ಆ್ಯಪ್ನಗರ

ಬಡ ಮಕ್ಕಳಿಗೆ ನೆರವು ನೀಡಲಿ

ನೌಕರರ ವರ್ಗ ಜನಾಂಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷ ಣಕ್ಕೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಬೇಕು ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.

Vijaya Karnataka 29 Jul 2019, 5:00 am
ಹೊಸದುರ್ಗ : ನೌಕರರ ವರ್ಗ ಜನಾಂಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷ ಣಕ್ಕೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಬೇಕು ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.
Vijaya Karnataka Web let them help poor children
ಬಡ ಮಕ್ಕಳಿಗೆ ನೆರವು ನೀಡಲಿ


ಪಟ್ಟಣದ ಡಾ. ಬಾಬು ಜಗಜೀವನರಾಮ್‌ ಸಮುದಾಯ ಭವನದಲ್ಲಿ ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘದಿಂದ ಭಾನುವಾರ ನಡೆದ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಭೆ ಗುರುತಿಸಿ ಪುರಸ್ಕರಿಸುತ್ತಿರುವುದು ಖುಷಿಯ ವಿಚಾರ. ಈಗ ಪ್ರಪಂಚ ನಿರೀಕ್ಷಿಸುತ್ತಿರುವ ಶಿಕ್ಷ ಣವನ್ನು ಮಕ್ಕಳಿಗೆ ಕಲಿಸಬೇಕಿದೆ. ಇವತ್ತು ವಿದ್ಯಾಭ್ಯಾಸಕ್ಕೆ ವಿಫುಲ ಅವಕಾಶ ಮತ್ತು ಸೌಲಭ್ಯಗಳಿಗೆ ಅವುಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕು. ಜನಪ್ರತಿನಿಧಿಗಳು ಐದು ವರ್ಷ ಜನರ ಸೇವೆ ಸಲ್ಲಿಸಿದರೆ, ಅಧಿಕಾರಿಗಗಳು ಸುಮಾರು 30 ವರ್ಷ ದೇಶ ಮತ್ತು ಜನಾಂಗಕ್ಕೂ ಸೇವೆ ಸಲ್ಲಿಸುವಂಥ ಅವಕಾಶವನ್ನು ವಿದ್ಯಾರ್ಥಿಗಳನ್ನು ಪಡೆದುಕೊಳ್ಳಬೇಕು ಎಂದರು.

ಹಿರಿಯೂರು ಆದಿಜಾಂಬವ ಶಾಖಾಮಠದ ಶ್ರೀ ಷಡಾಕ್ಷ ರಿಮುನಿ ಸ್ವಾಮೀಜಿ ಮಾತನಾಡಿ, ರಾಜಕಾರಣಿಗಳು, ಅಧಿಕಾರಿಗಳಿಗೆ ಮಾತ್ರ ಇಚ್ಚಾಶಕ್ತಿ ಇದ್ದರೆ ಸಾಲದು, ವಿದ್ಯಾರ್ಥಿಗಳಿಗೂ ಅದು ರೂಢಿಯಾಗಬೇಕು. ಮುಂದಿನ ಶಿಕ್ಷ ಣಕ್ಕೆ ಪ್ರೋತ್ಸಾಹಿಸಲು ಪುರಸ್ಕಾರ ಮಾಡಲಾಗುತ್ತಿದೆಯೇ ಹೊರೆತು ಅಂಕಗಳಿಕೆಯೇ ಸಾಧನೆಯಲ್ಲ. ಬದುಕನ್ನು ಪ್ರಬುದ್ಧ್ದವಾಗಿ ಕಟ್ಟಿಕೊಳ್ಳುವವರೇ ನಿಜವಾದ ಪ್ರತಿಭೆ. ಸಂಸದ ನಾರಾಯಣಸ್ವಾಮಿ ಶ್ರೀಮಠದ ಅಭಿವೃದ್ಧ್ದಿಗೆ ಸಚಿವರಾಗಿದ್ದ ಸಮಯದಲ್ಲಿ 2 ಕೋಟಿ ರೂ. ಅನುದಾನ ನೀಡಿದ್ದರು ಎಂದು ಸ್ಮರಿಸಿದರು.

ಕೋಡಿಹಳ್ಳಿ ಆದಿಜಾಂಬವ ಮಠದ ಶ್ರೀ ಮಾರ್ಕಾಂಡೇಯ ಮುನಿಸ್ವಾಮೀಜಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಆದಷ್ಟು ಬೇಗ ಪೂರ್ಣಗೊಳಿಸುವುದರತ್ತ ಸಂಸದರು ಹೆಚ್ಚಿನ ಗಮನಹರಿಸಬೇಕು. ವಾಣಿವಿಲಾಸ ಜಲಾಶಯ ಭರ್ತಿಯಾದರೆ ಈ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಕ್ಷೇತ್ರದ ಎಲ್ಲ ವರ್ಗದ ಜನರಿಗೂ ಸಮಾನವಾಗಿ ಸವಲತ್ತುಗಳನ್ನು ಕೊಡುವ ಮೂಲಕ ಮಾದರಿ ಸಂಸದರಾಗಬೇಕು ಎಂದು ಕಿವಿಮಾತು ಹೇಳಿದರು.

ಸಾಹಿತಿ ಹೆಣ್ಣೂರು ಲಕ್ಷ್ಮೀ ನಾರಾಯಣ ಅಂಬೇಡ್ಕರ್‌ ಕುರಿತು ಉಪನ್ಯಾಸ ನೀಡಿದರು. ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ಜಿಲ್ಲಾಧ್ಯಕ್ಷ ಆರ್‌.ಮೂರ್ತಪ್ಪ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು.

ಈ ವೇಳೆ ಚಿತ್ರದುರ್ಗ ನಗರಸಭೆ ಆಯುಕ್ತ ಚಂದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ಡಿ.ಉಮೇಶ್‌, ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಲಿಂಗಪ್ಪ, ಮಾಜಿ ಸದಸ್ಯ ದೊಡ್ಡಘಟ್ಟ ಲಕ್ಷ ್ಮಣಪ್ಪ, ತಾಪಂ ಸದಸ್ಯೆ ಶಶಿಕಲಾ ಕೃಷ್ಣಮೂರ್ತಿ, ಮಾಜಿ ಸದಸ್ಯ ಮಲ್ಲಿಕಾರ್ಜುನ್‌, ಮಾದಿಗ ಸಮಾಜದ ಅಧ್ಯಕ್ಷ ತಿಪ್ಪಯ್ಯ, ಪುರಸಭೆ ಸದಸ್ಯ ದೊಡ್ಡಯ್ಯ, ಕಲಾವಿದ ಕಂಠೇಶ್‌, ಬಿಜೆಪಿ ಮುಖಂಡ ಗೂಳಿಹಟ್ಟಿ ಕೃಷ್ಣಮೂರ್ತಿ ಮತ್ತಿತರಿದ್ದರು.

**ಬಾಕ್ಸ್‌

ಲೋಕಸಭೆ ಚುನಾವಣೆ ವೇಳೆ ನನ್ನ ಕುರಿತು ಪರ ವಿರೋಧ ಚರ್ಚೆಗಳಾದವು. ನನ್ನನ್ನು ಕೆಲವರು ಗೂಂಡಾ, ಕೆಲಸಗಾರನಲ್ಲ, ಗೆದ್ದ ನಂತರ ಕ್ಷೇತ್ರ ಮರೆಯುತ್ತಾರೆ. ಸದಾಶಿವ ಆಯೋಗದ ಕರ್ತೃ ಎಂದೆಲ್ಲಾ ಮಾತನಾಡಿದರು. ಇದ್ಯಾವುದಕ್ಕೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಕ್ಷೇತ್ರದ ಜನ ಸಂಸದನಾಗಿ ಆಯ್ಕೆ ಮಾಡಿದ್ದಾರೆ. ನನಗೆ ಬಡತನ, ಹಸಿವು ತಿಳಿದಿದೆ. ನನ್ನದೇ ಆದ ಸ್ಟೈಲ್‌ನಲ್ಲಿ ಅಭಿವೃದ್ಧಿ ಕೆಲಸ ಮಾಡಿ ಜನರ ಮೆಚ್ಚುಗೆ ಗಳಿಸುತ್ತೇನೆ.

-ಎ.ನಾರಾಯಣಸ್ವಾಮಿ, ಸಂಸದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ