ಪಡೆದವರು ಎಂದು ತಿಳಿಸಿದರು.

ಜಿಪಂ ಸದಸ್ಯೆ ಶಶಿಕಲ ಸುರೇಶ್‌ಬಾಬು, ತಾಪಂ ಅಧ್ಯಕ್ಷೆ ಕವಿತ, ಸದಸ್ಯರಾದ ರಂಜಿತ, ಉಮಾ, ನಗರಸಭೆ ಸದಸ್ಯರಾದ ಎಂ.ಜೆ.ರಾಘವೇಂದ್ರ, ಬಿ.ಟಿ.ರಮೇಶ್‌, ಸುಮಾ, ಟಿ.ಕವಿತನಾಯಕಿ, ಸುಮಕ್ಕ, ಸಿ.ಕವಿತ, ಸುಜಾತ, ಮುಖಂಡರಾದ ಎಂ.ಮಲ್ಲೇಶಪ್ಪ, ಎನ್‌.ಜಯರಾಂ, ಕಂದಿಕೆರೆಸುರೇಶ್‌ಬಾಬು, ವಿ.ರಾಜಣ್ಣ,ಕೆ.ಜಗದೀಶ್‌, ಕವಿತಮಹೇಶ್‌, ಬಸವರಾಜು, ಟಿ.ಶಂಕರಪ್ಪ, ಪಾತಲಿಂಗಪ್ಪ, ಸುನಂದಮ್ಮ, ಎಲ್‌.ರುದ್ರಮುನಿ, ಚಂದ್ರಣ್ಣ, ತಹಸೀಲ್ದಾರ್‌ ಎಂ.ಮಲ್ಲಿಕಾರ್ಜುನ, ಇಒ ಈಶ್ವರಪ್ಪರಸಾದ್‌, ಬಿಇಒ ವೆಂಕಟೇಶಪ್ಪ, ಬಿಸಿಎಂ ಅಧಿಕಾರಿ ಡಿ.ಟಿ.ಜಗನ್ನಾಥ್‌ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ