ಆ್ಯಪ್ನಗರ

DK Shivakumar- ಶ್ರೀರಾಮುಲು ಮೊದಲು ಬಳ್ಳಾರಿ ಇಂಟರ್ನಲ್ ಸರಿಮಾಡಿಕೊಳ್ಳಲಿ: ಡಿ.ಕೆ.ಶಿವಕುಮಾರ್ ಟಾಂಗ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪರಿಸ್ಥಿತಿ ಒಂದು ರೀತಿ ಚಿರತೆಗಳಂತೆ ಆಗಿಬಿಟ್ಟಿವೆ. ಅವರಿಬ್ಬರಿಗೆ ಒಂದೇ ಚಿಂತೆ. ಅದು ಮುಖ್ಯಮಂತ್ರಿ ಖುರ್ಚಿಯ ಚಿಂತೆ. ಎರಡು ಚಿರತೆಗಳಿಗೆ ಪೈಪೋಟಿ ನಡೆಸಿವೆ ಎಂy ಸಾರಿಗೆ ಸಚಿವ ಶ್ರೀರಾಮುಲು ವ್ಯಂಗ್ಯಕ್ಕೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಸಚಿವ ಶ್ರೀರಾಮುಲು ಅವರು ಬಳ್ಳಾರಿ ಇಂಟರ್ನಲ್ ಸರಿ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

Edited byGanesh | Vijaya Karnataka Web 29 Nov 2022, 12:00 am

ಹೈಲೈಟ್ಸ್‌:

  • ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವುದನ್ನು ನೋಡಿಕೊಳ್ಳಲಿ ಎಂದು ಸಚಿವ ಶ್ರೀರಾಮುಲುಗೆ ಡಿ.ಕೆ.ಶಿವಕುಮಾರ್ ಟಾಂಗ್
  • ಸಿ.ಟಿ.ರವಿ ಚುನಾವಣೆ ಸಮಯದಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆಂದು ಡಿಸಿಪಿ ಮತ್ತು ಸಿಎಂಗೆ ದೂರು ನೀಡುತ್ತೇವೆ
  • ಬಿಜೆಪಿ ತನ್ನ ಭ್ರಷ್ಟಾಚಾರ, ಮತ ಕಳವು, ದಿವಾಳಿ ಆಡಳಿತ ಮುಚ್ಚಿಟ್ಟುಕೊಳ್ಳಲು ಸಿ.ಟಿ.ರವಿ ಈ ತರಹದ ಹೇಳಿಕೆ ನೀಡುತ್ತಿದ್ದಾರೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web DKS
ಡಿ.ಕೆ.ಶಿವಕುಮಾರ್
ಚಿತ್ರದುರ್ಗ: ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಅದನ್ನು ನೋಡಿಕೊಳ್ಳಲಿ ಹಾಗೂ ಬಳ್ಳಾರಿಯಲ್ಲಿ ಅವರ ಪಕ್ಷದ ಆಂತರಿಕ ಸಮಸ್ಯೆಗಳನ್ನು ಸರಿ ಮಾಡಿಕೊಳ್ಳಲಿ ಎಂದು ಸಚಿವ ಶ್ರೀರಾಮುಲು(Sriramulu) ಗೆ ಡಿಕೆ ಶಿವಕುಮಾರ್(DK Shivakumar) ಟಾಂಗ್ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaih) ಅವರ ಪರಿಸ್ಥಿತಿ ಒಂದು ರೀತಿ ಚಿರತೆಗಳಂತೆ ಆಗಿಬಿಟ್ಟಿವೆ. ಅವರಿಬ್ಬರಿಗೆ ಒಂದೇ ಚಿಂತೆ. ಅದು ಮುಖ್ಯಮಂತ್ರಿ ಖುರ್ಚಿಯ ಚಿಂತೆ. ಎರಡು ಚಿರತೆಗಳಿಗೆ ಪೈಪೋಟಿ ನಡೆಸಿವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದರು. ಈ ಬಗ್ಗೆ ಚಿತ್ರದುರ್ಗ ತಾಲೂಕಿನ ಕ್ಯಾದಿಗೆರೆಯ ಹೆಲಿಪ್ಯಾಡ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸಚಿವ ಶ್ರೀರಾಮುಲು ಅವರು ಬಳ್ಳಾರಿ ಇಂಟರ್ನಲ್ ಸರಿ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಗೂಳಿ ಕಾಳಗ ನಡೀತಿದೆ : ಶ್ರೀರಾಮುಲು ಲೇವಡಿ

ಇನ್ನು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಹಿಂದೂಗಳ ಸರಣಿ ಹತ್ಯೆ ಆಗುತ್ತದೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ ಬಗ್ಗೆಯೂ ಕಿಡಿಕಾರಿದ ಅವರು, ಸಿ.ಟಿ. ರವಿ(CT Ravi) ವಿರುದ್ಧ ಡಿಸಿಪಿ ಹಾಗೂ ಸಿಎಂಗೆ ಕಾಂಗ್ರೆಸ್ ದೂರು ನೀಡಲಿದೆ ಎಂದು ಹೇಳಿದರು. ಸಿ.ಟಿ.ರವಿ ಚುನಾವಣೆ ಸಮಯದಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆಂದು ದೂರು ನೀಡುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.

ಬಿಜೆಪಿ ಭ್ರಷ್ಟಾಚಾರ, ಮತ ಕಳವು, ದಿವಾಳಿ ಆಡಳಿತ ಮುಚ್ಚಿಟ್ಟುಕೊಳ್ಳಲು ಸಿ.ಟಿ.ರವಿ ಈ ತರಹದ ಹೇಳಿಕೆ ನೀಡಿ, ಹಳ್ಳಿ ಹಳ್ಳಿಯಲ್ಲೂ ಕೋಮು ಗಲಭೆ ನಡೆಯುತ್ತಿದೆ ಎಂದರು.

ನಮಗೆ ರಾಜ್ಯದ ಜನತೆ ಖುಷಿ ಪಡಿಸಬೇಕು, ಆ ‌ನಿಟ್ಟಿನಲ್ಲಿ ಅಧಿಕಾರಕ್ಕೆ ಬರಬೇಕು. ಹಾಗಾಗಿ ಜನರಿಗೆ ಉತ್ತಮ ಆಡಳಿತ ನೀಡಲು ನಾವು ಅಧಿಕಾರ ಹಿಡಿಯಬೇಕು ಎಂದು ಹೇಳಿದರು. ಇನ್ನು ಚಾಮರಾಜಪೇಟೆಯಲ್ಲಿ ರೌಡಿ ಶೀಟರ್ ಸೈಲೆಂಟ್ ಸುನೀಲ್ ಜೊತೆ ಬಿಜೆಪಿ ನಾಯಕರು ಎಂದು ಪ್ರಶ್ನೆಗೆ ಅದು ಬಿಜೆಪಿ ಸಂಸ್ಕೃತಿ ತೋರಿಸುತ್ತದೆ ಎಂದರು.

ಡಿಕೆಶಿ ಆಗಮನ ವೇಳೆ ಕಳ್ಳರ ಕೈಚಳಕ

ದೊಡ್ಡ ದೊಡ್ಡ ರಾಜಕೀಯ ಸಮಾವೇಶಗಳಲ್ಲಿ, ಮೆರವಣಿಗೆಯ ವೇಳೆ ಜೇಬುಗಳ್ಳತನವಾಗುವುದು ಹೊಸತೇನಲ್ಲ. ಜನ ಸೇರುವ ಸಂದರ್ಭಗಳನ್ನೇ ಕಾದು ಕುಳಿತಕೊಳ್ಳುವ ಜೇಬುಗಳ್ಳರು ಆಗೀಗ ತಮ್ಮ ಕೈಚಕಳ ತೋರಿಸುತ್ತಿರುವ ಘಟನೆಗಳು ನಡೆಯುತ್ತಿರುತ್ತವೆ. ಭಾನುವಾರ ಡಿ.ಕೆ.ಶಿವಕುಮಾರ್ ಅವರ ಚಿತ್ರದುರ್ಗ ಭೇಟಿಯ ಸಂದರ್ಭದಲ್ಲೂ ಇಂತಹದ್ದೇ ಘಟನೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರ ಜೇಬುಗಳಿಗೆ ಕತ್ತರಿ ಹಾಕಿದ ಖದೀಮರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Indian Constitution Day: ಸಂವಿಧಾನವೇ ನಮ್ಮ ದೇಶದ ಮಹಾಗ್ರಂಥ: ಡಿ ಕೆ ಶಿವಕುಮಾರ್

ಚಿತ್ರದುರ್ಗಕ್ಕೆ ಬರುತಿದ್ದ ಡಿ.ಕೆ.ಶಿವಕುಮಾರ್ ಅವರ ಬರುವಿಕೆಯನ್ನು ಎದುರು ನೋಡುತ್ತಿದ್ದ ವೇಳೆ ಜೇಬಿಗಳಿಗೆ ಕತ್ತರಿ ಹಾಕಲಾಗಿದೆ. ವಿಶ್ವನಾಥ್ ರೆಡ್ಡಿ 10 ಸಾವಿರ, ಮತ್ತೊಬ್ಬ ಕಾರ್ಯಕರ್ತನ 6 ಸಾವಿರ, ಚಂದ್ರಣ್ಣಅವರ ನಾಲ್ಕು ಚೆಕ್ ಅನ್ನು ಕಳ್ಳರು ಎಗರಿಸಿದ್ದಾರೆ. ಇನ್ನು ಕಾಂಗ್ರೆಸ್ ಕಾರ್ಯಕರ್ತರು ಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಡಿಕೆಶಿ ಹೆಲಿಕಾಪ್ಟರ್ ನಲ್ಲಿ ಬಂದು ಮಾದ್ಯಮದವರ ಬಳಿ ಮಾತಾನಾಡಿ ತೆರಳುವ ವೇಳೆಯಲ್ಲಿ ಜೇಬುಗಳಿಗೆ ಕತ್ತರಿ ಹಾಕಿದ ಕಳ್ಳರು. ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಲೇಖಕರ ಬಗ್ಗೆ
Ganesh

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ