ಆ್ಯಪ್ನಗರ

ಕಾಟಮಹಲಿಂಗೇಶ್ವರ-ಮಾಳಮ್ಮದೇವಿಗೆ ಬೆಳಾರತಿ

ಕಡೇಶ್ರಾವಣ ಸೋಮವಾರದ ಅಂಗವಾಗಿ ತಾಲೂಕಿನ ಚಿಲ್ಲಹಳ್ಳಿ ಗ್ರಾಮದ ಶ್ರೀಕಾಟಮಹಲಿಂಗೇಶ್ವರಸ್ವಾಮಿಗೆ ಸೋಮವಾರ ಹಾಗೂ ಶ್ರೀ ಮಾಳಮ್ಮದೇವಿಗೆ ಮಂಗಳವಾರ ಬೆಳಾರತಿ (ಬೇಳೆಕಾಳುಗಳ ಮೊಳಕೆಯಿಂದ ಮಾಡಿದ ಆರತಿ) ಸೇವೆ ಸಲ್ಲಿಸಲಾಯಿತು.

Vijaya Karnataka 5 Sep 2018, 5:00 am
ಹಿರಿಯೂರು : ಕಡೇಶ್ರಾವಣ ಸೋಮವಾರದ ಅಂಗವಾಗಿ ತಾಲೂಕಿನ ಚಿಲ್ಲಹಳ್ಳಿ ಗ್ರಾಮದ ಶ್ರೀಕಾಟಮಹಲಿಂಗೇಶ್ವರಸ್ವಾಮಿಗೆ ಸೋಮವಾರ ಹಾಗೂ ಶ್ರೀ ಮಾಳಮ್ಮದೇವಿಗೆ ಮಂಗಳವಾರ ಬೆಳಾರತಿ (ಬೇಳೆಕಾಳುಗಳ ಮೊಳಕೆಯಿಂದ ಮಾಡಿದ ಆರತಿ) ಸೇವೆ ಸಲ್ಲಿಸಲಾಯಿತು.
Vijaya Karnataka Web katamahilingeswara malamadevi is the belarathi
ಕಾಟಮಹಲಿಂಗೇಶ್ವರ-ಮಾಳಮ್ಮದೇವಿಗೆ ಬೆಳಾರತಿ


ಅಪ್ಪಟ ದೇಸೀ ವಿಧಾನದಲ್ಲಿ ಆಚರಿಸುವ ಅನ್ನದಾತರ ಪೂಜೆ ವಿಧಾನ. ಆರತಿ ಮಾಡುವಾಗ ಸಾಮಾನ್ಯವಾಗಿ ತಂಬಿಟ್ಟಿನಿಂದ ಆರತಿ ಕಟ್ಟುವುದು ವಾಡಿಕೆ. ಆದರೆ ಶ್ರೀಕಾಟಮಹಲಿಂಗೇಶ್ವರ ಸ್ವಾಮಿಗೆ ಬೇಳೆಕಾಳುಗಳ ಮೊಳಕೆಯಿಂದ ಆರತಿ ಸೇವೆಯೇ ಆಗಬೇಕು.

ಸೋಮವಾರ ಹದಿನಾರು ಕಿಮೀ ಅಂತರದ ಕೂಡ್ಲಹಳ್ಳಿ ಗ್ರಾಮದ ಶ್ರೀ ಸಂಗಮನಾಥಸ್ವಾಮಿ ಸನ್ನಿಧಿಯಲ್ಲಿ ವೇದಾವತಿ ನದಿ-ಸುವರ್ಣಮುಖಿ ನದಿಗಳ ಸಂಗಮ ಸ್ಥಳದಲ್ಲಿ ಕಾಟಮಹಲಿಂಗೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ಗಂಗಾಪೂಜೆ ನೆರವೇರಿಸಲಾಯಿತು. ಸಂಜೆ ಚಿಲ್ಲಹಳ್ಳಿಯಲ್ಲಿ ಸುಮಂಗಲಿಯರು ಬೆಳಾರತಿ ಸೇವೆ ಸಲ್ಲಿಸಿದ ನಂತರ ಪುರುಷರು ಮಣೇವು ಸೇವೆ ನೆರವೇರಿಸಿದರು. ಮಂಗಳವಾರ ಶ್ರೀ ಮಾಳಮ್ಮದೇವಿಗೆ ಬೆಳಾರತಿ ಸೇವೆ ನೆರವೇರಿತು. ಸಂಜೆ ಗ್ರಾಮದ ಎಲ್ಲಾ ಜಾತಿ ಧರ್ಮದವರು ಸೇರಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ವ್ಯವಸ್ಥೆ ಕಲ್ಪಿಸಿದ್ದರು.

ಶ್ರಾವಣ ಸೋಮವಾರದ ಅಂಗವಾಗಿ ಗ್ರಾಮದಲ್ಲಿ ತಳಿರು ತೋರಣ, ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ